ಖಾನಾಪುರ ತಾಲೂಕಿನ ಚಿರೇಖಾನಿ ಗ್ರಾಮದಲ್ಲಿ ಘಟನೆ
ಚಿರೇಖಾನಿ ಗ್ರಾಮದ ಅಜ್ಜಿ ಮನೆ ಮುಂದೆ ಆಟವಾಡುತ್ತಿದ್ದ ಅದಿತಿ ಏಕಾಏಕಿ ನಾಪತ್ತೆ
ದಟ್ಡವಾದ ಅರಣ್ಯ ಪ್ರದೇಶದಲ್ಲಿರುವ ಚಿರೇಖಾನಿ ಗ್ರಾಮ
ಕುಟುಂಬಸ್ಥರು, ಗ್ರಾಮಸ್ಥರು ಮನೆ ಸುತ್ತಮುತ್ತ, ಅರಣ್ಯದಲ್ಲಿ ಹುಡುಕಿದ್ರು ಪತ್ತೆಯಾಗದ ಅದಿತಿ
ಎರಡು ದಿನಗಳ ಬಳಿಕ ಖಾನಾಪುರ ಪೋಲಿಸರಿಗೆ ದೂರು ನೀಡಿದ್ದ ಪೋಷಕರು
ಅರಣ್ಯ ಇಲಾಖೆ ಸಹಾಯದೊಂದಿಗೆ, ಸ್ಥಳೀಯ ಯುವಕರ ಸಮೇತ ಅರಣ್ಯದಲ್ಲಿ ಶೋಧ ನಡೆಸಿದ ಪೋಲಿಸರು
ಅರಣ್ಯದಲ್ಲಿ ಮರವೊಂದರ ಕೆಳಗೆ ನಿತ್ರಾಣ ಸ್ಥಿತಿಯಲ್ಲಿ ಅದಿತಿ ಪತ್ತೆ
ಅದಿತಿ ಕೈ ಕಾಲುಗಳಿಗೆ ಇರುವೆಗಳು ಕಚ್ಚಿದ್ದರಿಂದ ನಡೆಯಲಾಗದ ಸ್ಥಿತಿಯಲ್ಲಿ ನಿತ್ರಾಣವಾಗಿ ಬಿದ್ದಿದ್ದ ಬಾಲಕಿ
ಮನೆಯಿಂದ 2.5 ಕಿಮೀ ದೂರ ಅರಣ್ಯದಲ್ಲಿ ಬಾಲಕಿ ಪತ್ತೆ
ಸದ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಬಾಲಕಿ ಅದಿತಿಗೆ ಚಿಕಿತ್ಸೆ, ಪ್ರಾಣಾಪಾಯದಿಂದ ಪಾರಾದ ಬಾಲಕಿ
ಮೂರು ದಿನ ಹಗಲು- ರಾತ್ರಿ ದಟ್ಟ ಅರಣ್ಯದಲ್ಲಿದ್ರು ಸಾವು ಗೆದ್ದ ಬಾಲಕಿ
ಸುತ್ತಾಡಲು ಅರಣ್ಯದೊಳಗೆ ಹೋಗಿ,ದಾರಿ ತಪ್ಪಿ ಮರಳಿ ಬರಲಾಗದೇ ನಿತ್ರಾಣಗೊಂಡ ಸಾಧ್ಯತೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada