ಉಡುಪಿ: ಸರ್ಕಾರದ ಆದೇಶವಿದ್ದರೂ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದರಿಂದ ವಿದ್ಯಾರ್ಥಿನಿಯರು ಮತ್ತು ಪ್ರಾಂಶುಪಾಲರ ನಡುವೆ ವಾಗ್ವಾದ ಉಂಟಾದ ಘಟನೆ ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ.ಹಿಜಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ತರಗತಿಗೆ ತೆರಳದಂತೆ ಪ್ರಾಂಶುಪಾಲರು ಕಾಲೇಜಿನ ಗೇಟ್ ಬಳಿ ತಡೆದರು.ಬಳಿಕ ಹಿಜಾಬ್ ಕಳಚಿ ಕ್ಲಾಸ್ಗೆ ಬರುವಂತೆ ಸೂಚಿಸಿದರು.ಈ ವೇಳೆ ಗೇಟ್ ಬಳಿ ಪ್ರಾಂಶುಪಾಲರ ಜೊತೆ ವಾಗ್ವಾದಕ್ಕಿಳಿದ ವಿದ್ಯಾರ್ಥಿನಿಯರು ಸರ್ಕಾರದ ಆದೇಶದಲ್ಲಿ ಕುಂದಾಪುರ ಕಾಲೇಜು ಉಲ್ಲೇಖವಿಲ್ಲ ಎಂದು ವಾದಿಸಿದರು. ಆದರೆ, ಸರಕಾರ […]
ಇತ್ತೀಚಿನ ಸುದ್ದಿ
ಮೊದಲೆಲ್ಲಾ ನಮ್ಮಲ್ಲಿ ಹಲವು ಮಂದಿ ಸಾಮಾನ್ಯ ಶೀತ, ನೆಗಡಿಗೆ ವೈದ್ಯರ ಬಳಿ ಹೋಗುವ ಬದಲು ಮನೆಯಲ್ಲೇ ಕಷಾಯ ತಯಾರಿಸಿ ಕುಡಿಯುತ್ತಿದ್ದರು. ಕಷಾಯವನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ನಂಬಲಾಗಿದೆ.ಹಾಗಾಗಿಯೇ, ಕಾರೋನಾ ಕಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಕಷಾಯ ಸೇವನೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ಪ್ರತಿ ನಿತ್ಯ ಕಷಾಯ ಕುಡಿಯುವುದರಿಂದ ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಕಷಾಯ ಸೇವಿಸುವಾಗ […]
ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಹಾಕಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅದು ಡಿಲೀಟ್ ಆಗಿದೆ. ಕಾರಣವೇನು? ಅದರಲ್ಲಿ ಏನಿತ್ತು?ಬಾಳಿವುಡ್ ಬೆಡಗಿ ಕಂಗನಾ ರಣಾವತ್ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡ ಬೆನ್ನಲ್ಲೇ ಡಿಲೀಟ್ ಮಾಡಿದ್ದರು.ಅದರಲ್ಲಿ ಹೊಸ ಸಮಾಚಾರ ಒಂದಿತ್ತು. ಅದೇನು ಎಂಬುದಕ್ಕೆ ಉತ್ತರ ಏಕ್ತಾ ಕಪೂರ್ ಶೇರ್ ಮಾಡಿದ ವಿಡಿಯೋದಲ್ಲಿದೆ. ಹೌದು. ಹಿಂದಿ ಕಿರುತೆರೆ ಹಾಗೂ ಬಾಲಿವುಡ್ನಲ್ಲಿ ಏಕ್ತಾ ಕಪೂರ್ ದೊಡ್ಡ ಹೆಸರು. ಹಲವು ಸೂಪರ್ ಹಿಟ್ ಧಾರವಾಹಿಗಳನ್ನು […]
ದಾಂಪತ್ಯ ಜೀವನದಲ್ಲಿ ಪ್ರೀತಿ ಹಾಗೂ ವಿಶ್ವಾಸ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಸುಖಕರ ದಾಂಪತ್ಯಕ್ಕೆ ಶಾರೀರಿಕ ಸಂಬಂಧ ಅವಶ್ಯ. ಆದ್ರೆ ಕೆಲವೊಂದು ಪರಿಸ್ಥಿತಿಯಲ್ಲಿ ಸೆಕ್ಸ್ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.ಸೋಂಕು ಹರಡುವ ಕ್ಷಯ, ದಡಾರ ಕಾಣಿಸಿಕೊಂಡಾಗ ಸಂಬಂಧ ಬೆಳೆಸಬೇಡಿ.ಹಾಗೆ ಮಾಡಿದಲ್ಲಿ ಸಂಗಾತಿಗೆ ಕೂಡ ಈ ರೋಗ ಹರಡುತ್ತದೆ.ಶಸ್ತ್ರಚಿಕಿತ್ಸೆಯಾದ ಕೆಲ ದಿನ ಶಾರೀರಿಕ ಸಂಬಂಧ ಬೇಡ. ಈ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.ಗರ್ಭಿಣಿಯಾದಾಗ ಏನು ಮಾಡಬೇಕೆಂಬ ಗೊಂದಲ ಅನೇಕರನ್ನು ಕಾಡುತ್ತದೆ. […]
ಮೈಸೂರು: ಹುಣಸೂರು ತಾಲ್ಲೂಕಿನ ಬಿಳಿಕೆರೆ ಸಮೀಪದ ರಾಮೇನಹಳ್ಳಿ ಸಮೀಪ ಕಾರು ಮತ್ತು ಟ್ರಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.ಹಾಸನದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಮೌಳೇಶ್ವರ ರೆಡ್ಡಿ ಹಾಗೂ ತೇಜಸ್ ಮೃತಪಟ್ಟವರು.ಇವರು ತಮ್ಮ ಇತರ ಇಬ್ಬರು ಸ್ನೇಹಿತರೊಂದಿಗೆ ಮೈಸೂರಿಗೆ ಕಾರಿನಲ್ಲಿ ಬರುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟ್ರಕ್ ನಡುವೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ […]
ಪರಪ್ಪನ ಅಗ್ರಹಾರ ಜೈಲಿನಲ್ಲಿ ಜಯಲಲಿತ ಆಪ್ತೆ ಶಶಿಕಲಾಗೆ ಸೌಕರ್ಯಗಳನ್ನು ನೀಡಿ ಸಹಾಯ ಮಾಡಿದ್ದ ಪೊಲೀಸರಿಗೆ ಸಂಕಷ್ಟ ಎದುರಾಗಿದ್ದು, ಶಶಿಕಲಾ ಹಾಗೂ ಜೈಲು ಅಧಿಕಾರಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಜೈಲಿನ ಅಧಿಕಾರಿ ಆಗಿದ್ದ ಕೃಷ್ಣ ಕುಮಾರ್, ಕೆ.ಶಶಿಕಲಾ, ಇಳವರಸಿ ವಿರುದ್ದ ಚಾರ್ಜ್ ಶೀಟ್ ಸಲ್ಲಿ ಮಾಡಲಾಗಿದ್ದು, ಜಯಲಲಿತಾ ಆಪ್ತೆ ಶಶಿಕಲಾರಿಂದ ಲಂಚ ಪಡೆದ ಆರೋಪ ಕೇಳಿ ಬಂದ ಹಿನ್ನೆಲೆ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಜೈಲಿನಲ್ಲಿ […]
ಪುಷ್ಪಾ: ದಿ ರೈಸ್ – ಭಾಗ 1 ಬಾಕ್ಸ್ ಆಫೀಸ್ನಲ್ಲಿ ಭಾರಿ ಅಲೆಯನ್ನು ಸೃಷ್ಟಿಸಿತು. ನಿಧಾನಗತಿಯ ಆರಂಭದ ನಂತರ ಚಿತ್ರದ ವ್ಯಾಪಾರವು ಚಿಮ್ಮಿ ರಭಸದಿಂದ ಬೆಳೆಯಿತು. ಥಿಯೇಟರ್ಗಳಿಗೆ ಪ್ರೇಕ್ಷಕರು ಮತ್ತು ವಿಮರ್ಶಕರು ಚಿತ್ರಕ್ಕೆ ಥಂಬ್ಸ್ ಅಪ್ ನೀಡುವುದರೊಂದಿಗೆ, ಪುಷ್ಪಾ ಬಾಕ್ಸ್ ಆಫೀಸ್ನಲ್ಲಿ ಮೂಲಾದಲ್ಲಿ ರಾರಾಜಿಸುತ್ತಿದೆ. ವಾಸ್ತವವಾಗಿ, ಚಿತ್ರವು ಇನ್ನೂ ಥಿಯೇಟರ್ಗಳಲ್ಲಿ ಓಡುವುದನ್ನು ಮುಂದುವರೆಸಿದೆ, ಸಾಂಕ್ರಾಮಿಕ ರೋಗದಿಂದಾಗಿ ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಗಳ ಬಿಡುಗಡೆಯನ್ನು ಮರುಹೊಂದಿಸಲು ನಿರ್ಧರಿಸಿದ್ದಾರೆ. ಕುತೂಹಲಕಾರಿಯಾಗಿ, ಪುಷ್ಪಾ: ದಿ […]
ಕೊಚ್ಚಿ: ಕೋತಿಗಳು ಏನಾದರೊಂದು ಕುಚೇಷ್ಟೆ ಮಾಡುತ್ತಾ ಇರುತ್ತವೆ. ಆದರೆ ಇಲ್ಲೊಂದು ಕೋತಿಗೆ ಕಾಗೆಗಳ ಹಿಂಡು ಸರಿಯಾಗಿ ಪಾಠ ಕಲಿಸಿದೆ. ಕಾಗೆಯ ಗೂಡಿನಲ್ಲಿದ್ದ ಮೊಟ್ಟೆಯನ್ನು ನಾಶಪಡಿಸಿದ್ದ ಕೋತಿಯ ಮೇಲೆ ಕಾಗೆಗಳ ಹಿಂಡು ದಾಳಿ ಮಾಡಿದೆ. ಮೊಟ್ಟೆ ನಾಶ ಮಾಡಿದ ಕಾರಣ ಕಾಗೆಗಳು ಕೋತಿಯನ್ನು ಬೆನ್ನು ಬಿಡದೆ ಕೊಕ್ಕಿನಲ್ಲಿ ಕುಕ್ಕಿದೆ.ಅಂದಹಾಗೆಯೇ ಮೂವಟ್ಟುಪುಳದಲ್ಲಿ ಈ ಘಟನೆ ನಡೆದಿದೆ. ಗೂಡಿನಲ್ಲಿದ್ದ ಮೊಟ್ಟೆಗಳನ್ನು ನಾಶಪಡಿಸಿದ ನಂತರ ಕೋತಿಯನ್ನು ಕಂಡು, ಕಾಗೆಗಳು ಮಂಗ ಹೋದಲ್ಲೆಲ್ಲಾ ಬೆನ್ನಟ್ಟಿವೆ. ಕಾಗೆಗಳ ದಾಳಿಯಿಂದ […]
ಬೆಂಗಳೂರು: ದಿವಂಗತ ಮಾದೇಗೌಡ ವಿರುದ್ಧ ಆಡಿಯೋ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸೋಮವಾರ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ವಿರುದ್ಧ ಗುಡುಗಿದ್ದು, ನೋಟಿಸ್ ಕೊಟ್ಟು ಪಕ್ಷದಿಂದ ಹೊರ ಹಾಕಲಾಗುವುದು, ಈ ಬಗ್ಗೆ ಪಕ್ಷದ ಅಧ್ಯಕ್ಷರಿಗೆ ಸೂಚನೆ ಕೊಡುತ್ತೇನೆ ಎಂದಿದ್ದಾರೆ. ಜೆಪಿ ಭವನದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಸಭೆ ಸಂಧರ್ಭ ಮಾತನಾಡಿದ ಹೆಚ್ ಡಿಕೆ, ನಿನ್ನೆ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ನೋಡಿದ್ದೇನೆ, ಶಿವರಾಮೇಗೌಡರ ದೂರವಾಣಿ ರೆಕಾರ್ಡ್ ವೈರಲ್ ಆಗಿದೆ. ಸಂಬಂಧ […]
ಮಹಾತ್ಮಾ ಗಾಂಧಿಯವರ 74 ನೇ ಪುಣ್ಯತಿಥಿಯ ಸಂದರ್ಭದಲ್ಲಿ, ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಭಾನುವಾರ, ಜನರು ಇತರರಲ್ಲಿ ಗಾಂಧಿಯನ್ನು ಹುಡುಕುವುದನ್ನು ನಿಲ್ಲಿಸಬೇಕು ಮತ್ತು ಬದಲಾಗಿ ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಮಹಾನ್ ನಾಯಕನ ದೊಡ್ಡ ಅಭಿಮಾನಿ ಎಂದು ಹೆಸರಾಗಿರುವ ನಟ ಟ್ವಿಟರ್ನಲ್ಲಿ “ಈ ದಿನ, ಗಾಂಧಿಯನ್ನು ಹತ್ಯೆ ಮಾಡಿರಬಹುದು, ಆದರೆ ಅವರು ಮಾನವೀಯತೆಯನ್ನು ಉಳಿಸಲು ಅಮರ ತತ್ವವನ್ನು ಬಿಟ್ಟು ಹೋಗಿದ್ದಾರೆ” ಎಂದು ಹೇಳಿದ್ದಾರೆ. “ಜಗತ್ತಿನಾದ್ಯಂತ ಗಾಂಧಿಗಳು ನಮ್ಮನ್ನು […]