ಬಣ್ಣದ ಹಬ್ಬ – ಹೋಳಿ ಹಬ್ಬ ವರ್ಣರಂಜಿತ ಭಾರತೀಯ ಸಂಸ್ಕೃತಿಯ ವಿಶಿಷ್ಟ ಹಬ್ಬ. ಇದಕ್ಕೆ ಕಾಮನ ಹಬ್ಬ ಎಂದೂ ಹೆಸರು. ಕೆಟ್ಟದ್ದರ ಸಂಹಾರವಾಗಲು ಭಕ್ತಿಯ ಆಸ್ವಾದನೆ ಇರಬೇಕು, ಸೌಂದರ್ಯದ ಅಪೇಕ್ಷೆ ಬೇಕು, ಸ್ನೇಹ – ಸೌಹಾರ್ದತೆ – ಪ್ರೀತಿ – ಪ್ರೇಮಗಳ ಸಂಮಿಲನ ಇರಬೇಕು, ತ್ಯಾಗ ಮನೋಭಾವವಿರಬೇಕು, ಧೈರ್ಯವೂ ಬೇಕು, ಪರಮಾತ್ಮನ ಅನುಗ್ರಹವೂ ಬೇಕು. ಹೀಗೆ ಕೆಟ್ಟದ್ದರ ಅಂತ್ಯದಲ್ಲಿ ಪರಮಾತ್ಮನ ಕೃಪೆ ಹೊರಹೊಮ್ಮಿದಾಗ ಬದುಕು ವರ್ಣರಂಜಿತ ಸೊಬಗು ಕಾಣುತ್ತದೆ.
ಹೋಳಿ ಹಬ್ಬದ ತಾರಕಾಸುರನ ಕತೆ, ದೇವತೆಗಳ ಪರಮಾತ್ಮನ ಸಹಾಯದ ಯಾಚನೆ, ರತಿ-ಮನ್ಮಥರ ಪ್ರೀತಿ-ಪ್ರೇಮ-ಧೈರ್ಯ ಭಕ್ತಿಗಳ ಫಲ, ಕಾಮನು ದಹಿತಗೊಂಡು ಪ್ರೇಮ ಮಾತ್ರ ಶಾಶ್ವತವಾಗಿ ಉಳಿದುಕೊಂಡ ರೀತಿ, ತಾರಕಾಸುರನ ಸಂಹಾರವನ್ನು ಲೋಕ ವರ್ಣರಂಜಿತವಾಗಿ ಸಡಗರಿಸಿದ ರೀತಿ ಇವೆಲ್ಲವೂಈ ಆಚರಣೆಯ ಅಂತಃಸತ್ವದಲ್ಲಿ ಅಡಗಿರುವುದನ್ನು ಕಾಣಬಹುದು.
ನಮ್ಮೆಲ್ಲರ ಬದುಕು ಸಂತಸಕರವಾಗಿ ಸೊಗಸು – ಸೌಂದರ್ಯಗಳ ವರ್ಣ ಸೊಬಗಿನಲ್ಲಿ ಮೀಯಲಿ ಎಂದು ಆಶಿಸೋಣ.
ಎಲ್ಲರಿಗೂ ಬಣ್ಣಗಳ ಹಬ್ಬ ಶುಭತರಲಿ. ಬದುಕು – ಪ್ರಪಂಚ ಸೌಂದರ್ಯದಿಂದ ನಲಿಯಲಿ. ಬದುಕಿನಲ್ಲಿ ನಲಿವಿಲ್ಲದೆ ಬಳಲುತ್ತಿರುವವರಿಗೆ ಒಳಿತಾಗಲಿ ಎಂಬ ಭಾವ ಕೂಡಾ ನಮ್ಮ ಪ್ರಾರ್ಥನೆಯಲ್ಲಿ ಜೊತೆಗೂಡಲಿ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us: