ಮಹಾರಾಷ್ಟ್ರದ 40 ಗ್ರಾಮಗಳು ಕರ್ನಾಟಕಕ್ಕೆ ಸೇರಿಸುವಂತೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈ ಬಗ್ಗೆ ಸದನದಲ್ಲಿ ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿಯವರು ಮಾತನಾಡುತ್ತ, ಈ ಬಗ್ಗೆ ಹೇಳಿದರು.ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪಗೊಳಿಸಿದವರು ಹಾಗೂ ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದಂತ ಬಂಧಿತರ ವಿರುದ್ಧ ಗುಂಡಾ ಕಾಯ್ದೆ ಹಾಗೂ ದೇಶದ್ರೋಹ ಕಾಯ್ದೆಗಳಡಿಯಲ್ಲಿ ಕೇಸ್ ದಾಖಲಿಸಿ, ತನಿಖೆಯ ಮೂಲಕ ಅವರ ಹಿಂದೆ ಯಾರ್ ಇದ್ದಾರೆ ಎನ್ನುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಹೇಳಿದರು.ಮಹಾರಾಷ್ಟ್ರದ ಜತ್ ತಾಲೂಕು, ಬಹಳ ಬರಗಾಲಪೀಡಿತ ತಾಲೂಕಾಗಿದೆ. ಕನ್ನಡಿಗರು ಇರುವಂತ ತಾಲೂಕಾಗಿದೆ. ಈ ತಾಲೂಕಿನ 40 ಗ್ರಾಮ ಪಂಚಾಯ್ತಿಗಳು ಕರ್ನಾಟಕಕ್ಕೆ ಸೇರಿಸುವಂತೆ ರೆಸಲ್ಯೂಷನ್ ಮಾಡಿವೆ. ಇದ್ಯಾವುದನ್ನು ಲೆಕ್ಕಿಸದೇ ಕೆಲ ಪುಂಡರು, ಬೆಂಬಲಿತರು ಒಂದಿಲ್ಲ ಒಂದು ರೀತಿಯಲ್ಲಿ ಬೆಳಗಾವಿಯನ್ನು ಟಾರ್ಗೆಟ್ ಮಾಡಿಕೊಂಡು ಕ್ಷೋಭೆ ಉಂಟು ಮಾಡುವಂತ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.ಈ ಪುಂಡರಿಗೆ, ಬೆಳಗಾವಿಯನ್ನು ಕ್ಷೋಭೆ ತರುತ್ತಿರೋ ಬಗ್ಗೆ ಇತಿಶ್ರೀ ಹಾಡಬೇಕು ಅಂದ್ರೇ, ಎಲ್ಲರೂ ಕೂಡಿ ಕಠಿಣ ನಿಲುವನ್ನು ತೆಗೆದುಕೊಳ್ಳಬೇಕಿದೆ. ಬೆಳಗಾವಿಯ ವಿಧಾನಸಭೆಯ ಸುವರ್ಣ ಸೌಧ ನಿರ್ಮಾಣವಾಗಿರುವಂತೆದ್ದು ಶಕ್ತಿ ಸೌಧವಾಗಿದೆ. ಇಲ್ಲಿ ಯಾವುದೇ ರೀತಿಯ ಕಾಂಪ್ರಮೈಸ್ ಆಗುವುದಾಗೀ, ಮಾತುಕತೆಗೆ ಮುಂದಾಗೋದಾಗಲೀ ಇಲ್ಲವೇ ಇಲ್ಲ. ಗಡಿ ವಿಚಾರದಲ್ಲಿ ಒಂದು ಇಂಚು ಬಿಟ್ಟುಕೊಡೋದಿಲ್ಲ. ಮಹಾರಾಷ್ಟ್ರದಲ್ಲಿರುವಂತ ಕನ್ನಡಿಗರ ರಕ್ಷಣ ನಮ್ಮ ಹೊಣೆಯಾಗಿದೆ ಎಂದರು.
ಮಹಾರಾಷ್ಟ್ರದಲ್ಲಿರುವಂತ ಕನ್ನಡಿಗರು ನಾವು ಕರ್ನಾಟಕಕ್ಕೆ ಸೇರುತ್ತೇವೆ ಅಂದ್ರೇ.. ಅದಕ್ಕೆ ನಾವು ದಿಟ್ಟ ನಿಲುವಿನ ಮೂಲಕ ಕ್ರಮ ಕೈಗೊಳ್ಳಲಿದ್ದೇವೆ. ಇದರ ನಡುವೆಯೂ ಈ ಘಟನೆ ನಡೆದಿದೆಯೋ ಅದು ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿರೋ ವಿಚಾರವಾಗಿ ಅಲ್ಲಿನ ಡಿಜಿಪಿಯೊಂದಿಗೆ ಮಾತನಾಡಿದ್ದೇವೆ. ಕನ್ನಡಿಗರ ರಕ್ಷಣೆ ನಿಮ್ಮ ಹೊಣೆ ಎಂದು ಹೇಳಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ, ಮಹಾರಾಷ್ಟ್ರದ ಸಿಎಂ ಜೊತೆಗೆ ಈ ವಿಚಾರವಾಗಿ ಮಾತುಕತೆ ನಡೆಸೋದಾಗಿ ತಿಳಿಸಿದರು.ಇವತ್ತು ಮೂರ್ತಿಗಳನ್ನು ಭಂಗ ಮಾಡೋದು ಪ್ರವೃತ್ತಿಯಾಗಿದೆ. ನೀವು ಗುಲ್ಬರ್ಗಾ, ಬೀದರ್ ಕಡೆ ಹೋದ್ರೆ.. ಒಂದು ವರ್ಗ ಅಂಬೇಡ್ಕರ್, ಮತ್ತೊಂದು ವರ್ಗ ಬಸವಣ್ಣನ ಮೂರ್ತಿ ಬಂಗ ಮಾಡಲಾಗುತ್ತದೆ. ಅದೇ ರೀತಿಯಲ್ಲೇ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಭಂಗ ಮಾಡಲಾಗಿದೆ. ಇದರ ಹಿಂದೆ ಕ್ರಿಮಿನಲ್ ಮೈಂಡ್ ಇದೆ. ರಾಜ್ಯದಲ್ಲಿ ಅಶಾಂತಿ ಮೂಡಿಸಬೇಕು ಎನ್ನುವ ಉದ್ದೇಶದಿಂದಲೇ ಮಾಡಿರೋದಾಗಿದೆ. ಎಲ್ಲವೂ ಪೂರ್ವ ನಿಯೋಜಿತ ಯೋಚನೆ ಮೂಲಕ ನಡೆಸಿರೋದಾಗಿ ಎಂದರು.ನಾವು ಈ ಬಾರಿ ಕೇವಲ ಬಂಧಿಸಿ, ಬೇಲ್ ನಲ್ಲಿ ಹೊರಗೆ ಬರೋದಕ್ಕೆ ಬಿಡದೇ, ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಮಾಡಲಾಗುತ್ತದೆ. ಯಾರ ಷಡ್ಯಂತರದಿಂದ ಮಾಡಲಾಗಿದೆ ಎನ್ನುವ ತನಿಖೆಯನ್ನು ಮಾಡಲಾಗುತ್ತದೆ. ಅಲ್ಲದೇ ಈ ಕೃತ್ಯವನ್ನು ಎಸಗಿದವರ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ. ದೇಶದ್ರೋಹದ ಕೇಸ್ ಹಾಕಿ ಅವರ ಹಿನ್ನಲೆಯನ್ನು ತನಿಖೆ ಮಾಡಲಾಗುತ್ತದೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada