ಅಪ್ಪನಿಂದ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಬಾಲಕಿ

ಅಪ್ಪನಿಂದ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಬಾಲಕಿ: ತಪ್ಪಿಸಿಕೊಳ್ಳುವ ಭರದಲ್ಲಿ ಹಾರಿ ಸಾವು-ಬದುಕಿನ ನಡುವೆ ಹೋರಾಟ!

ಮುಂಬೈ: ಸ್ನೇಹಿತನ ಜತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಬಾಲಕಿಯೊಬ್ಬಳ ಮಾತನ್ನು ಅಪ್ಪ ಕೇಳಿದನೆಂದು, ಹೆದರಿ 6ನೇ ಮಹಡಿಯಿಂದ ಹಾರಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ವೆರ್ ಸೋವಾ ನಿವಾಸಿಯಾಗಿರುವ 16 ವರ್ಷದ ಬಾಲಕಿ ಈಗ ಸಾವು-ನೋವಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದಾಳೆ.

ಈಕೆ ಬದುಕುವ ಸಾಧ್ಯತೆ ತೀರಾ ಕಡಿಮೆ ಇರುವುದಾಗಿ ವೈದ್ಯರು ಹೇಳಿದ್ದಾರೆ.

ಆರನೇ ಮಹಡಿಯಲ್ಲಿ ವಾಸವಾಗಿರುವ ಈ ಬಾಲಕಿ ಗೆಳೆಯನ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಪ್ರೀತಿ-ಪ್ರೇಮದ ವಿಷಯ ಮಾತನಾಡುತ್ತಿದ್ದುದನ್ನು ಆಕೆಯ ತಂದೆ ಹೊರಗೆ ನಿಂತು ಕೇಳಿಸಿಕೊಂಡಿದ್ದಾರೆ. ಮಗಳಿಗೆ ಬೈಯುವ ನಿಟ್ಟಿನಲ್ಲಿ ಅವರು ಹತ್ತಿರ ಬಂದಿದ್ದಾರೆ. ಇದನ್ನು ನೋಡಿ ಬಾಲಕಿ ಭಯಗೊಂಡಿದ್ದಾಳೆ. ಅಪ್ಪ ಏನಾದರೂ ಮಾಡಿಬಿಡಬಹುದು ಎಂಬ ಭಯದಿಂದ ಅಲ್ಲಿಯೇ ಇದ್ದ ತಾಯಿಯ ಸೀರೆಯನ್ನು ಕಿಟಕಿಗೆ ಕಟ್ಟಿ ಅಲ್ಲಿಂದ ಇಳಿಯಲು ಪ್ರಯತ್ನಿಸಿದ್ದಾಳೆ. ಆದರೆ ಭಯದಲ್ಲಿ ಇಳಿಯುತ್ತಿದ್ದುದರಿಂದ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ.

ಕೂಡಲೇ ಸ್ಥಳೀಯರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹುಡುಗಿಯ ಬೆನ್ನುಮೂಳೆಗೆ ಗಂಭೀರ ಪೆಟ್ಟಾಗಿದ್ದು, ಬದುಕುವ ಸಾಧ್ಯತೆ ಕಡಿಮೆ ಇರುವುದಾಗಿ ವೈದ್ಯರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಿನ ಆಯಾಸಕ್ಕೆ ಮನೆ ʼಮದ್ದುʼ

Wed Dec 22 , 2021
ಬೆಳಿಗ್ಗೆ ಎದ್ದ ತಕ್ಷಣ ಆಯಾಸ, ಆಲಸ್ಯ ಎನ್ನುವವರು ಅನೇಕ ಮಂದಿ. ಇದಕ್ಕೆ ಅನೇಕ ಕಾರಣಗಳಿವೆ. ದೀರ್ಘ ಕಾಲದ ಅಸ್ವಸ್ಥತೆ, ನಿದ್ರಾಹೀನತೆ, ಕಳಪೆ ಆಹಾರ, ಥೈರಾಯ್ಡ್, ಅನಿಯಮಿತ ದಿನಚರಿಗಳು, ದೇಹದಲ್ಲಿ ಅತಿಯಾದ ಆಮ್ಲ ಇರುವುದು ಮುಖ್ಯ ಕಾರಣ. ಬಿಡುವಿಲ್ಲದ ಕೆಲಸದಿಂದಾಗಿ ಎಲ್ಲರಿಗೂ ಸುಸ್ತಾಗೋದು ಕಾಮನ್. ಆದ್ರೆ ರಾತ್ರಿ ಸುಖಕರ ನಿದ್ದೆ ಬಂದಿದ್ದರೂ ಕೆಲವೊಬ್ಬರಿಗೆ ಬೆಳಿಗ್ಗೆ ಆಯಾಸ ಕಾಣಿಸಿಕೊಳ್ಳುತ್ತದೆ. ಅಂತವರು ತಮ್ಮ ದಿನಚರಿಯಲ್ಲಿ ಹಾಗೂ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಲ್ಲಿ ಈ ಸಮಸ್ಯೆಯಿಂದ […]

Advertisement

Wordpress Social Share Plugin powered by Ultimatelysocial