ಕೊರೊನಾ ಮಾಹಾಮಾರಿಯ ರುದ್ರ ನರ್ತನ ಒಂದು ಕಡೆಯಾದರೆ ಮತ್ತೊಂದು ಕಡೆ ಜನರ ದೇವರ ಭಕ್ತಿಯೂ ನಿಂತಿಲ್ಲ. ಸದ್ಯ ಶ್ರಾವಣ ಮಾಸ ಶುರುವಾಗಿದೆ ದೈವ ಭಕ್ತಿಯು ತುಸು ಹೆಚ್ಚೇ ಎಂದರೆ ತಪ್ಪಲ್ಲ . ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸಂಭ್ರದ ಶ್ರಾವಣ. ಬಸವಣ್ಣನವರ ಐಕ್ಯ ಸ್ಥಳ ಹಾಗೂ ಸಂಗಮನಾಥನ ದರ್ಶನಕ್ಕೆ ಅನೇಕ ಭಕ್ತರು ತೆರಳಿ ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ಸಾಮಜಿಕ ಬಧ್ದತೆ ಆದ ಮಾಸ್ಕ್ ದಾರಣೆ ಹಾಗೂ ಸಾಮಾಜಿಕ ಅಂತರವನ್ನೂ ಪಾಲಿಸುತ್ತಿದ್ದಾರೆ. ಪ್ರತಿ ವರ್ಷ ಕೃಷ್ಣಾ. ಮಲಪ್ರಭಾ,ಘಟಪ್ರಭಾ ನದಿಯ ಸಂಗಮ ಸ್ಥಾನ ಕೂಡಲಸಂಗಮದಲ್ಲಿ ಭಕ್ತರ ಸ್ನಾನ ಮಾಡಲು ಕೊರೊನಾ ಹಿನ್ನಲೆಯಲ್ಲಿ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಅವಕಾಶ ನೀಡಿಲ್ಲ. ಒಟ್ಟಾರೆ ಕೊರೊನಾ ಸಂಕಟ್ಟದ ಮದ್ಯಯು ಜನರ ಭಕ್ತಿಗೆ ಮಾತ್ರ ಯಾವುದೇ ಕೊರತೆ ಕಂಡಿಲ್ಲ.
ಕೊರೊನಾ ಮಧ್ಯ ಶ್ರಾವಣದ ಸಂಭ್ರಮ
Please follow and like us: