ಸುಲಭದ ಜಯದಿಂದ ಮುಂಬೈ ಪ್ಲೇ ಆಫ್ ಕನಸು ಜೀವಂತ

ಇಂಡಿಯನ್ ಪ್ರೀಮಿಯರ್ ಲೀಗ್‌ ನ 51 ನೇ ಪಂದ್ಯವನ್ನ ಮಂಗಳವಾರ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಗಳಿಸಿದೆ. ಈ ಪಂದ್ಯದಲ್ಲಿ ಸೋತ ತಂಡ ಕೂಟದಿಂದ ಹೊರಹೋಗ ಬೇಕಿದ್ದು ಇದೊಂದು ಮಹತ್ವದ ಪಂದ್ಯವಾಗಿತ್ತು. ಇದರಲ್ಲಿ ರಾಜಸ್ಥಾನ್ ತಂಡ ಹೀನಾಯ ಸೋಲು ಅನುಭವಿಸಿದೆ. ನಿಗದಿತ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 90 ರನ್ ಗಳಿಸಿತ್ತು. 91 ರ ಗುರಿಯನ್ನ ಮುಂಬೈ ಇಂಡಿಯನ್ಸ್ ಕೇವಲ 8.2 ಓವರ್​ಗಳಲ್ಲಿ 8 ವಿಕೆಟ್ ಕೈಲಿರುವಂತೆ ಗೆದ್ದು ನೆಟ್ ರನ್ ರೇಟ್ ಉತ್ತಮ ಸ್ಥಿತಿಗೆ ತಂದುಕೊಂಡಿದೆ.

ಮುಂಬೈನ ವೇಗದ ಬೌಲರ್​ಗಳ ಆಕ್ರಮಣಕಾರಿ ಬೌಲಿಂಗ್‌ ಹಾಗು ಇಶಾನ್ ಕಿಶನ್ರ ಸ್ಫೋಟಕ ಅರ್ಧ ಶತಕಕ್ಕೆ ರಾಜಸ್ಥಾನ್ ರಾಯಲ್ಸ್ ತತ್ತರಿಸಿ ಹೋಗಿ ಈ ಸೋಲಿನೊಂದಿಗೆ ತಂಡ ಟೂರ್ನಿಯಿಂದ ಬಹುತೇಕವಾಗಿ ಹೊರಬಿದ್ದಂತಾಗಿದೆ. ಆದರೆ ಮುಂಬೈ ಇಂಡಿಯನ್ಸ್ ಗೆ ಪ್ಲೇ ಆಫ್ಸ್‌ ಪ್ರವೇಶಿಸುವ ಅವಕಾಶ ಇನ್ನು ಜೀವಂತವಾಗಿ ಉಳಿದಿದೆ. ಮುಂಬರುವ ರಾಜಸ್ಥಾನ್ ರಾಯಲ್ಸ್ ಹಾಗು ಕೆಕೆಆರ್‌ ಪಂದ್ಯದಲ್ಲಿ, ರಾಜಸ್ಥಾನ್ ಪ್ಲೇ ಆಫ್ಸ್‌ ಆಸೆ ಉಳಿಸಿಕೊಳ್ಳಲು ಅತ್ಯಂತ ದೊಡ್ಡ ಅಂತರದಲ್ಲಿ ಗೆಲ್ಲಬೇಕಿದೆ, ಇದರಿಂದ ಮುಂಬೈ ಇಂಡಿಯನ್ಸ್ ತಂಡಕ್ಕು ಪ್ಲೇ ಆಫ್ ಹಾದಿ ಸುಲಭವಾಗಲಿದೆ.

Please follow and like us:

Leave a Reply

Your email address will not be published. Required fields are marked *

Next Post

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ.

Wed Oct 6 , 2021
ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಉಳಿಸಿಕೊಂಡಿರುವ ಕಬ್ಬು ಬೆಲೆ ಪಾವತಿಗೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ನೀಡಿದ್ದ ಗಡುವಿನಲ್ಲಿ 5 ಕಾರ್ಖಾನೆಗಳು ಒಟ್ಟು 13.65 ಕೋಟಿ ರೂ ಬಾಕಿ ಪಾವತಿಸಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಂಕರ ಪಾಟೀಲ್ ಮುನೇನಕೊಪ್ಪ ,ಗಡುವು ಮುಗಿದರೂ 15.91 ಕೋಟಿ ರೂ ಬಾಕಿ ಉಳಿಸಿಕೊಂಡಿರುವ ಎರಡು ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಈಗಾಗಲೇ ನೋಟಿಸ್ ಜಾರಿಗೊಳಿಸಿದ್ದು ರೈತರಿಗೆ ಬಾಕಿ […]

Advertisement

Wordpress Social Share Plugin powered by Ultimatelysocial