ಕಳೆದ ವರ್ಷ ಅಕ್ಟೋಬರ್ನಲ್ಲಿ ಬಿಸಿಸಿಐ ಸಂಕಷ್ಟದಲ್ಲಿದ್ದಾಗ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದ ಸೌರವ್ ಗಂಗೂಲಿ ಅಧಿಕಾರಾವಧಿ ಮುಗಿದಿದೆ. ಆದ್ದರಿಂದ ಅವರು ಅಧ್ಯಕ್ಷರಾಗಿ ಮುಂದುವರಿಯುತ್ತಾರೋ, ಇಲ್ಲವೋ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಸದ್ಯ ಅವರನ್ನು ಮುಂದುವರಿಸುವುದು ಬಿಡುವುದು ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿದೆ. ಲೆಕ್ಕಾಚಾರದ ಪ್ರಕಾರ ಗಂಗೂಲಿಯ ಒಂಬತ್ತು ತಿಂಗಳ ಆಡಳಿತ ಮುಗಿದಿದೆ. ಬಿಸಿಸಿಐ ಹೊಸ ಸಂವಿಧಾನದ ಪ್ರಕಾರ ಅವರಿನ್ನು ೩ ವರ್ಷ ಕಡ್ಡಾಯ ವಿಶ್ರಾಂತಿ ತೆಗೆದುಕೊಳ್ಳಬೇಕು. ರಾಜ್ಯಸಂಸ್ಥೆಗಳಲ್ಲಾಗಲೀ, ಬಿಸಿಸಿಐಯನ್ನು ಸೇರಿಸಿಯಾಗಲೀ ವ್ಯಕ್ತಿಯೊಬ್ಬರು ಸತತ […]
Speed News Special
ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಬಿಜೆಪಿ ಪಕ್ಷ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕೆರೆದಿದ್ದಾರೆ. ಕೊರೊನಾ ವೈರಸ್ ನಿಯಂತ್ರಣ ಸೇರಿದಂತೆ ವಿವಿಧ ವಿಚಾರಗಳ ಕುರಿತು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದೆಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ ೫ರಂದು ಅಯೋಧ್ಯಯಲ್ಲಿನ ರಾಮ ಮಂದಿರ ನಿರ್ಮಾಣ ಶಂಕು ಸ್ಥಾಪನೆ ಮಾಡಲಾಗುತ್ತಿದೆ ಈ ವಿಚಾರವನ್ನು ಚರ್ಚೆಯಲ್ಲಿ ಪ್ರಸ್ತಾಪಿಸಲಿದಾರೆ ಹಾಗೂ ಕೊರೊನಾ ವೈರಸ್ ನಿಯಂತ್ರಣ ಕ್ರಮದ […]
ರಾಯಚೂರು ಜಿಲ್ಲಾ ಸಿರವಾರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಡ ಕುಟುಂಬದ ಬಾಣಂತಿಯರ ಹೆರಿಗೆಗೆ ಹಣ ವಸೂಲಿ ಮಾಡುತ್ತಿರುವ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು. ಒಂದು ತಿಂಗಳಿನಲ್ಲಿ 60-80 ಹೆರಿಗೆ ಪ್ರತಿಯೊಬ್ಬರಿಂದ 1000-2000 ರೂಗಳು ವಸೂಲಿ ಮಾಡುತ್ತಿರುವ ಸ್ಟಾಫ್ ನರ್ಸ್, ನೀವು ಕೊಡುವ ಮೊತ್ತ ಚಹಾ ಕುಡಿಯಲು ಸಹ ಆಗುವುದಿಲ್ಲ ಎಂದು ಸಾರ್ವಜನಿಕರಿಗೆ ನೇರವಾಗಿ ಇಲ್ಲಿನ ಸ್ಟಾಫ್ ನರ್ಸ್ ಹೇಳ್ತಾರೆ, ಹೆರಿಗೆ ಸಮಯದಲ್ಲಿ ವೈದ್ಯರು ಇರುವುದಿಲ್ಲ ನರ್ಸ್ ಗಳು ನೇರವಾಗಿ ಜನರ […]
ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸವನ್ನು ಮೆರೆಯುತ್ತಿದೆ. ನಿಪ್ಪಾಣಿ ನಗರದ ಬಡ್ಡೆಗಲ್ಲಿಯ 52 ವರ್ಷದ ನಿವಾಸಿಗೆ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ನಿಪ್ಪಾಣಿ ನಗರದ ಮಹಾತ್ಮಗಾಂಧಿ ಆಸ್ಪತ್ರೆ ಯಲ್ಲಿ ವೆಂಟಿಲೇಟರ್ ಇಲ್ಲದ ಕಾರಣ ಸೋಂಕಿತನನ್ನು ಬೆಳಗಾವಿಗೆ ರವಾನೆ ಮಾಡುತ್ತಿದ್ದಾರೆ. ಹಾಗೂ ಈತನಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದ್ದು ಈತನ ಸಂಪರ್ಕ ಕ್ಕೆ ಬಂದಿರುವ ಸುಮಾರು 100 ಅಧಿಕ ಜನರನ್ನು ಹೋಮ್ ಕ್ವಾರೈಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮಹಾಮಾರಿ ಕೊರೊನಾ ವಕ್ಕರಿಸಿದಾಗಿನಿಂದ ದೇಶದಲ್ಲಿ ಅಲವು ಉದ್ಯಮಗಳಿಗೆ ದೊಡ್ಡ ಆರ್ಥಿಕ ಹೊಡೆತಗಳು ಬಿದ್ದಿವೆ, ಅದರಲ್ಲೂ ಕೋಲಾರ ರೈತರ ಜೀವನಾದಾರಿತ ಆಗಿದ್ದ ಹೈನೋದ್ಯಮಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ. ಸಿಲ್ಕ್ & ಮಿಲ್ಕ್ ಗೆ ಹೆಸರುವಾಸಿಯಾಗಿರುವ ಇಡೀ ದೇಶಕ್ಕೆ ಹಾಲು ಉತ್ಪಾದಿಸಿ ಕಳುಹಿಸುತ್ತಿದ್ದ, ಕೋಲಾರ ಜಿಲ್ಲೆಯ ರೈತರು ಈಗ ಹಾಲಿನ ದರ ಏಕಾಏಕಿ ಕಡಿಮೆ ಮಾಡಿರುವುದರಿಂದ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಈಗ ಹಾಲು ಉತ್ಪಾದನೆ ಕೂಡ ಹೆಚ್ಚಾಗಿದ್ದು, ಕೊರೊನಾ ದಿಂದ ಹಾಲು ಮಾರಾಟವಿಲ್ಲದೆ, ಕೋಲಾರ-ಚಿಕ್ಕಬಳ್ಳಾಪುರ […]
ಬೀದರ್ ಜಿಲ್ಲೆಯ ಔರಾದ ಪಟ್ಟಣದ ಹೊರವಲಯದಲ್ಲಿರುವ ಗೋ ಶಾಲೆ ಆವರಣದಲ್ಲಿ ಎಬಿವಿಪಿ ಸಂಘಟನೆ ಹಾಗೂ ಯುವ ಮುಖಂಡದ ವತಿಯಿಂದ ಸ್ವಚ್ಛತಾ ಹಾಗೂ ಸಸಿ ನೆಡುವ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮದ ವೀರಯೋಧ ಗೋವಿಂದರಾವ್ ಶೇಡೋಳೆ ಬಲಿದಾನವನ್ನು ಸ್ಮರಿಸಲಾಯಿತು. ಹಾಗೂ ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಖಂಡಿಕೆರಿ ಗ್ರಾಮದ ಯೋಧ ರಾಮ ಶಂಕರ್ ಜಾಧವ್ ಇವರಿಗೆ ಸನ್ಮಾನ ಮಾಡಲಾಯಿತು. ಕಾರ್ಗಿಲ್ […]
ಭಾನುವಾರದ ಲಾಕ್ಡೌನ್ಗೆ ಸಂಬAಧ ಪಟ್ಟಂತೆ ಭಾನುವಾರ ಪೊಲೀಸರು ಬಾರಿ ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಕೆಂಗೇರಿ ಪೊಲೀಸರು ಅನಗತ್ಯವಾಗಿ ಓಡಾಡುತ್ತಿದೆ ವಾಹನಗಳನ್ನ ಸೀಜ್ ಮಾಡಿದರು. ಕೆಂಗೇರಿ ಚೆಕ್ ಪೋಸ್ಟ್ ನಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಸೀಜ್ ಮಾಡಲಾಗಿದೆ. ರಸ್ತೆಗೆ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ನಡೆಸಿ ಪರಿಶೀಲಿಸಿದ ಪೊಲೀಸರು ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.ಕಾರ್, ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಅದೇ ರೀತಿ ರಾಜ್ಯದ ಹಲವೆಡೆ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನ […]
ಆಗಸ್ಟ್ 1ರ ಬಕ್ರೀದ್ ಹಬ್ಬದ ದಿನದಂದು ಬ್ಯಾಚ್ ಪ್ರಕಾರವಾಗಿ 50 ಜನರಂತೆ ಪ್ರಾರ್ಥನೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದಿಂದ ಆದೇಶಹೊರಡಿಸಲಾಗಿದೆ. ಅಲ್ಲದೇ ಮೈದಾನದ ಸಾಮೂಹಿಕ ಪ್ರಾರ್ಥನಗೂ ಬ್ರೇಕ್ ಹಾಕಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಬದಲಾಗಿ ಬ್ಯಾಚ್ ಪ್ರಕಾರವಾಗಿ ಪ್ರಾರ್ಥನೆ ಸಲ್ಲಿಸಬೇಕು. ಹೀಗಾಗಿ ಬಕ್ರಿದ್ ಹಬ್ಬದ ಸಂದರ್ಭದಲ್ಲಿನ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದೆ.
ಸಂಡೆ ಲಾಕ್ಡೌನ್ ಹಿನ್ನೆಲೆಯಲ್ಲಿ ಇಂದಿನಿಂದಲೇ ಜನರು ತಮ್ಮ ತಮ್ಮ ಸ್ವ ಗ್ರಾಮಗಳತ್ತ ಹೋಗುತ್ತಿದ್ದಾರೆ.ಇಂದು ರಾತ್ರಿ 8 ಗಂಟೆಯಿಂದ ಸಂಡೆ ಲಾಕ್ಡೌನ್ ಜಾರಿಯಾಗಲಿದೆ. ತುಮಕೂರು ರಸ್ತೆ ನವಯುಗ ಟೋಲ್ ಮುಖಾಂತರ ಜನರು ತಮ್ಮ ತಮ್ಮ ಗ್ರಾಮಗಳತ್ತ ಪ್ರಯಾಣ ಮಾಡುತ್ತಿದ್ದು, ನವಯುಗ ಟೋಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದೆ. ಕಳೆದ ಲಾಕ್ಡೌನ್ ವೇಳೆಯಲ್ಲೂ ಬೆಂಗಳೂರು ಬಿಟ್ಟು ಸಾವಿರಾರು ಜನರು ಹೋಗುತ್ತಿದ್ದರು. ಇಂದು ಕೂಡ ವಲಸಿಗರು ಕಾರು, ಬೈಕ್ಗಳ ಮೂಲಕ ಊರಿಗೆ ಹೋಗುತ್ತಿದ್ದಾರೆ.
ರಾಜಸ್ಥಾನ ರಾಜಕಾರಣ ದಿನೇ ದಿನೇ ತಿರುವುಪಡೆದುಕೊಳ್ಳುತ್ತಿದೆ.ಅಶೋಕ್ ಗೆಹ್ಲೋಟ್ ನಾಯಕತ್ವದ ವಿರುದ್ಧ ಬಂಡಾಯ ಎದ್ದಿರುವ ಸಚಿನ್ ಪೈಲೆಟ್ ತನ್ನ ೧೮ಜನ ಬೆಂಬಲಿಗರ ಜೊತೆ ಸೇರಿ ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಕಾಂಗ್ರೆಸ್ ಹೈ ಕಮಾಂಡ್ ನ ಯಾವ ಒಂದು ಆದೇಶಕ್ಕೂ ಕ್ಯಾರೆ ಎನ್ನದೆ ತನ್ನದೆ ದಾರಿಯಲ್ಲಿ ಹೊಗುತ್ತಿದ್ದಾರೆ.ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಅಶೋಕ್ ಗೆಹ್ಲೋಟ್ ರಾಜಸ್ಥಾನ ವಿಧಾನಸಭೆಯ ಅಧಿವೇಶವನ್ನು ಕರೆಯಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿ ಹೊಸ ಪ್ರಸ್ತಾಪವನ್ನು […]