ಪ್ರಧಾನಿ ಮೋದಿ ದೂರವಾಣಿ ಕರೆ,ಮಾಜಿ ಸಿಎಂ ಯಡಿಯೂರಪ್ಪಗೆ ಮೊಮ್ಮಗಳ ಸಾವಿನ ಸಂತಾಪ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ(B S Yediyurappa) ಅವ್ರ ಮೊಮ್ಮಗಳು(Granddaughter) ಸೌಂದರ್ಯ(30)(Soundarya) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಧ್ಯ ಪ್ರಧಾನಿ ಮೋದಿ ಯಡಿಯೂರಪ್ಪ ಅವ್ರಿಗೆ ಕರೆ ಮಾಡಿದ್ದು, ಸಂತ್ವಾನ ಹೇಳಿದ್ದಾರೆ.

ಹೌದು, ಮೊಮ್ಮಗಳ ಸಾವಿನ ದುಃಖದಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವ್ರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿದ್ದು, ಸಂತ್ವಾನ ಹೇಳಿದ್ದಾರೆ ಎನ್ನಲಾಗ್ತಿದೆ.

ಅಂದ್ಜಾಹೆ, ಡಾ.ಸೌಂಧರ್ಯ ಅವ್ರ ಮರಣೋತ್ತರ ಪರೀಕ್ಷೆಯನ್ನ ನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ‘ಸೌಂದರ್ಯ ಕುತ್ತಿಗೆ ಭಾಗದಲ್ಲಿ ಮಾರ್ಕ್‌ ಇದೆ. ಅದು ಬಿಟ್ಟರೇ ಬೇರೆ ಯಾವುದೇ ಮಾರ್ಕ್‌ ಇಲ್ಲ’ ಎಂದು ಮರಣೋತ್ತರ ಪರೀಕ್ಷೆಯ ನಂತ್ರ ಡಾ. ಸತೀಶ್‌ ಮಾಹಿತಿ ನೀಡಿದ್ರು.

ಇನ್ನು ‘ಡಾ. ಸೌಂದರ್ಯ ಮರಣೋತ್ತರ ಪರೀಕ್ಷೆ ವರದಿ ಸಿದ್ಧವಾಗಿದೆ. ಮೂವರು ವೈದ್ಯರು ಮತ್ತು ತಹಶೀಲ್ದಾರ್‌ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಅಧಿಕಾರಿಗಳಿಗೆ ಹಸ್ತಾಂತರಿಸುತ್ತೇವೆ. ಇನ್ನು ಮರಣೋತ್ತರ ಪರೀಕ್ಷೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ’ ಎಂದರು.

ಮೃತದೇಹವನ್ನ ನಗರ ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿರುವ ಸೌಂದರ್ಯ ಪತಿ ಡಾ. ನೀರಜ್‌ ನಿವಾಸಕ್ಕೆ ರವಾನಿಸಲಾಗ್ತಿದ್ದು, ಮನೆ ಬಳಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿದೆ. ಯಶವಂತಪುರ ಎಸಿಪಿ ನೇತೃತ್ವದಲ್ಲಿ ಪೊಲೀಸರಿಂದ ಭದ್ರತೆ ನೀಡಲಾಗ್ತಿದ್ದು, ಹೆಚ್ಚುವರಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌, ಉತ್ತರ ವಿಭಾಗದ ಡಿಸಿಪಿ ವಿನಾಯಕ್‌ ಪಾಟೀಲ್‌ ಭೇಟಿ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಆಯುರ್ವೇದದೊಂದಿಗೆ ನಿಮ್ಮ ಚರ್ಮವನ್ನು ಹೇಗೆ ಕಾಳಜಿ ವಹಿಸುವುದು

Fri Jan 28 , 2022
ಆರೋಗ್ಯ ಮತ್ತು ಸೌಂದರ್ಯವು ಪರಸ್ಪರ ನಿಕಟ ಸಂಬಂಧ ಹೊಂದಿದೆ. ರೋಗ ಮುಕ್ತ, ಆರೋಗ್ಯಕರ ಮತ್ತು ಹರ್ಷಚಿತ್ತದಿಂದ ವ್ಯಕ್ತಿತ್ವವು ಸುಂದರವಾಗಿ ಕಾಣುತ್ತದೆ. ಒಬ್ಬ ವ್ಯಕ್ತಿಯು ಕೃತಕ ಸೌಂದರ್ಯವರ್ಧಕಗಳ ಹಿಂದೆ ಹೋಗಬಾರದು ಮತ್ತು ನೈಸರ್ಗಿಕ ಉತ್ಪನ್ನಗಳನ್ನು ಮಾತ್ರ ಬಳಸಲು ಪ್ರಯತ್ನಿಸಬೇಕು.   ಚರ್ಮದ ಸಮಸ್ಯೆಗಳಿಗೆ ಆಯುರ್ವೇದ ಸಲಹೆಗಳು: ನಿಮ್ಮ ಚರ್ಮವು ದೇಹದ ಎಲ್ಲಾ ಭಾಗಗಳಲ್ಲಿ ನಯವಾದ ಮತ್ತು ಸ್ವಚ್ಛವಾಗಿಲ್ಲದಿದ್ದರೆ: ಒಂದು ಟೀಚಮಚ ಆಲಿವ್ ಎಣ್ಣೆ ಮತ್ತು ಸಮಾನ ಪ್ರಮಾಣದ ಜೇನುತುಪ್ಪವನ್ನು ತೆಗೆದುಕೊಳ್ಳಿ. ಮುಖ, […]

Advertisement

Wordpress Social Share Plugin powered by Ultimatelysocial