ಮೇಕೆದಾಟು ಯೋಜನೆಯ ಉದ್ದೇಶವೇ ಜನರಿಗೆ ಅನುಕೂಲವಾಗಬೇಕು ಎನ್ನುವುದು . ಆದರೆ, ಕಾಂಗ್ರೆಸ್ಸಿಗರು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನತೆಗೆ ಲಾಭವಾಗುವುದಕ್ಕಿಂತ ತಮಗೆ ಲಾಭವಾಗಲಿ ಎನ್ನುವುದು ಕಾಂಗ್ರೆಸ್ಸಿಗರ ದುರಾಲೋಚನೆಯಾಗಿತ್ತು. ಇದು ನಾಚಿಕೆಗೇಡಿನ ಸಂಗತಿ. ಈ ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಎಂಬ ನಡಿಗೆಯನ್ನು ಮಾಡಿದರು. ಈ ವೇಳೆ ನೀರು ಹಿಡಿದು ಶಪಥ ಮಾಡಿ ವರ್ಷಕ್ಕೆ 10 ಸಾವಿರ ಕೋಟಿ ರು. ಕೊಡುತ್ತೇವೆ ಎಂದು ವಾಗ್ದಾನ ಮಾಡಿದರು. ಐದು ವರ್ಷ ಇವರ ಪಕ್ಷ ಅಧಿಕಾರದಲ್ಲಿದ್ದಾಗ ಈ ಯೋಜನೆಗೆ ಖರ್ಚು ಮಾಡಿದ್ದ ಕೇವಲ 7.5 ಸಾವಿರ ಕೋಟಿ ರು. ಮಾತ್ರ. ಕಾಂಗ್ರೆಸ್ಸಿಗರಿಗೆ ನೀರಾವರಿ ಯೋಜನೆ(Irrigation Project) ಬಗ್ಗೆ ಬದ್ಧತೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada