ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪಡಕೋಟೆ ಐತಿಹಾಸಿಕವಾದ ಮಹತ್ವವುಳ್ಳ ಸ್ಥಳವಾಗಿದ್ದು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಊರು ತನ್ನದೆ ಆದ ಇತಿಹಾಸವನ್ನು ಹೊಂದಿದೆ.ಕೇವಲ ಐವತ್ತರಷ್ಟು ಮನೆಗಳಿದ್ದು ಇರುವ ಎಲ್ಲಾ ಮನೆಗಳು ಸುರಪುರ ಸಂಸ್ಥಾನದ ಅರಸರ ಕಾಲದಲ್ಲಿ ಮರಾಠ ಸೈನಿಕರ ವಂಶಸ್ಥರ ಮನೆಗಳಾಗಿವೆ.ಆದರೆ ಈಗ ಗ್ರಾಮದ ಸುತ್ತಲೂ ಇರುವ ಕೋಟೆಗಳು ಶಿಥಿಲಗೊಂಡು ಸಂಪೂರ್ಣ ಬೀಳುವ ಹಂತಕ್ಕೆ ತಲುಪಿವೆ. ಇದನ್ನು ಕಂಡ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡುಕೋಟೆ ಒಂದು ತಿಂಗಳುಗಳ ಕಾಲ ಪಡುಕೋಟೆ ಗ್ರಾಮದಲ್ಲಿದ್ದು ಶಿಥಿಲಗೊಂಡಿದ್ದ ಕೋಟೆಗಳನ್ನು ದುರಸ್ತಿಗೊಳಿಸಿ ಮರುಜೀವ ಕಲ್ಪಿಸಿದ್ದಾರೆ. ಅವರಿಗೆ ಸುರಪುರ ಸಂಸ್ಥಾನದ ವಂಶಸ್ಥರಾದ ರಾಜಾ ಕೃಷ್ಣಪ್ಪ ನಾಯಕರು ಸೇರಿದಂತೆ ತಾಲೂಕಿನ ಜನರು ಮೆಚ್ಚುಗೆ ವ್ಯಕ್ತಪಡೆಸಿದ್ದರೆ.