ಕೋಟೆನಾಡು ಎಂದೇ ಪ್ರಸಿದ್ದವಾದ ಚಿತ್ರದುರ್ಗ ಇವತ್ತು ಒಂದೇ ದಿನ ಜಿಲ್ಲೆಯಲ್ಲಿ 20 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇಂದು ಕೋವಿಡ್ ಸೋಂಕು ಪತ್ತೆಯಾದ ವ್ಯಕ್ತಿಗಳೆಲ್ಲರೂ ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರಾಗಿದ್ದು ಇವರೆಲ್ಲರನ್ನೂ ಕ್ವಾರೆಂಟೈನ್ ನಲ್ಲಿಡಲಾಗಿತ್ತು. ಉತ್ತರಪ್ರದೇಶ ಮೂಲದ ಈ ಕಾರ್ಮಿಕರು ತಮಿಳುನಾಡಿನಿಂದ ಒಂದೇ ಲಾರಿಯಲ್ಲಿ 57 ಜನ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಮೇ. 20ರಂದು ಇವರನ್ನು ಚಳ್ಳಕೆರೆ ಬಳಿ ಚೆಕ್ ಪೋಸ್ಟ್ ನಲ್ಲಿ ತಡೆದು ಥರ್ಮಲ್ ಸ್ಕ್ರೀನಿಂಗ್ ಮಾಡಿ ಬಳಿಕ ಚಳ್ಳಕೆರೆಯ ಆದರ್ಶ ವಿದ್ಯಾಲಯ ಹಾಸ್ಟಲ್ ನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ನಂತರ ಅವರೆಲ್ಲರ ಗಂಟಲು ದ್ರವದ ಮಾದರಿಯನ್ನು ಪರಿಕ್ಷೆಗೆ ಒಳಪಡಿಸಲಾಗಿದ್ದ ವರದಿಯಲ್ಲಿ 25 ವರ್ಷದ ಲಾರಿ ಚಾಲಕನಿಗೆ ಕೊರೊನಾ ಪಾಸಿಟೀವ್ ಇರುವುದು ದೃಢಪಟ್ಟಿತ್ತು. ಅದೇ ರೀತಿ ಆತನ ಜೊತೆಯಿದ್ದ ಒಟ್ಟು 57 ಜನರಿಗೆ ಗಂಟಲು ಪರೀಕ್ಷೆಗೆ ಒಳಪಡಿಸಿ ಮಾದರಿಗಳನ್ನು ವರದಿಗಗಾಗಿ ಕಳುಹಿಸಿಕೊಡಲಾಗಿತ್ತು. ಒಟ್ಟು ಪರೀಕ್ಷೆಗೆ ಕಳಿಸಿದ್ದ 57 ಜನರ ಮಾದರಿಗಳ ಪೈಕಿ 20 ಜನರಿಗೆ ಕರೊನಾ ಸೋಂಕು ಪಾಸಿಟೀವ್ ಬಂದಿರುವುದು ದುರ್ಗದ ಜನರಲ್ಲಿ ಆತಂಕ ಮೂಡಿಸಿದೆ. ಆದ್ದರಿಂದ ಈ ಕೊರೊನಾ ಸೋಂಕು ಪೀಡಿತರನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.