“ ಕಾಮಿಡಿ ಕಿಲಾಡಿಗಳು ಸೀಸನ್ ೪ ಗ್ರ‍್ಯಾಂಡ್‌ ಫಿನಾಲೆ ”

ವಿಭಿನ್ನತೆಗೆ ಹೆಸರಾದಂತ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಮಿಡಿ ಕಿಲಾಡಿಗಳು ಸಹ ಒಂದು. ನಿತ್ಯದ ಜಂಜಾಟದಲ್ಲಿ ಒದ್ದಾಡುವ ಅದೆಷ್ಟೋ ಮನಸ್ಸುಗಳಿಗೆ ಹಾಸ್ಯದ ಮೂಲಕ ಸಾಂತ್ವಾನದ ಕಚಗುಳಿಯನ್ನಿಡುವ ಉದ್ದೇಶದಿಂದ ಹುಟ್ಟಿಕೊಂಡ ಮಹಾವೇದಿಕೆ ಕಾಮಿಡಿ ಕಿಲಾಡಿಗಳು “ಸೈಡ್ಗಿಡ್ರಿ ನಿಮ್‌ ಟೆನ್ಶನ್‌ಗಳು, ಮತ್ತೇ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು” ಅನ್ನೋ ಸ್ಲೋಗನ್‌ ಮೂಲಕ ವಾರಾಂತ್ಯದಲ್ಲಿ ಕರುನಾಡನ್ನೇ ನಗೆಗಡಲಲ್ಲಿ ತೇಲಿಸಿ, ಕನ್ನಡಿಗರ ಹೃದಯದಲ್ಲಿ ಪ್ರೀತಿಯ ಸ್ಥಾನ ಗಳಿಸಿಕೊಂಡ ಕೀರ್ತಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಸಲ್ಲುತ್ತದೆ.

ಪ್ರತಿ ಸೀಸನ್ನಿನ ವಾಡಿಕೆಯಂತೆ ಕರ್ನಾಟಕದ 31 ಜಿಲ್ಲೆಗಳಿಗೆ ಹೋಗಿ, 60 ಸಾವಿರಕ್ಕು ಹೆಚ್ಚು ಪ್ರತಿಭೆಗಳನ್ನ ಆಡಿಷನ್‌ ಮಾಡಿ, ಅವರಲ್ಲಿ ಅತ್ಯುತ್ತಮರಾದಂತ 16 ಹಾಸ್ಯ ರತ್ನಗಳನ್ನ ನಮ್ಮ ತ್ರಿವಳಿ ತೀರ್ಪುಗಾರರು ಮೆಗಾ ಆಡಿಷನ್‌ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿ ವೇದಿಕೆಗೆ ಪ್ರೀತಿಯ ಸ್ವಾಗತ ಕೋರಿದರು.

ಇನ್ನು “ನಗುವೇ ನಮ್ಮ ಸಿದ್ದಾಂತ, ನಗ್ಸೋದಷ್ಟೇ ನಮ್ಮ ವೇದಾಂತ” ಅನ್ನೋ ಸೂತ್ರಕ್ಕೆ ಬದ್ದರಾದಂತ 16 ಜನ ಕಿಲಾಡಿಗಳು, ರಂಗಭೂಮಿಯ ನುರಿತ ನಿರ್ದೇಶಕರುಗಳ ಸಾರಥ್ಯದೊಂದಿಗೆ ಪ್ರತಿದಿನ ರಂಗ ತಾಲೀಮಿನಲ್ಲಿ ತೊಡಗಿಸಿಕೊಂಡು, ನಟನೆಯ ವೈಖರಿ, ಭಾಷೆಯ ಮೇಲಿನ ಹಿಡಿತಗಳು, ಆಂಗೀಕ ಅಭಿನಯದ ಆಯಾಮಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಅಭಿನಯದ ಮೂಲಕ ಹಾಸ್ಯಕ್ಕೆ ಮತ್ತಷ್ಟು ಮೆರುಗನ್ನ ನೀಡಿ, ಕರುನಾಡಿನ ವೀಕ್ಷಕರೆಲ್ಲರು ಇದು ನಮ್ಮ ನೆಚ್ಚಿನ ಕಾರ್ಯಕ್ರಮ ಎಂದು ಕಾತುರದಿಂದ ಕಾಯುವಂತೆ ಮಾಡುವಲ್ಲಿ ಸೈ ಎನಿಸಿಕೊಂಡಿದ್ದಾರೆ ನಮ್ಮ ಸೀಸನ್‌ 4ನ ಕಿಲಾಡಿಗಳು.

ಇನ್ನು ಈ ಸೀಸನ್‌ನ ಮತ್ತೊಂದು ವಿಶೇಷತೆಯ ಹೊಸ ಪ್ರಯೋಗ ಸ್ಟ್ಯಾಂಡಪ್‌ ಕಾಮಿಡಿ. ತಮ್ಮ ಮಾತಿನ ವೈಖರಿಯ ಮೂಲಕ ವೀಕ್ಷಕರನ್ನ ತಾಸುಗಟ್ಟಲೇ ರಂಜಿಸುವ ನೈಪುಣ್ಯತೆಯಿರುವುದು ಸ್ಟ್ಯಾಂಡಪ್‌ ಕಮೆಡಿಯನ್‌ಗಳಿಗೆ, ಅದರಂತೆ ಈ ಒಂದು ಸಂಚಿಕೆಯಲ್ಲಿ ನಮಗೆ ಸಿಕ್ಕಂತ ಅಪರೂಪದ ಪ್ರತಿಭೆ ರಾಯಚೂರಿನ ಹಾಟ್‌ ಹುಡುಗ ರಾಘವೇಂದ್ರ ಆಚಾರ್ಯ.

ಮೆಗಾ ಆಡಿಷನ್‌ ಮೂಲಕ ಶುರುವಾದಂತ ಕಾರ್ಯಕ್ರಮ ಸರಿ ಸುಮಾರು 22 ವಾರಗಳ ಸುಧೀರ್ಘ ಸಂಚಿಕೆಯಲ್ಲಿ, ಸೆಮಿಫಿನಾಲೆ ಹಂತದವರೆಗೆ ಒಟ್ಟು 150ಕ್ಕು ಹೆಚ್ಚು ಸ್ಕಿಟ್‌ಗಳ ಮೂಲಕ ಭಿನ್ನ, ವಿಭಿನ್ನ ಗೆಟಪ್‌ಗಳ ಮೂಲಕ, ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶಗಳು ಹಾಗು ಪ್ರಯೋಗಾತ್ಮಕ ಸ್ಕಿಟ್‌ಗಳನ್ನ ಅಭಿನಯಿಸುವುದರ ಮೂಲಕ ಕನ್ನಡಿರನ್ನ ರಂಜಿಸುವಲ್ಲಿ ನಮ್ಮ ಕಿಲಾಡಿಗಳು ಹಾಗು ನಗುವಿನ ಮಹಾವೇದಿಕೆ ಸೈ ಎನಿಸಿಕೊಂಡು, ಮನರಂಜನೆಯ ಮೂಲಕ ನಾಡಿನ ಮೆಚ್ಚುಗೆಗೆ ಪಾತ್ರವಾದ ಕಾಮಿಡಿ ಕಿಲಾಡಿಗಳು ಸೀಸನ್‌ 4 ಮಹಾವೇದಿಕೆ ಈಗ ಗ್ರ್ಯಾಂಡ್‌ ಫಿನಾಲೆ ಹಂತಕ್ಕೆ ತಲುಪಿ ಯಶಸ್ವಿಯಾಗಿ ಅಂತ್ಯ ಕಂಡಿದೆ.

ಇನ್ನು ಎಂದಿನಂತೆ ನಮ್ಮ ಕಾರ್ಯಕ್ರಮದ ಹೆಮ್ಮೆಯ ತೀರ್ಪುಗಾರರಾದ ನವರಸ ನಾಯಕ ಜಗ್ಗೇಶ್‌, ಕ್ರೇಜಿಕ್ವೀನ್‌ ರಕ್ಷಿತಾ ಹಾಗು ಲವ್ಲೀ ಸ್ಟಾರ್‌ ಪ್ರೇಮ್‌ರವರು ಗ್ರ್ಯಾಂಡ್‌ ಫಿನಾಲೆಯ ಮೆರುಗನ್ನು ಹೆಚ್ಚಿಸಿದರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸಾರಥಿ, ಕರ್ನಾಟಕದ ನೆಚ್ಚಿನ ನಿರೂಪಕ ಮಾಸ್ಟರ್‌ ಆನಂದ್‌ರವರು ಗ್ರ್ಯಾಂಡ್‌ ಫಿನಾಲೆಯನ್ನು ಮುನ್ನಡೆಸಲಿದ್ದಾರೆ.

ಇವರೆಲ್ಲರ ಜೊತೆಗೆ ನೂರಾರು ಜನ ತಂತ್ರಜ್ಞರು ಹಾಗು ಶ್ರಮಿಕರ ನಿರಂತರ ಪರಿಶ್ರಮದಲ್ಲಿ ಸಜ್ಜಾಗುತ್ತಿರುವ “ಕಾಮಿಡಿ ಕಿಲಾಡಿಗಳು ಸೀಸನ್‌ 4 ಗ್ರ್ಯಾಂಡ್‌ ಫಿನಾಲೆ ಮಹಾವೇದಿಕೆ” ಕೂಡ ಸೀಸನ್‌ 4 ನ ವಿನ್ನರ್‌ ಯಾರಾಗಬಹುದೆಂಬ ಕುತೂಹಲದ ಕ್ಷಣಗಣನೆಗೆ ಕೊನೆಗೂ ತೆರೆ ಬಿದ್ದಿದ್ದು ಒಟ್ಟು 12 ಜನ ಟಾಫ್‌ ಫೈನಲಿಸ್ಟ್‌ ಕಿಲಾಡಿಗಳ ವಿಭಿನ್ನ ಹಾಸ್ಯ ನಾಟಕಗಳ ಜೊತೆ ಜೊತೆಗೆ ಉಳಿದ ಕಿಲಾಡಿಗಳು ಡ್ಯಾನ್ಸ್‌ ಪರ್ಫಾರ್ಮೆನ್ಸ್‌ ಮೂಲಕ ಕರುನಾಡನ್ನ ರಂಜಿಸಲು ಸಿದ್ದರಾಗಿದ್ದಾರೆ.

ಈ ಎಲ್ಲಾ ಅವಿಸ್ಮರಣೀಯ ಕ್ಷಣಗಳಿಗೆ ಕಾಮಿಡಿ ಕಿಲಾಡಿಗಳು ಸೀಸನ್‌ 4 ಗ್ರ್ಯಾಂಡ್‌ ಫಿನಾಲೆ ಮಹಾವೇದಿಕೆ” ಸಕ್ಕರೆನಾಡು ಮಂಡ್ಯ ಜಿಲ್ಲೆ, ಕೃಷ್ಣರಾಜಪೇಟೆ ತಾಲ್ಲೂಕು [ಕೆ.ಆರ್.ಪೇಟೆ] ಪುರಸಭೆ ಮೈದಾನದಲ್ಲಿ , ಇದೇ ಫೆಬ್ರವರಿ 11ರ ಸಂಜೆ ಕಾರ್ಯಕ್ರಮ ನಡೆದಿದ್ದು ಜನಸಾಮಾನ್ಯರ ನಡುವೆ ವಿಜೇತರನ್ನು ಜಗ್ಗಣ್ಣ ರವರು ಘೋಷಿಸಿದ್ದಾರೆ.

ವಾರಾಂತ್ಯದ ಮನರಂಜನೆಯ ಮಹಾಪೂರ ಕಾಮಿಡಿ ಕಿಲಾಡಿಗಳು ಸೀಸನ್‌ 4 ಗ್ರ್ಯಾಂಡ್‌ ಫಿನಾಲೆ ಗೆ ತೆರೆ ಬಿದ್ದಿದ್ದು,

ಮಂಡ್ಯದ ಕೆ ಆರ್ ಪೇಟೆಯಲ್ಲಿ ನಡೆದ ಫಿನಾಲೆಯಲ್ಲಿ ವಿಜೇತರಾಗಿ ಹರೀಶ್ ಹಿರಿಯೂರು ಹೊರಹೊಮ್ಮಿದ್ದಾರೆ. ಇನ್ನ ಮೊದಲನೇ ರನ್ನರ್ ಆಫ್ ಆಗಿ ಗಿಲ್ಲಿ ನಟ ಮತ್ತು ಎರಡನೇ ರನ್ನರ್ ಆಫ್ ಆಗಿ ಶುಭಾ ರವರು ಹೊರಹೊಮ್ಮಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಮತ್ತೆ ಸಂಕಷ್ಟ.

Tue Feb 21 , 2023
ಸದಾಶಿವನಗರದಲ್ಲಿ ರೇಂಜ್ ರೋವರ್ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧ ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಮತ್ತೆ ಸಂಕಷ್ಟ ಎದುರಾಗಿದೆ. ಬರೋಬ್ಬರಿ ಒಂದು ವರ್ಷ ನಾಲ್ಕು ತಿಂಗಳ ಬಳಿಕ ರಿಕ್ಕಿ ರೈ ಹಾಗೂ ಐವರ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ಮಾಡಲಾಗಿದೆ. ೨೦೨೧ ಅಕ್ಟೋಬರ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ್ ನಾಯ್ಡು ಅವರ ೩ ಕೋಟಿ ಮೌಲ್ಯದ ರೇಂಜ್ ರೋವರ್ ಕಾರಿಗೆ ಬೆಂಕಿ ಹಚ್ಚಲಾಗಿತ್ತು. ಹಣಕಾಸು […]

Advertisement

Wordpress Social Share Plugin powered by Ultimatelysocial