ನವದೆಹಲಿ ಜನವರಿ 13: ದೆಹಲಿಯ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ 20 ವರ್ಷದ ಯುವತಿ ಸಾವನ್ನಪ್ಪಿದ್ದು ಐವರ ವಿರುದ್ಧ ಕೊಲೆ ಆರೋಪವನ್ನು ದಾಖಲಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ ಎಂದು ಮೂಲಗಳು ಎನ್ಡಿಟಿವಿಗೆ ತಿಳಿಸಿವೆ. ಆ ರಾತ್ರಿ ಪ್ರತ್ಯಕ್ಷದರ್ಶಿಗಳಿಂದ ಬಂದ ಅನೇಕ ಕರೆಗಳನ್ನು ನಿರ್ಲಕ್ಷಿಸಿದ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಸಚಿವಾಲಯವು ಹೇಳಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ವರ್ಷದಂದು ನಡೆದ ಆಘಾತಕಾರಿ ಪ್ರಕರಣದ ಕುರಿತು ತಾನು ಆದೇಶಿಸಿದ್ದ ತನಿಖೆಯ ವರದಿಯನ್ನು ಸ್ವೀಕರಿಸಿದ ನಂತರ ಸಚಿವಾಲಯದ ಈ ಸೂಚನೆಗಳನ್ನು ನೀಡಿದೆ ಎನ್ನಲಾಗುತ್ತಿದೆ.
ಐವರು ಪಾನಮತ್ತರು ಹೊಸ ವರ್ಷದಂದು ಅಂಜಲಿ ಸಿಂಗ್ ಅವರ ಸ್ಕೂಟಿಗೆ ಡಿಕ್ಕಿ ಹೊಡೆದರು. ಅಂಜಲಿ ದೇಹ ಕಾರಿಗೆ ಸಿಕ್ಕಿಕೊಂಡಾಗ ಅವರು ಕೆಲ ಕಿ.ಮೀ ವರೆಗೂ ಕಾರನ್ನೂ ಚಲಿಸಿದ್ದಾರೆ. ಘಟನೆಯ ನಂತರ ಆಕೆಯ ತಲೆ ಒಡೆದು ಆಕೆಯ ಚರ್ಮ ಸುಲಿದಿದೆ. ಆಕೆಯೊಂದಿಗೆ ಇದ್ದ ಆಕೆಯ ಸ್ನೇಹಿತೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಮರಣೋತ್ತರ ಪರೀಕ್ಷೆಯಲ್ಲಿ ಯುವತಿ ಅಂಜಲಿ ಭೀಕರ ಗಾಯಗಳಿಂದ ಸಾವನ್ನಪ್ಪಿದ್ದಾರೆ.
ದೆಹಲಿ ಹಿಟ್ ಆಂಡ್ ಡ್ರ್ಯಾಗ್ ಕೇಸ್ಹೊಸ ವರ್ಷದ ಮುನ್ನಾದಿನದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಆದರೆ ಈ ಬಗ್ಗೆ ಮಾಹಿತಿ ನೀಡಲು ಪ್ರತ್ಯಕ್ಷ ದರ್ಶಿ ಮಾಡಿದ ಹಲವಾರು ಕರೆಗಳಿಗೆ ಸ್ಪಂದಿಸಲಿಲ್ಲ. ಸಾರ್ವಜನಿಕರ ತೀವ್ರ ಆಕ್ರೋಶದ ನಡುವೆಯೇ ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶಿಸಿತ್ತು.
https://play.google.com/store/apps/details?id=com.speed.newskannadaz