ಪ್ರತಿ ಬಾರಿಯೂ ಹೊಸವರ್ಷದ ಸಮಯದಲ್ಲಿ ಈ ಬಾರಿ ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಅಂದುಕೊಳ್ಳುವುದು ಸಾಮಾನ್ಯ, ಆದರೆ ಅದನ್ನ ಪೂರ್ಣ ಮಾಡುವುದು ಸುಲಭವಲ್ಲ. ಸ್ಥೂಲಕಾಯತೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಖಿನ್ನತೆಯಿಂದ ಯುವಕರು ಕಳೆದ ಎರಡು ವರ್ಷಗಳಲ್ಲಿ ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಆಹಾರ ನಮ್ಮ ಅನಾರೋಗ್ಯಕರ ಆಹಾರ ಪದ್ಧತಿಯಿಂದ ಅರ್ಧದಷ್ಟು ಕಾಯಿಲೆ ಬರುತ್ತದೆ. ಇದು ವಿಶೇಷವಾಗಿ ತೂಕ ಹೆಚ್ಚಾಗಲು ಮೊದಲ ಕಾರಣವಾಗಿದೆ. ಆದ್ದರಿಂದ ಸಂಸ್ಕರಿತ […]

ಆರೋಗ್ಯವೇ ಭಾಗ್ಯ ಎಂದಿರುವ ಗಾದೆಯನ್ನು ವಾಕಿಂಗ್ ನಿಂದಲೇ ಆರೋಗ್ಯ ಎಂದು ಬದಲಾಯಿಸಿಕೊಳ್ಳಬಹುದು. ಏಕೆಂದರೆ ನಮ್ಮ ದೇಹಕ್ಕೆ ಬರುವ ಬಹುತೇಕ ರೋಗಗಳನ್ನು ತಡೆಯುವ ಶಕ್ತಿ ವಾಕಿಂಗ್ ಗೆ ಇದೆ. ಬೆಳಗೆದ್ದು ಅರ್ಧ ಗಂಟೆ ಹೊತ್ತು ವಾಕಿಂಗ್ ಹೋಗುವುದರಿಂದ ದಿನವಿಡೀ ಫ್ರೆಶ್ ಆಗಿ ಇರಬಹುದು. ಡಯಾಬಿಟಿಸ್, ಬಿಪಿ ಮೊದಲಾದ ರೋಗಗಳನ್ನು ನಿಯಂತ್ರಣದಲ್ಲಿಡಬಹುದು. ದಿನನಿತ್ಯ ವಾಕಿಂಗ್ ಹೋಗುವುದರಿಂದ ದೇಹಕ್ಕೆ ಅತ್ಯುತ್ತಮ ವ್ಯಾಯಾಮ ದೊರೆಯುತ್ತದೆ. ಇಡೀ ದಿನ ನೀವು ಕ್ರಿಯಾಶೀಲರಾಗಿ ಇರಬಹುದು. ಬೆಳಗಿನ ಗಾಳಿ ದೇಹಕ್ಕೆ […]

ಮೈಗ್ರೇನ್ ಬೇಡವೆಂದರೂ ಬಂದು ಕಾಡುವ ಅತಿಥಿ. ಬಿಡದೆ ಕಾಡುವ ತಲೆ ನೋವಿನಿಂದ ಮುಕ್ತಿ ಕಾಣದೆ ಹಲವರು ಹೈ ಡೋಸೇಜ್ ಮಾತ್ರೆಗಳ ಮೊರೆ ಹೋಗುವುದೂ ಉಂಟು. ಅದರ ಬದಲು ಮೈಗ್ರೇನ್ ಬರದಂತೆ ತಡೆಯಲು ಏನು ಮಾಡಬಹುದು ನೋಡೋಣ. ನಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಇದು ಬರದಂತೆ ಮಾಡಬಹುದು. ಮೈಗ್ರೇನ್ ಗೆ ಮುಖ್ಯ ಕಾರಣವೆಂದರೆ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದು. ಅದನ್ನು ತಡೆಯಲು ಕಲ್ಲಂಗಡಿ ಹಣ್ಣು, ಮುಳ್ಳು ಸೌತೆಕಾಯಿ ದಿನನಿತ್ಯ […]

ಕೆಲವೊಮ್ಮೆ ತಿನ್ನುವ ಆಹಾರದಿಂದ ಅಥವಾ ಅಲರ್ಜಿ ಕಾರಣದಿಂದ ನಮ್ಮ ದೇಹದ ರಕ್ತ ಕೆಡುತ್ತದೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ರಕ್ತ ಶುದ್ಧಿ ಮಾಡಬಹುದು. ಒಂದು ಚಮಚ ಜೇನುತುಪ್ಪ ಹಾಗೂ ಹಸಿ ಶುಂಠಿಯ ರಸ ತೆಗೆದುಕೊಳ್ಳಿ. ಇವೆರಡನ್ನು ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಮ್ಮ ದೇಹದ ರಕ್ತ ಶುದ್ಧಿಯಾಗುತ್ತದೆ. ಕಜ್ಜಿ ಮೊದಲಾದ ತುರಿಕೆ ಸಮಸ್ಯೆಗಳನ್ನು ದೂರ ಮಾಡುತ್ತದೆ. ಈ ಎರಡು ವಸ್ತುಗಳು ಉಷ್ಣ ಪ್ರವೃತ್ತಿಯವು, […]

ಇತ್ತೀಚೆಗಷ್ಟೇ ವಿದೇಶ ಪ್ರವಾಸ ಮುಗಿಸಿಕೊಂಡು ಬಂದಿರುವ ನಟಿ ರಶ್ಮಿಕಾ ಮಂದಣ್ಣ ಈಗ “ಪುಷ್ಪ’ ಸಿನಿಮಾದ ಪ್ರಮೋಶನ್‌ನಲ್ಲಿ ಬಿಝಿಯಾಗಿದ್ದಾರೆ. ಈ ಚಿತ್ರ ಡಿ.17 ರಂದು ತೆರೆಕಾಣುತ್ತಿದೆ. ಅಲ್ಲು ಅರ್ಜುನ್‌ ನಟನೆಯ ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಯಾಗಿ ದೊಡ್ಡ ಹಿಟ್‌ ಆಗಿದೆ. ಇದರ ಬೆನ್ನಿಗೆ ಬಂದ ಚಿತ್ರದ ಸ್ಪೆಷಲ್‌ ನಂಬರ್‌ ಸಾಂಗ್‌ ಕೂಡಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. ಈ ಹಾಡಿನಲ್ಲಿ ನಟಿ ಸಮಂತಾ ಕಾಣಿಸಿಕೊಂಡಿದ್ದಾರೆ. ಸಖತ್‌ ಹಾಟ್‌ ಆಗಿ […]

ಮುಂಬಯಿ: ನಟ ವಿಜಯ್ ದೇವರಕೊಂಡ, ಮೈಕ್ ಟೈಸನ್ ಹಾಗೂ ನಟಿ ಅನನ್ಯ ಪಾಂಡೆ ನಟಿಸಿರುವ ಲೈಗರ್ ಸಿನಿಮಾ 2022ರ ಆಗಸ್ಟ್ 25ರಂದು ವಿಶ್ವಾದ್ಯಂತ ತೆರೆಕಾಣಲಿದೆ ಎಂದು ಚಿತ್ರತಂಡ ಗುರುವಾರ(ಡಿಸೆಂಬರ್ 16) ಘೋಷಿಸಿದೆ. ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಜಗತ್ತಿನಾದ್ಯಂತ ಥಿಯೇಟರ್ ನಲ್ಲಿ 2022ರ ಆಗಸ್ಟ್ 25ರಂದು ಬಿಡುಗಡೆಯಾಗಲಿದೆ ಎಂದು ಸಿನಿಮಾದ ನಿರ್ಮಾಪಕ ಕರಣ್ ಜೋಹರ್ ಇನ್ಸ್ ಸ್ಟಾಗ್ರಾಮ್ ನಲ್ಲಿ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. “ಸಾಹಸ, ಕುತೂಹಲ ಹಾಗೂ […]

ಮುಂಬಯಿ: ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರ ಪೈಕಿ ಆಲಿಯಾ ಭಟ್ ಕೂಡಾ ಒಬ್ಬರು. ತಮ್ಮ ಸೌಂದರ್ಯದ ಜೊತೆಗೆ ಅಭಿನಯದಿಂದಲೂ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಈ ಬೆಡಗಿಯ ವಿರುದ್ದ ಮುಂಬೈ ನಲ್ಲಿ ಹೊಸದಾಗಿ ಎಫ್‌ಐಆರ್ ದಾಖಲಾಗಿದೆ. ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಿಯಮಗಳ ಪ್ರಕಾರ, ಕೋವಿಡ್‌ ಸೋಂಕು ಬಂದರೂ ಬರದಿದ್ದರೂ, ಪಾಸಿಟಿವ್‌ ಬಂದ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರೂ 14-ದಿನಗಳು ಕ್ವಾರಂಟೈನ್‌ ನಲ್ಲಿರಬೇಕು. ಆದರೆ ಈ ನಿಯಮಗಳನ್ನು ಉಲ್ಲಂಘಿಸಿ, ದೆಹಲಿಯಲ್ಲಿ […]

ಮುಂಬೈ: ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ , ವಿಕ್ಕಿ ಕೌಶಲ್ ಗೆ ಸೆಲಿಬ್ರಿಟಿ ಫ್ರೆಂಡ್ಸ್ ಗಳಿಂದ ದುಬಾರಿ ಗಿಫ್ಟ್ ಸಿಗುತ್ತಿದೆ. ವಿಕ್ಕಿ ಕೌಶಲ್ ಜೊತೆಗೆ ಕಳೆದ ವಾರ ಮದುವೆಯಾದ ಕತ್ರಿನಾ ಕೈಫ್, ಮಾಜಿ ಬಾಯ್ ಫ್ರೆಂಡ್ ಸಲ್ಮಾನ್ ಖಾನ್ ಅವರಿಂದ ಸುಮಾರು 3 ಕೋಟಿ ರೂ. ಬೆಲೆ ಬಾಳುವ ರೇಂಜ್ ರೋವರ್ ಕಾರನ್ನು ಗಿಫ್ಟ್ ಆಗಿ ಪಡೆದಿರುವುದಾಗಿ ವರದಿಯಾಗಿದೆ. ಮತ್ತೊಂದೆಡೆ ರಣಬೀರ್ ಕಫೂರ್ ಅವರಿಂದ ಸುಮಾರು […]

ಹೈದರಾಬಾದ್​: ಖ್ಯಾತ ನಟ ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಚಿತ್ರ ಹಲವು ವಿವಾದಾತ್ಮಕ ವಿಚಾರಗಳಿಗಾಗಿ ಭಾರಿ ಸುದಿಯಾಗುತ್ತಿದ್ದು, ಚಿತ್ರಕ್ಕೆ ಸಂಗೀತ ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರ ಹೇಳಿಕೆ ವಿವಾದಕ್ಕೆ ಸಿಲುಕಿ ಆಕ್ರೋಶಕ್ಕೆ ಕಾರಣವಾಗಿದೆ. ದೇವಿಶ್ರೀ ಪ್ರಸಾದ್​, ‘ಐಟಂ ಸಾಂಗ್​ ನನಗೆ ಭಕ್ತಿ ಗೀತೆ ಇದ್ದ ಹಾಗೆ, ಐಟಂ ಸಾಂಗ್​ಗಳು ಒಂದು ರೀತಿಯ ಧ್ಯಾನವೂ ಕೂಡ ಹೌದು’ಎಂದು ಹೇಳಿಕೆ ನೀಡಿದ್ದರು. ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ತೆಲಂಗಾಣದ ಬಿಜೆಪಿ […]

ಬಾಲಿವುಡ್‌ ನಟಿ ನೋರಾ ಫ‌ತೇಹಿ ಇದೀಗ ಮತ್ಸ್ಯ ಕನ್ಯೆಯಾಗಿದ್ದಾರೆ! ಹೌದು. ಸದ್ಯದಲ್ಲೇ ಬಿಡುಗಡೆ ಯಾಗಲಿರುವ “ಡ್ಯಾನ್ಸ್‌ ಮೆರಿ ರಾಣಿ’ ಆಲ್ಬಂ ಸಾಂಗ್‌ನಲ್ಲಿ ನೋರಾ ಮತ್ಸéಕನ್ಯೆಯಾಗಿ ಕಾಣಿಸಿಕೊಳ್ಳಲಿ ದ್ದಾರೆ. ಮತ್ಸ್ಯಕನ್ಯೆಯ ಉಡುಪು ಹಾಕಿಕೊಂಡ ನೋರಾಗೆ ಓಡಾಡುವುದು ಅದೆಷ್ಟು ಕಷ್ಟವಾಗಿತ್ತೆಂದರೆ, ಆಕೆಯನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿಕೊಂಡು ಶೂಟಿಂಗ್‌ ಸ್ಪಾಟ್‌ಗೆ ಕರೆದುಕೊಂಡು ಹೋಗಲಾಗಿದೆ. ಕಳೆದ ವರ್ಷ “ನಾಚ್‌ ಮೆರಿ ರಾಣಿ’ ಹಾಡಿನ ಮೂಲಕ ಸಖತ್‌ ವೈರಲ್‌ ಆಗಿದ್ದ ಗುರು ರಾಂಧವ ಮತ್ತು ನೋರಾ ಜೋಡಿ ಈ […]

Advertisement

Wordpress Social Share Plugin powered by Ultimatelysocial