ತಿರುವನಂತಪುರ: ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್ ಪಿ ಸಿ) ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಧರಿಸುವ ಬೇಡಿಕೆಯನ್ನು ಕೇರಳ ಸರ್ಕಾರ ನಿರಾಕರಿಸಿದೆ. ಇದು ಮುಸ್ಲಿಂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದರಿಂದ ರಾಜ್ಯದಲ್ಲಿ ಜಾತ್ಯತೀತತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಎಸ್ಪಿಸಿ ಸೇರಿಕೊಂಡಿದ್ದ ಮುಸ್ಲಿಂ ವಿದ್ಯಾರ್ಥಿನಿ, ತನ್ನ ಧಾರ್ಮಿಕ ಸಂಪ್ರದಾಯಗಳ ನಿಯಮಾನುಸಾರ ಎಸ್ ಪಿ ಸಿ ಸಮವಸ್ತ್ರದ ಮೇಲೆ ಹಿಜಾಬ್ (ತಲೆ ಸ್ಕಾರ್ಫ್) ಮತ್ತು ಪೂರ್ಣ ತೋಳಿನ ಉಡುಪನ್ನು ಧರಿಸಲು ಅನುಮತಿ ಕೇಳಿದ್ದರು.
ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿರುವ ಕೇರಳ ಸರ್ಕಾರವನ್ನು ಮುಸ್ಲಿಂ ಸಂಘಟನೆಗಳು ಸಂಘ ಪರಿವಾರಕ್ಕೆ ಹೋಲಿಸಿದೆ. ಜಾತ್ಯತೀತತೆ ಸಮವಸ್ತ್ರದಲ್ಲಿ ಇರುವುದಿಲ್ಲ ಎಂದು ಮುಸ್ಲಿಂ ನಾಯಕರು ಕಿಡಿಕಾರಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada