ಬ್ಯಾಂಕ್ ರಾಬರಿ ಮಾಡಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಿಕ್ಕಿಬಿದ್ದಿದ್ದು, ಮಡಿವಾಳದ SBI ಬ್ಯಾಂಕ್ನಲ್ಲಿ ರಾಬರಿ ಮಾಡಿದ್ದ ಸ್ಟೂಡೆಂಟ್ ಅರೆಸ್ಟ್ ಆಗಿದ್ದಾನೆ.ಅರೆಸ್ಟ್ ಆದ ಇಂಜಿನಿಯರಿಂಗ್ ಸ್ಟೂಡೆಂಟ್ ಧೀರಜ್, 40 ಲಕ್ಷ ಸಾಲ ತೀರಿಸೋಕೆ ಬ್ಯಾಂಕ್ ರಾಬರಿ ಪ್ಲಾನ್ ಮಾಡಿದ್ದು, BTM ಲೇಔಟ್ನಲ್ಲಿ SBI ಬ್ಯಾಂಕ್ಗೆ ಒಂಟಿಯಾಗಿ ಬ್ಯಾಂಕ್ ಕ್ಲೋಸಿಂಗ್ ಟೈಮ್ನಲ್ಲಿ ನುಗ್ಗಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ಚಾಕು ತೋರಿಸಿ ಲಾಕರ್ ಓಪನ್ ಮಾಡಿಸಿ ಚಿನ್ನ, ನಗದು ದೋಚಿದ್ದು,3.75 ಲಕ್ಷ ಹಣ ಹಾಗೂ ಚಿನ್ನಾಭರಣ ದೋಚಿ ಧೀರಜ್ ಪರಾರಿಯಾಗಿದ್ದಾನೆ. ಬ್ಯಾಂಕ್ ರಾಬರಿ ಮಾಡೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪರಾರಿಯಾದ ನಂತರ ACP ಸುಧೀರ್ ಹೆಗಡೆ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. 3 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಧೀರಜ್ ಬಂಧಿಸಿಲಾಗಿದ್ದು, ಆನ್ಲೈನ್ ಆ್ಯಪ್ಗಳ ಮೂಲಕ 40 ಲಕ್ಷ ಧೀರಜ್ ಸಾಲ ಪಡೆದಿದ್ದು, ಮಾಡಿದ್ದ ಸಾಲ ತೀರಿಸಲು ಆರೋಪಿ ಧೀರಜ್ ಬ್ಯಾಂಕ್ ದರೋಡೆ ಮಾಡಿದ್ದಾನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada