ಬೆಳಗಾವಿ : ಹೈಕೋರ್ಟ್ ಮಧ್ಯಂತರ ಆದೇಶದ ನಡುವೆಯೂ ರಾಜ್ಯದಲ್ಲಿ ಹಿಜಾಬ್ ಸಂಘರ್ಷ ಮುಂದುವರೆದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಈ ಕದನ ಅಕ್ಷರಶಃ ತಾರಕಕ್ಕೇರಿದೆ.ಜಿಲ್ಲೆಯ ವಿಜಯ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿತ್ತು.ಆದ್ರೆ, ಹಿಜಾಬ್ ತೆಗೆಯದಿದ್ದರಿಂದ ಉಪನ್ಯಾಸಕರು ಪಾಠ ಮಾಡಲು ನಿರಾಕರಿಸಿದ್ದಾರೆ. ಇನ್ನು 2 ಗಂಟೆಗಳ ಕಾಲ ಕಾದು ಕುಳಿತ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮನೆಗೆ ಮರಳಿದ್ದಾರೆ. ಆಗ ಕೆಲ ಯುವಕರು ಕಾಲೇಜಿನ ಬಳಿ ಗಲಾಟೆ ನಡೆಸಿದ್ದರಿಂದ, ಆಡಳಿತ ಮಂಡಳಿ ಕಾಲೇಜಿಗೆ ರಜೆ ಘೋಷಣೆ ಮಾಡಿದೆ. ಅದ್ರಂತೆ, ಸೋಮವಾರದವರೆಗೂ ಅನ್ಲೈನ್ ಕ್ಲಾಸ್ ಮುಂದುವರೆಯಲಿದ್ದು, ನಂತ್ರ ಸಭೆ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ ̤
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada