ʼಸರಿಗಮಪʼ ವೇದಿಕೆಯಲ್ಲಿ ಹಾಡು ಹಾಡಿದ ಸ್ಪಿನ್ ಮಾಂತ್ರಿಕ..!

ʼಸರಿಗಮಪʼ ವೇದಿಕೆಯಲ್ಲಿ ಹಾಡು ಹಾಡಿದ ಸ್ಪಿನ್ ಮಾಂತ್ರಿಕ..!

ಕಳೆದ ಐಪಿಎಲ್ ನ ಎರಡನೇ ಸೀಸನ್ ಸಂದರ್ಭದಲ್ಲಿ ದುಬೈನಲ್ಲಿ ಪಂಜಾಬ್ ಹುಡುಗರಿಗಾಗಿ ಆಯೋಜಿಸಿದ್ದ ಸಂಜೆಯ ಪಾರ್ಟಿಯಲ್ಲಿ ಕನ್ನಡ ಹಾಡು ಹಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದ ಭಾರತದ ಸ್ಪಿನ್ ಮಾಂತ್ರಿಕ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ಈಗ ಖಾಸಗಿ ವಾಹಿನಿ ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ಸರಿಗಮ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಹಾಡು ಹೇಳಿದ್ದಾರೆ.

ಈ ಕುರಿತ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಅಭಿಮಾನಿಗಳು ಈ ಕಾರ್ಯಕ್ರಮ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಅಂದು ದುಬೈನಲ್ಲಿ ಹಾಡಿದ್ದ ದೇವರ ಗುಡಿ ಚಿತ್ರದ ಮಾಮರವೆಲ್ಲೋ..ಕೋಗಿಲೆ ಎಲ್ಲೋ. ಹಾಡನ್ನೇ ಅನಿಲ್ ಕುಂಬ್ಳೆ ಸರಿಗಮಪ ವೇದಿಕೆಯಲ್ಲಿ ಹಾಡಿದ್ದಾರೆ.

ಈ ಕಾರ್ಯಕ್ರಮವು ಜೀ ಕನ್ನಡದಲ್ಲಿ ಇದೇ ಶನಿವಾರ ಹಾಗೂ ಭಾನುವಾರದಂದು ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಅಲ್ಲದೇ, ಅನಿಲ್ ಕುಂಬ್ಳೆ ಅವರ ಅಭಿಮಾನಿಯಾಗಿರುವ ನಟ ಕಿಚ್ಚ ಸುದೀಪ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ನಾನು ಕೀಪಿಂಗ್ ಮಾಡಬೇಕು, ಕುಂಬ್ಳೆ ಅವರು ಬೌಲಿಂಗ್ ಮಾಡಬೇಕು ಎಂಬ ಆಸೆ ಇದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿರುವ ಅನಿಲ್ ಕುಂಬ್ಳೆ, ಪ್ರೇಮಲೋಕದ ಅಬ್ಬರ ಶುರುವಾದಾಗ ನಮ್ಮ ಕ್ರಿಕೆಟ್ ಲೋಕದ ಪಯಣ ಆರಂಭವಾಗಿತ್ತು ಎಂದು ಹೇಳಿದ್ದಾರೆ. ಇದರಿಂದ ಆಶ್ಚರ್ಯಕ್ಕೊಳಗಾದ ಸಂಗೀತ ದಿಗ್ಗಜ ಹಂಸಲೇಖ ಅವರು, ನೀವು ಕಣಕ್ಕೆ ಇಳಿದರೆ ವಿಕೆಟ್ಟು, ಮನಸ್ಸಿಗೆ ಇಳಿದರೆ ಕಮಿಟ್ಟು ಎಂದು ಹೇಳಿದ್ದಾರೆ. ಈ ಕುರಿತು ಪ್ರೋಮೋದಲ್ಲಿ ಕಂಡು ಬಂದಿದ್ದು, ಕನ್ನಡಿಗರು ಮಾತ್ರ ಭಾನುವಾರಕ್ಕಾಗಿ ಕಾಯುವಂತಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

13 ಜಿಲ್ಲೆಗಳಲ್ಲಿಂದು ಕೊರೋನಾ ಶೂನ್ಯ: ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್.? ಇಲ್ಲಿದೆ ವಿವರ

Thu Dec 23 , 2021
ಬೆಂಗಳೂರು: ರಾಜ್ಯದಲ್ಲಿ ಇಂದು 299 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. 318 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 7117 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 0.23 ರಷ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 30,03,564 ಕ್ಕೆ ಏರಿಕೆಯಾಗಿದೆ. ಇದುವರೆಗೆ 38,301 ಜನ ಸೋಂಕಿತರ ಮೃತಪಟ್ಟಿದ್ದಾರೆ. 29,58,117 ಜನ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 210 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. 207 ಜನ […]

Advertisement

Wordpress Social Share Plugin powered by Ultimatelysocial