ಕೆಮ್ಮಿನ ಸಮಸ್ಯೆಗೆ ಮನೆಮದ್ದು | Home Remedies:|

ಹೆಚ್ಚು ತಣ್ಣಗಿನ ಆಹಾರ ಸೇವಿಸಿದಾಗ, ದೇಹ ತಂಪಾದಾಗ, ಹವಾಮಾನದಲ್ಲಿ ಬದಲಾವಣೆಯಾದಾಗ ಶೀತ ಸೇರಿದಂತೆ, ಕೆಮ್ಮಿನ ಸಮಸ್ಯೆಗಳು ಬಹುವಾಗಿ ಕಾಡುತ್ತವೆ. ಇದರಿಂದ ಕಿರಿಕಿರಿಯಾಗುವುದು ಸಾಮಾನ್ಯ.

ಶುಂಠಿ ತುಂಡನ್ನು ಜಜ್ಜಿ ಚಿಟಿಕೆ ಉಪ್ಪು ಬೆರೆಸಿ ಅದನ್ನು ಬಾಯಿಯಲ್ಲೇ ಇರಿಸಿಕೊಳ್ಳುವುದರಿಂದ ಕೆಮ್ಮನ್ನು ದೂರ ಮಾಡಬಹುದು.

ಇದರ ರಸ ಗಂಟಲಿಗೆ ಇಳಿಯುತ್ತಿದ್ದರೆ ಗಂಟಲು ನೋವು ಹಾಗೂ ಕೆಮ್ಮು ದೂರವಾಗುತ್ತದೆ. ಮೂರು ದಿನ ಬಿಡದೆ ಹೀಗೆ ಮಾಡಿದರೆ ಕೆಮ್ಮಿನಿಂದ ಪರಿಹಾರ ದೊರೆಯುತ್ತದೆ.

ವೀಳ್ಯದೆಲೆಗೆ ಶುಂಠಿ ರಸ ಬೆರೆಸಿಡಿ. ಇದಕ್ಕೆ ಜೇನುತುಪ್ಪ ಅಥವಾ ಬೆಲ್ಲ ಸೇರಿಸಿ ಸವಿಯುವುದರಿಂದ ಕೆಮ್ಮಿನ ಸಮಸ್ಯೆಯನ್ನು ದೂರ ಮಾಡಬಹುದು.

ಕುದಿಯುವ ನೀರಿಗೆ ಜೇನುತುಪ್ಪ ಸೇರಿಸಿ ಕುಡಿಯಿರಿ. ದಿನಕ್ಕೆ ಮೂರು ಬಾರಿ ಬಿಸಿಯಾದ ಈ ನೀರನ್ನು ಸೇವಿಸುವುದರಿಂದ ಕೆಮ್ಮು ದೂರವಾಗುತ್ತದೆ.

ತುಳಸಿ ಎಲೆಯ ನೀರಿಗೆ ಕರಿಮೆಣಸು, ಶುಂಠಿ, ಜೇನುತುಪ್ಪ ಬೆರೆಸಿ ಕುಡಿದರೂ ಕೆಮ್ಮು ದೂರವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚುಮು ಚುಮು ಚಳಿಗೆ ಹೆಚ್ಚಾಯ್ತು ಮೊಟ್ಟೆ ರೇಟ್‌ ..!ಮೊಟ್ಟೆ ಪ್ರಿಯರಿಗೆ ಶಾಕಿಂಗ್‌

Tue Jan 25 , 2022
ಎಗ್‌ ಆಮ್ಲೇಟ್ ಎಗ್ ಪಪ್ಸ್, ಎಗ್ ರೈಸ್, ಎಗ್ ಪಕೋಡಾ ಹೀಗೆ ಟೇಸ್ಟಿ ಟೇಸ್ಟಿ ಎಗ್ ಐಟಂಗಳನ್ನ ತಿನ್ನುವ ಎಗ್ ಪ್ರಿಯರು ಈ ಸ್ಟೋರಿ ನೋಡ್ಲೇಬೇಕು. ಬಾಯಿ‌ ಚಪ್ಪರಿಸಿಕೊಂಡು ಚುಮು ಚುಮು ಚಳಿಗೆ ಬಿಸಿಬಿಸಿಯಾಗಿ ಮಜಾ ಮಾಡುವ ಜನರಿಗೆ ಮೊಟ್ಟೆ ಬೆಲೆ ದಿಢೀರ್‌ ಏರಿಕೆಯಿಂದ ಬರೆ ಎಳೆದಂತಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಕೆಲ ದಿನಗಳಿಂದ ಶೀತದಿಂದ ಜನರು ನಡುಗಲಾರಂಭಿಸಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಮಲೆನಾಡು, […]

Advertisement

Wordpress Social Share Plugin powered by Ultimatelysocial