ಬೆಂಗಳೂರಿನ ಯುವಕ ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಅವರ ಮೃತದೇಹಕ್ಕಾಗಿ ಚಾರ್ಮಾಡಿ ಘಾಟ್ನಲ್ಲಿ ಎರಡನೇ ದಿನವೂ ಶೋಧ ಕಾರ್ಯ ಮುಂದುವರಿದಿದೆ. (Sharath murder case) ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರೂ, ಕಳೇವರ ಪತ್ತೆಯಾಗಿಲ್ಲ.ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮೃತದೇಹವನ್ನು ಆರೋಪಿಗಳು ಎಸೆದು ಹೋಗಿದ್ದರು. ಸ್ಥಳಕ್ಕೆ ಇಬ್ಬರು ಆರೋಪಿಗಳನ್ನು ಕರೆತಂದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಆರೋಪಿ ಶರತ್ ಹಾಗೂ ಧನುಷ್ನನ್ನು ಕರೆತರಲಾಗಿದೆ. ಕ್ಷಣಕ್ಕೊಂದು ಜಾಗವನ್ನು ಆರೋಪಿಗಳು ತೋರಿಸುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಸಾವಿರಾರು ಅಡಿ ಪ್ರಪಾತದ ಚಾರ್ಮಾಡಿಯಲ್ಲಿ ತನಿಖೆ ಜಟಿಲವಾಗಿದೆ. ಹೀಗಿದ್ದರೂ, ಮೂಡಿಗೆರೆಯಲ್ಲಿ ಶೋಧ ಕಾರ್ಯ ನಡೆದಿದೆ. ಸ್ಥಳೀಯರೂ ಸಹಕರಿಸುತ್ತಿದ್ದಾರೆ.ಕೆಲಸದಿಂದ ತೆಗೆದು ಹಾಕುವ ಬಾಸ್, ಮ್ಯಾನೇಜರ್ಗಳನ್ನು ಕೆಲಸ ಕಳೆದುಕೊಂಡವರು ಬೈಯ್ಯುವುದು, ಕಂಪನಿಯನ್ನು ಹೀಗಳೆಯುವುದು, ‘ಅವರಿಗೂ ಹೀಗೇ ಆಗಲಿ’ ಎಂದು ಶಾಪ ಹಾಕುವುದು ಸಾಮಾನ್ಯ. ಆದರೆ ನೊಯ್ಡಾದಲ್ಲಿ ಒಬ್ಬ ವ್ಯಕ್ತಿ ಕೆಲಸ ಕಳೆದುಕೊಂಡು 6 ತಿಂಗಳ ಬಳಿಕ, ತನ್ನನ್ನು ಕೆಲಸದಿಂದ ತೆಗೆದು ಹಾಕಿದ ಮ್ಯಾನೇಜರ್ ಎದೆಗೆ ಗುಂಡು ಹಾರಿಸಿದ್ದಾನೆ (Man Shoots Employer). ಆ ಮ್ಯಾನೇಜರ್ ಸ್ಥಿತಿ ಗಂಭೀರವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನೊಯ್ಡಾದ ಹೊರಗುತ್ತಿಗೆ ಕಂಪನಿಯೊಂದರಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಅನೂಪ್ ಸಿಂಗ್ ಆರೋಪಿ. ಈತ ದೆಹಲಿಯ ಅಶೋಕ್ ನಗರದ ನಿವಾಸಿ. ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬ ಕಾರಣಕ್ಕೆ ಆತನ ಮ್ಯಾನೇಜರ್ ಆಗಿದ್ದ ಶಾರ್ದೂಲ್ ಇಸ್ಲಾಮ್ ಅವರು ಕೆಲಸದಿಂದ ವಜಾಗೊಳಿಸಿದ್ದರು. ಆಗಿನಿಂದಲೂ ಅನೂಪ್ ಸಿಟ್ಟಾಗಿದ್ದ. ಕಳೆದ ಒಂದು ತಿಂಗಳ ಹಿಂದೆ ಮತ್ತು ಶಾರ್ದೂಲ್ ಇಸ್ಲಾಮ್ನನ್ನು ಸಂಪರ್ಕಿಸಿ ಅನೂಪ್ ಸಿಂಗ್, ತನ್ನನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ. ಆದರೆ ಇಸ್ಲಾಮ್ ಒಪ್ಪಿರಲಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada