ಶ್ರೀಮುರಳಿ ಬರ್ತ್​ಡೇ, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ಯಾಕೆ ಏಕೆ ಗೊತ!

ರೋರಿಂಗ್ ಸ್ಟಾರ್ ಶ್ರೀಮುರಳಿ ಸದ್ಯ ಬಘೀರ ಸಿನಿಮಾದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಸಿನಿಮಾದ ಕೆಲಸ ಭರ್ಜರಿಯಾಗಿಯೇ ನಡೆಯುತ್ತಿದೆ. ಆದರೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂಹೊರ ಬಿದ್ದಿಲ್ಲ. ಆದರೂ ಬಘೀರ ಸಿನಿಮಾ ತಂಡ ಈಗೊಂದು ಪೋಸ್ಟರ್ ರಿಲೀಸ್ ಮಾಡುತ್ತಿದೆ.ಈ ಪೋಸ್ಟರ್ (Bageera poster) ರಿಲೀಸ್ ಮಾಡೋಕೆ ಒಂದು ಕಾರಣವೂ ಇದೆ. ಇನ್ನು ಈ ಸಿನಿಮಾದ ಕೆಲಸ ಏನೆಲ್ಲ ಆಗಿದೆ. ಚಿತ್ರದ ಚಿತ್ರಿಕರಣ (Srii Murali New Film) ಯಾವ ಹಂತಕ್ಕೆ ಇದೆ. ಏನೆಲ್ಲ ಇಲ್ಲಿವರೆಗೂ ಆಗಿದೆ. ಸಿನಿಮಾದ ಡೈರೆಕ್ಟರ್ ಡಾಕ್ಟರ್ ಸೂರಿ ಯಾಕೆ ಇನ್ನೂ ಏನೂ ಬಿಟ್ಟುಕೊಟ್ಟಿಲ್ಲ. ಎಲ್ಲ ಮಾಹಿತಿಯ ಒಂದು ಸ್ಟೋರಿ ಇಲ್ಲಿದೆ .ಹೀರೋ ಶ್ರೀಮುರಳಿ ಫ್ಯಾನ್ಸ್ ಬಳಿ ಕ್ಷಮೆ ಕೇಳಿದ್ಯಾಕೆ?ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಸಿನಿಮಾ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾದ ವಿಶೇಷತೆಗಳೇನು? ಅನ್ನೋದು ಕೂಡ ಕುತೂಹಲ ಮೂಡಿಸಿದೆ. ಈ ಸಿನಿಮಾ ಸೆಟ್ಟೇರಿದಾಗಿನಿಂದ ಸಿನಿಮಾ ಶುರು ಆಗಿದೆ ಅನ್ನೋ ಮಾಹಿತಿ ಮಾತ್ರ ಇದೆ.ಕನ್ನಡದ ಬಘೀರ ಚಿತ್ರದ ಅಪ್​ಡೇಟ್ಸ್ ಏನು?ಬಘೀರ ಸಿನಿಮಾದ ಕೆಲಸಗಳು ಏನೆಲ್ಲ ಆಗಿದೆ ಗೊತ್ತೇ.? ಹೌದು, ಬಘೀರ ಸಿನಿಮಾದ ಚಿತ್ರೀಕರಣ ಶುರು ಆಗಿದೆ. ಈ ಸಿನಿಮಾದ ಹೆಚ್ಚು ಕಡಿಮೆ ಶೇಕಡ 50 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.ಡಾಕ್ಟರ್ ಸೂರಿ ತಮ್ಮ ಈ ಚಿತ್ರವನ್ನ ಅದ್ಭುತವಾಗಿಯೇ ತೆಗೆಯುತ್ತಿದ್ದಾರೆ. ಈ ಮೊದಲೇ ಪ್ಲಾನ್​ ನಂತೆ ಸಿನಿಮಾದ ಯಾವ ವಿಷಯವನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಜನ್ಮ ದಿನಕ್ಕೆ ಬಘೀರ ಸಿನಿಮಾ ತಂಡ ಚಿತ್ರದ ಪೋಸ್ಟರ್ ರಿಲೀಸ್ ಮಾಡುತ್ತಿದೆ.“ಬಘೀರ”ನ ಜನ್ಮ ದಿನಕ್ಕೆ ಪೋಸ್ಟರ್ ರಿಲೀಸ್ಬಘೀರ ಚಿತ್ರದ ನಾಯಕ ನಟ ರೋರಿಂಗ್ ಸ್ಟಾರ್ ಜನ್ಮ ದಿನಕ್ಕೆ ಸಿನಿಮಾ ತಂಡ ಪೋಸ್ಟರ್ ರಿಲೀಸ್ ಮಾಡುತ್ತಿದೆ. ಈ ಮೂಲಕ ಸಿನಿಮಾ ತಂಡ ನಾಯಕ ನಟ ಶ್ರೀಮುರಳಿ ಅವರಿಗೆ ಬರ್ತ್ ಡೇ ಶುಭ ಹಾರೈಕೆ ಕೂಡ ಮಾಡುತ್ತಿದೆ.ಶ್ರೀಮುರಳಿ ಹುಟ್ಟುಹಬ್ಬದ ಸಡಗರ ಹೇಗಿದೆ?ರೋರಿಂಗ್ ಸ್ಟಾರ್ ಶ್ರೀಮುರಳಿ ಪ್ರತಿ ವರ್ಷ ಜನ್ಮ ದಿನ ಆಚರಿಸಿಕೊಂಡು ಬರ್ತಿದ್ದಾರೆ. ತಮ್ಮ ಮನೆ ಅಂಗಳಕ್ಕೆ ಬರುವ ಅಭಿಮಾನಿಗಳನ್ನ ಪ್ರೀತಿಯಿಂದಲೇ ಅಪ್ಪಿಕೊಂಡ ಜನ್ಮ ದಿನ ಸೆಲೆಬ್ರೇಟ್ ಮಾಡುತ್ತಾರೆ.ಆದರೆ ಈ ವರ್ಷ ಹಾಗೆ ಆಗುತ್ತಿಲ್ಲ. ಶ್ರೀಮುರಳಿ ತಮ್ಮ ಜನ್ಮ ದಿನವನ್ನ ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡದೇ ಇರಲು ಡಿಸೈಡ್ ಮಾಡಿದ್ದಾರೆ. ಕಾರಣ ಏನು ಅನ್ನೋದನ್ನ ಸ್ವತಃ ಶ್ರೀಮುರಳಿ ಅವರೇ ಹೇಳಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಲಾ ಕೊಠಡಿಗಳಲ್ಲಿ ಕುಡುಕರ ಹಾವಳಿ!

Sat Dec 17 , 2022
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ವಿದ್ಯಾ ಚೇತನ ಶಾಲಾ ಆವರಣದಲ್ಲಿನ ಶಾಲೆ ಮೌಲಾನಾ ಆಜಾದ ಮಾದರಿ ಶಾಲೆಯಲ್ಲಿ ಘಟನೆ.ಕುಡುಕರ ಗುಂಪು ಮದ್ಯಪಾನ ಮಾಡಿ ಎಲ್ಲೆಂದರಲ್ಲಿ ಬಾಟಲಿಗಳನ್ನು ಎಸೆದಿರುವದು.ಶಾಲಾ ಕೊಠಡಿಗಳಲ್ಲಿ ಬಿದ್ದಿರುವ ಬೀಡಿ, ಸಿಗರೇಟು ತ್ಯಾಜ್ಯಗಳನ್ನು ಎಸೆದು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಭಯ ಉಂಟಾಗುತ್ತಿದೆ.ಇಗಷ್ಟೇ ಉದ್ಘಾಟನೆಯಾದ ಮೌಲಾನಾ ಆಜಾದ ಮಾದರಿ ಶಾಲೆಯ ಕೊಠಡಿಗಳು.ಈ ಶಾಲೆಯ ಹಿಂಭಾಗದಲ್ಲಿ ಯಾವುದು ಕಂಪೌಂಡ ಇಲ್ಲಾ.ಇದೆ ದಾರಿಯಿಂದ ಬಂದು ದುಷ್ಕೃತ್ಯ ಮಾಡಿದ್ದ ದುಷ್ಕರ್ಮಿಗಳು.ದ್ವಾರದ ಚಿಲಕ ಮುರಿದು ಕೊಠಡಿ […]

Advertisement

Wordpress Social Share Plugin powered by Ultimatelysocial