ತಾವು ಸ್ನಾನ ಮಾಡುತ್ತಿದ್ದುದನ್ನು ಗುಪ್ತವಾಗಿ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿರುವ ಪ್ರಮೋದ್ ಹಾಗೂ ಗೋವಿಂದರಾಜು ಎಂಬುವವರು ಕಿರುಕುಳ ನೀಡಿದ್ದಾರೆ. ಈ ಕುರಿತು ದೂರು ನೀಡಿದ್ದರೂ ಹೆಬ್ಬಾಳ ಠಾಣೆ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಹೆಬ್ಬಾಳ ಒಂದನೇ ಹಂತದ ನಿವಾಸಿ ಸೌಮ್ಯ ಆರೋಪಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿಗಳಿಬ್ಬರೂ ವಿಡಿಯೋ ದೃಶ್ಯ ತೋರಿಸಿ ತಮ್ಮನ್ನು ಬೆದರಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ಬಳಿಕ ತಮ್ಮ ಮೇಲೆ ಹಲ್ಲೆ ಸಹಾ ಮಾಡಿದ್ದಾರೆ. ಈ ಕುರಿತು ಹೆಬ್ಬಾಳ ಠಾಣೆಯಲ್ಲಿ ದೂರು ಸಹಾ ದಾಖಲಾಗಿದೆ.
ಆದರೆ ಆರೋಪಿಗಳನ್ನು ಇದುವರೆಗೂ ಪೊಲೀಸರು ಬಂಧಿಸಿಲ್ಲ. ಈ ಕುರಿತು ಮೇಲಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಜೊತೆಗೆ ತಮಗೆ ಆರೋಪಿಗಳಿಬ್ಬರೂ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ತಮಗೆ ಮುಂದೆ ಏನಾದರೂ ಅನಾಹುತವಾದಲ್ಲಿ ಅದಕೆಕ ಠಾಣೆ ಪೊಲೀಸರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸೌಮ್ಯ ಅವರ ಪತಿ ಮಂಜುನಾಥ್ ಹಾಜರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: