ದಶಕದ ಹಿಂದೆ ಹೀಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು.

ಶಕದ ಹಿಂದೆ ಹೀಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿ ಹನ್ಸಿಕಾ ಮೊಟ್ವಾನಿ ಬಹಳ ಬೇಗ ನಾಯಕಿಯಾಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಇದೇ ಸಮಯದಲ್ಲಿ ಪಂಜಾಬಿ ಬೆಡಗಿ ಮೈಕೈ ತುಂಬಿಕೊಂಡು ಸುಂದರವಾಗಿ ಕಾಣಲು ಸ್ವತಃ ತಾಯಿಯೇ ಹಾರ್ಮೋನ್ ಇಂಜೆಕ್ಷನ್ ಕೊಟ್ಟಿದ್ದರು ಎಂದು ಗುಲ್ಲಾಗಿತ್ತು.

ತೆಲುಗಿನ ‘ದೇಶಮುದುರು’ ಸಿನಿಮಾ ಮೂಲಕ ಹನ್ಸಿಕಾ ನಾಯಕಿಯಾಗಿ ಚಿತ್ರರಂಗಕ್ಕೆ ಬಂದರು. ತಮ್ಮ ಸಪೂರ ದೇಹ ಮಾದಕ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆ ಕದ್ದರು. ಹಾಗಾಗಿ ಹನ್ಸಿಕಾ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಹಬ್ಬಿಸಿದ್ದರು. ಹನ್ಸಿಕಾ ಮೊಟ್ವಾನಿ ತಾಯಿ ಮೋನಾ ಮೊಟ್ವಾನಿ ವೃತ್ತಿಯಲ್ಲಿ ವೈದ್ಯರು. ಹಾಗಾಗಿ ಇಂತಾದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಚರ್ಚೆ ಹುಟ್ಟಾಕಿತ್ತು. ಬಹಳ ಜನ ಇದು ನಿಜ ಎಂದೇ ನಂಬಿಕೊಂಡಿದ್ದಾರೆ.

ಬಹಳ ವರ್ಷಗಳ ನಂತರ ಈ ವಿಚಾರವಾಗಿ ಹನ್ಸಿಕಾ ಹಾಗೂ ತಾಯಿ ಮೋನಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನೇರವಾಗಿ ಎದುರಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. “ನನಗೆ ಆಗ 21 ವರ್ಷ. ಬಹಳ ಜನ ಏನೇನೋ ಕೆಟ್ಟದಾಗಿ ಮಾತನಾಡಿದರು. ನಾನು ಬೇಗ ಬೆಳೆಯಲು ಇಂಜೆಕ್ಷನ್ ತಗೊಂಡಿದ್ದೆ ಎಂದು ಕೆಟ್ಟ ಕೆಟ್ಟದಾಗಿ ನನ್ನ ಕುರಿತು ಬರೆದರು. ನಾನು 8 ವರ್ಷಕ್ಕೆ ನಟಿಸಲು ಆರಂಭಿಸಿದೆ. ಅದಕ್ಕಾಗಿ ನನ್ನ ತಾಯಿ ನನಗೆ ಹಾರ್ಮೋನ್ ಇಂಜೆಕ್ಷನ್ ಕೊಟ್ಟು ಬೇಗ ದೊಡ್ಡವಳಾಗುವಂತೆ ಮಾಡಿದರು ಎಂದರು. ಅದನ್ನು ನಿಜ ಎಂದು ಹೇಗೆ ಅಂದುಕೊಳ್ಳುತ್ತಾರೆ? ಎಂದು ಹನ್ಸಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ವಿಚಾರವಾಗಿ ಆಕೆಯ ತಾಯಿ ಮೋನ ಮಾತನಾಡಿ “ಒಂದು ವೇಳೆ ಇದು ನಿಜವೇ ಆಗಿದ್ದರೆ ನಾನು ಟಾಟಾ ಬಿರ್ಲಾಗಿಂತ ಶ್ರೀಮಂತೆ ಆಗಿ ಇರುತ್ತಿದ್ದೆ. ನೀವು ಕೂಡ ನನ್ನ ಬಳಿ ಬೇಗ ದೊಡ್ಡವರಾಗಲು ಸಲಹೆ ಕೇಳಲು ಕ್ಯೂ ನಿಲ್ಲುತ್ತಿದ್ದಿರಿ. ಆದರೂ ಆ ರೀತಿಯಲ್ಲಾ ಬರೆಯಲು ಕಾಮನ್‌ ಸೆನ್ಸ್ ಬೇಡ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಪಂಜಾಬಿಗಳು. ನಮ್ಮ ಮನೆಯ ಹೆಣ್ಣುಮಕ್ಕಳು 12ರಿಂದ 16 ವರ್ಷಕ್ಕೆ ದೊಡ್ಡವರಾಗುತ್ತಾರೆ” ಎಂದಿದ್ದಾರೆ. ಇತ್ತೀಚೆಗೆ ನಟಿ ಹನ್ಸಿಕಾ, ಸೋಹೇಲ್ ಕಥುರಿಯಾ ಕೈ ಹಿಡಿದಿದ್ದರು. ತಮ್ಮ ಮದುವೆಯ ವಿಡಿಯೋ ಪ್ರಸಾರ ಹಕ್ಕನ್ನು ಓಟಿಟಿಗೆ ನೀಡಿದ್ದಾರೆ. ಈ ಎಪಿಸೋಡ್‌ಗಳಲ್ಲಿ ತಮ್ಮ ಲೈಫ್‌ ಬಗ್ಗೆಯೂ ಮಾತನಾಡುತ್ತಿದ್ದಾರೆ. 2ನೇ ಎಪಿಸೋಡ್‌ನಲ್ಲಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆದಿಯೋಗಿ ದರ್ಶನ ಪಡೆದ ರಜನಿಕಾಂತ್‌!

Sat Feb 18 , 2023
ಚಿಕ್ಕಬಳ್ಳಾಪುರ: ಜಿಲ್ಲೆ ಮಾತ್ರವಲ್ಲದೆ ವಿದೇಶಿ ಭಕ್ತರನ್ನು ಆಕರ್ಷಿಸುತ್ತಿರುವ ಮತ್ತು ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯ ಆವಲಗುರ್ಕಿ ಸಮೀಪದಲ್ಲಿರುವ ಆದಿಯೋಗಿ ಕೇಂದ್ರಕ್ಕೆ ಬಹುಭಾಷಾ ನಟ ಸೂಪರ್‌ಸ್ಟಾರ್‌ ರಜನಿಕಾಂತ್‌ ಭೇಟಿ ನೀಡಿ ದೇವರ ದರ್ಶನ ಪಡೆದರು. ಇತ್ತೀಚೆಗೆ ಸದ್ಗುರು ವಾಸುದೇವ್‌ ಅವರ ನೇತೃತ್ವದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಈಶಾ ಫೌಂಡೇಶನ್‌ನಿಂದ ನಿರ್ಮಾಣಗೊಂಡಿರುವ ಆದಿಯೋಗಿ ಪ್ರತಿಮೆಯನ್ನು ವೀಕ್ಷಿಸಲು, ದರ್ಶನ ಮಾಡಲು ಪ್ರತಿನಿತ್ಯ ಭಕ್ತರ ದಂಡು ಬರುತ್ತಿದೆ. […]

Advertisement

Wordpress Social Share Plugin powered by Ultimatelysocial