ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ ಕೋಟ್೯ ಹತ್ತಿರ ಆತ್ಮಹತ್ಯೆ
ಸರ್ಕಾರಿ ನೌಕರಿ ಕೊಡಿಸುವುದಾಗಿ ಹಣ ತೆಗೆದುಕೊಂಡಿದ್ದಳು ಉದ್ಯೋಗ ಕೊಡಿಸುವುದಾಗಿ ಮಾಡಿದ್ದ ಪ್ರಕರಣ ವಕೀಲರ ಭೇಟಿಗಾಗಿ ಕುಷ್ಟಗಿ ನ್ಯಾಲಯಕ್ಕೆ ಬಂದಿದ್ದ ಜೋತಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮರಣ ಕುಷ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಚಲನಚಿತ್ರ ಸಾಹಿತಿ ಕೆ.ಕಲ್ಯಾಣ ಕುಟುಂಬದಲ್ಲಿ ಹುಳಿ ಇಂಡಿ, ಕೌಟುಂಬಿಕ ಕಲಹಕ್ಕೆ ಪ್ರಮುಖ ಕಾರಣವಾಗಿದ್ದಳು ಎನ್ನಲಾದ ಜ್ಯೋತಿ ಎಂಬಾಕೆ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯದ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಕೆಲದಿನಗಳ ಹಿಂದೆ ಚಲನಚಿತ್ರ ಸಾಹಿತಿ ಕೆ ಕಲ್ಯಾಣ್ ಹಾಗೂ ಅವರ ಪತ್ನಿಯ ಜೀವನದ ಜೊತೆ ಚೆಲ್ಲಾಟವಾಡಿ ಪತಿ ಪತ್ನಿಇಬ್ಬರೂ ದೂರಾಗುವಲ್ಲಿ ಪ್ರಮುಖ ರೂವಾರಿಯಾಗಿದ್ದ ಜ್ಯೋತಿ ಎಂಬಾಕೆ ಕುಷ್ಟಗಿ ತಾಲೂಕಿನಾದ್ಯಂತ ವಿವಿಧ ನಿರುದ್ಯೋಗಿ ಯುವಕರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಎತ್ತುವಳಿ ಮಾಡಿ, ತಲೆಮರೆಸಿಕೊಂಡಿದ್ದಳು. ಸರ್ಕಾರಿ ನೌಕರಿ ಕೊಡಿಸುವುದಾಗಿ ಅನೇಕ ಯುವಕರಿಗೆ ಮೋಸ ಎಸಗಿದ್ದ ಇವಳ ಮೇಲೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ಬಗ್ಗೆ ದಿನಾಂಕ 3 ನವೆಂಬರ್ ರಂದು ನ್ಯಾಲಯಕ್ಕೆ ಹಾಜರಾಗಬೇಕಾಗಿದ್ದ ಕಾರಣ ಕುಷ್ಟಗಿ ನಗರದ ನ್ಯಾಯಾಲಯಕ್ಕೆ ವಕೀಲರ ಭೇಟಿಗಾಗಿ ಬಂದಿದ್ದಳು ಎನ್ನಲಾಗುತ್ತಿದೆ. ಈ ವೇಳೆ ಕೋಟ್೯ ಆವರಣದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಲಿಸ್ ಮೂಲಗಳು ಪ್ರಕಾರ ಹೇಳಲಾಗುತ್ತಿದೆ.ಕುಷ್ಟಗಿ ನಗರದ ಕೋಟ್೯ ಹತ್ತಿರ ಘಟನೆ ನಡೆದಿದ್ದು ತಕ್ಷಣ ಸ್ಥಳಿಯರ ಸಹಕಾರದಿಂದ ಪೋಲಿಸರು ಆಕೆಯನ್ನು ಸ್ಥಳಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.ಆದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾಳೆ.ಸ್ಥಳಕ್ಕೆ ಕುಷ್ಟಗಿ ಸಿಪಿಐ ನಿಂಗಪ್ಪ ಆಗಮಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಈ ಸಂಬಂಧ ಕುಷ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.