ಲಖೀಂಪುರದ ಖೇರಿ ಜಿಲ್ಲೆಯ ದುದ್ವಾ ಹುಲಿ ಸಂರಕ್ಷಿತ ಪ್ರದೇಶದ ಕತರ್ನಿಯಾ ಘಾಟ್ ನ ವನ್ಯಜೀವಿ ಅಭಯಾರಣ್ಯದ ಬಳಿ ಇರುವ ಕಬ್ಬಿನ ಗದ್ದೆಯಲ್ಲಿ ಹುಲಿಯೊಂದು 10 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದ್ದು . ಅದೃಷ್ಟವಶಾತ್, ಈ ವಿಷಯ ತಿಳಿದ ಆತನ ಅಣ್ಣ ತಕ್ಷಣ ಹುಲಿಯ ಬಾಯಲ್ಲಿದ್ದ ತನ್ನ ತಮ್ಮನ ತಲೆಯನ್ನು ತೆಗೆದು, ಅವನ ಪ್ರಾಣ ವನ್ನು ಉಳಿಸಿದ್ದಾನೆ.
ಗಾಯಾಳುವನ್ನ ರಾಜಕುಮಾರ್ ಎಂದು ಹೇಳಲಾಗಿದ್ದು, ಆತನನ್ನು ಉಳಿಸಿದ್ದು ಆತನ ಅಣ್ಣ ಸುರೇಶ್(22).
ರಾಜಕುಮಾರ್ ಹಾಗು ಸುರೇಶ್ ಕಬ್ಬಿನ ಗದ್ದೆಗೆ ಕೆಲಸಕ್ಕೆಂದು ಬಂದಿದ್ದರು. ಸುರೇಶ್ ಕೆಲಸ ಮಾಡುತ್ತಿದ್ದರೆ, ರಾಜಕುಮಾರ್ ಆಟವಾಡುತ್ತಿದ್ದ. ಆಗ ಹುಲಿ ದಾಳಿ ನಡೆಸಿದೆ. ಅಚಾನಕ್ ಆಗಿ ಅದನ್ನ ಕಂಡ ಸುರೇಶ್, ಹುಲಿಯಿಂದ ತಮ್ಮನನ್ನ ಕಾಪಡಿದ್ದಾನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada