ತೆಲುಗು ಬಿಗ್ ಬಾಸ್ ಶೋ ಗೆ ನಟಿ ಸಮಂತಾ.! ನಾಗಾರ್ಜುನ ಫ್ಯಾನ್ಸ್ ಗೆ ಶಾಕ್

ಟಾಲಿವುಡ್‌ನಲ್ಲಿ ಈಗ ಸಮಂತಾದೇ ಬಿಸಿ ಬಿಸಿ ಸುದ್ದಿ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಸಮಂತಾ ಈಗ ಮಾಜಿ ಮಾವ ನಾಗಾರ್ಜುನ ಅವರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಶೋಗೆ ಸಮಂತಾ ನಿರೂಪಣೆ ಮಾಡಲಿದ್ದಾರೆ. ಅಭಿಮಾನಿಗಳ ನೆಚ್ಚಿನ ಜೋಡಿ ಎನಿಸಿಕೊಂಡಿದ್ದ ನಾಗಾಚೈತನ್ಯ ಮತ್ತು ಸಮಂತಾ ದೂರ ಆಗಿದ್ದೇ ಎಲ್ಲರಿಗೂ ಶಾಕಿಂಗ್ ವಿಚಾರ.

ಅಂದಿನಿಂದ ಇಂದಿನವರೆಗೂ ಈ ಜೋಡಿಯ ಕುರಿತ ವಿಚಾರ ಏನೇ ಬಂದರೂ ಅಭಿಮಾನಿಗಳಿಗೆ ಕಿವಿ ನೆಟ್ಟಗಾಗುತ್ತದೆ.

ಈಗ ಹೊಸ ಬ್ರೇಕಿಂಗ್ ವಿಚಾರ ಏನಪ್ಪಾ ಅಂದ್ರೆ ಪ್ರೇಕ್ಷಕರ ಅಚ್ಚು ಮೆಚ್ಚಿನ ಶೋ ಬಿಗ್ ಬಾಸ್ ಸೀಸನ್ 6ರ ನಿರೂಪಣೆ ಸಮಂತಾ ಮಾಡಲಿದ್ದಾರೆ. ಈ ಮೂಲಕ ಮಾಜಿ ಮಾವ ನಾಗಾರ್ಜುನ ಅವರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಡೈವೋರ್ಸ್ ನಂತರ ಸಮಂತಾ ಡಿಮ್ಯಾಂಡ್ ಗಗನಕ್ಕೇರಿದೆ. ತೆಲುಗು, ತಮಿಳು, ಬಾಲಿವುಡ್, ಹಾಲಿವುಡ್ ಎಲ್ಲಾ ರಂಗದಲ್ಲೂ ಸಮಂತಾ ಬ್ಯುಸಿಯಾಗಿದ್ದಾರೆ. ಇಷ್ಟೊಂದು ಬ್ಯುಸಿಯಿರುವಾಗ ಸಮಂತಾಗೆ ಬಿಗ್ ಬಾಸ್ ಶೋ ನಡೆಸಲು ಬುಲಾವ್ ಬಂದಿದೆ.

ಈ ಹಿಂದೆ ಬಿಗ್ ಬಾಸ್ ಶೋನಲ್ಲಿ ಅತಿಥಿಯಾಗಿ ಜತೆಗೆ ಮಾಜಿ ಮಾವನ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಸೈ ಎನಿಸಿಕೊಂಡರು. ಈಗ ವಾಹಿನಿ ಕೂಡ ನಿರೂಪಣೆಗೆ ಸಮಂತಾನೇ ಬೇಕು ಅಂತಾ ಪಟ್ಟು ಹಿಡಿದಿದ್ದಾರಂತೆ. ಇಷ್ಟಕ್ಕೂ ಸ್ಟಾರ್ ನಟ ನಾಗಾರ್ಜುನ ಜಾಗಕ್ಕೆ ಸಮಂತಾ ಬರುತ್ತಿರೋದು ನಿಜನಾ ಅನ್ನೋದನ್ನ ಅಧಿಕೃತ ಮಾಹಿತಿಗಾಗಿ ಕಾಯಲೇಬೇಕಿದೆ. ಒಟ್ನಲ್ಲಿ ಸಮಂತಾ ಅಭಿಮಾನಿಗಳಿಗೆ ಇದು ಗುಡ್ ನ್ಯೂಸ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಮೋದ್ ಮುತಾಲಿಕ್ ಬೀದರ್ ಭೇಟಿಗೆ ನಿರ್ಬಂಧ ಹೇರಿದ್ದು, ಬಿಜೆಪಿ ಸರ್ಕಾರದ ಹಿಂದೂ ವಿರೋಧಿ ನೀತಿ :

Sat Jun 4 , 2022
ಬೀದರ್ : ಜೂನ್ 12 ರಂದು ಮಠಾಧೀಶರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೀದರ್ ಗೆ ಬರಬೇಕಿದ್ದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗೆ ಬೀದರ್ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಈ ಕುರಿತು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಅಂದೋಲ ಶ್ರೀ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೀದರ್ ಜಿಲ್ಲಾಡಳಿತ ಎಷ್ಟೇ ನಿರ್ಬಂಧ ಹೇರಿದರೂ ಕೂಡಾ ಜೂನ್ 12 ಕ್ಕೆ ಕಲ್ಯಾಣದಲ್ಲಿ ನಡಯುವ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಕಾರ್ಯಕ್ರಮಕ್ಕೆ ನಮ್ಮ ಪ್ರವೇಶವನ್ನು […]

Advertisement

Wordpress Social Share Plugin powered by Ultimatelysocial