ಒಂದು ಕಡೆ ಸಿದ್ದರಾಮಯ್ಯ ಟಿಪ್ಪು ಪರ ಮಾತನಾಡ್ತಾರೆ ಇನ್ನೊಂದು ಕಡೆ ಡಿಕೆಶಿವಕುಮಾರ್ ಉಗ್ರರ ಪರ ಮಾತನಾಡ್ತಾರೆ. ಇಬ್ಬರೂ ಕೀಳು ಮಟ್ಟದ ರಾಜಕಾರಣ ಮಾಡ್ತಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ. ಶಾರೀಖ್ ಉಗ್ರ ಅಲ್ಲ ಎಂದು ಹೇಳಲು ಡಿಕೆಶಿ ಇನ್ವೆಸ್ಟಿಗೇ಼ನ್ ಆಫಿಸರಾ? ಇನ್ನು ತನಿಖೆ ಆಗದೇ ಅದು ಹೇಗೆ ಶಾರೀಖ್ ಪರ ಮಾತನಾಡ್ತಾರೆ? ಪುಲ್ವಾಮಾ ಮತ್ತೆ ಮುಬೈ ರೀತಿಯಲ್ಲೇನೂ ಮಂಗಳೂರಿನಲ್ಲಿ ಬ್ಲಾಸ್ಟ್ ಆಗಿಲ್ಲ ಒಂದು ಕುಕ್ಕರ್ ಬ್ಲಾಸ್ ಆಗಿದ್ದನ್ನೇ ದೊಡ್ಡ ರೀತಿಯಲ್ಲಿ ಬಿಂಬಿಸ್ತಿದ್ದಾರೆ ಎಂದು ಡಿಕೆಶಿ ಹೇಳಿದ್ದ ಹೇಳಿಕೆಗೆ ಅಶ್ವಥ್ ನಾರಾಯಣ್ ಪ್ರಶ್ನೆ ಮಾಡ್ತಿದ್ದಾರೆ. ಮುಂಬೈ, ಪುಲ್ವಾಮಾ ರೀತಿಯಲ್ಲಿ ಸ್ಫೋಟ ಆಗಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:
https://play.google.com/store/apps/details?id=com.speed.newskannada
Please follow and like us: