ಹೊಸದಿಲ್ಲಿ ಫೆಬ್ರವರಿ 18: ದೆಹಲಿ ನಿಕ್ಕಿ ಯಾದವ್ ಸಾವಿನ ಪ್ರಕರಣದಲ್ಲಿ ಬಗೆದಷ್ಟು ವಿಚಾರಗಳು ಹೊರಬರುತ್ತಿವೆ. ಮದುವೆ ದಿನ ಲಿವ್ ಇನ್ ಸಂಗಾತಿ ನಿಕ್ಕಿಯನ್ನು ಸಾಹಿಲ್ ಎಂಬಾತ ಹತ್ಯೆ ಮಾಡಿ ತನ್ನ ಕುಟುಂಬ ಒಡೆತನದ ರೆಸ್ಟೊರೆಂಟ್ನ ಫ್ರಿಡ್ಜ್ನಲ್ಲಿ ಯುವತಿಯ ಶವವನ್ನು ಇರಿಸಿದ್ದನು.
ಈ ಹತ್ಯೆಯಲ್ಲಿ ಸಾಹಿಲ್ಗೆ ತಂದೆ ಸಾಥ್ ನೀಡಿದ್ದಾರೆನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ತನ್ನ ಮಗನಿಗೆ ಕೊಲೆ ಯೋಜನೆಗೆ ಸಹಾಯ ಮಾಡಿದ್ದಕ್ಕಾಗಿ ಸಾಹಿಲ್ ತಂದೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 23 ವರ್ಷದ ನಿಕ್ಕಿ ಯಾದವ್ ಅನ್ನು ಕೆಲ ದಿನಗಳ ಹಿಂದೆ ಆಕೆಯ ಸಂಗಾತಿ ಸಾಹಿಲ್ ಗೆಹ್ಲೋಟ್ ಚಾರ್ಜಿಂಗ್ ಕೇಬಲ್ನಿಂದ ಕತ್ತು ಹಿಸುಕಿ ಕೊಂದನು. ಮಂಗಳವಾರ ದೇಶದಲ್ಲಿ ಅನೇಕರು ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದಾಗ ಪೊಲೀಸರು ನಿಕ್ಕಿ ಯಾದವ್ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಸಾಹಿಲ್ ಗೆಹ್ಲೋಟ್ ಅವರ ತಂದೆಯೊಂದಿಗೆ, ಕೊಲೆಗೆ ಯೋಜನೆ ರೂಪಿಸಲು ಸಹಾಯ ಮಾಡಿದ ಇತರ ಮೂವರು ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಹತ್ಯೆಗೆ ಸಾಥ್ ನೀಡಿದ ತಂದೆ
“ದೆಹಲಿ ಪೊಲೀಸರು 5 ಜನರನ್ನು ಬಂಧಿಸಿದ್ದಾರೆ. ಪಿತೂರಿಯಲ್ಲಿ ಸಹಾಯ ಮಾಡಿದ ಆರೋಪದ ಮೇಲೆ ಸಾಹಿಲ್ ಗೆಹ್ಲೋಟ್ ಅವರ ತಂದೆಯನ್ನೂ ಬಂಧಿಸಲಾಗಿದೆ” ಎಂದು ವಿಶೇಷ ಸಿಪಿ ರವೀಂದರ್ ಯಾದವ್ ತಿಳಿಸಿದ್ದಾರೆ.
ಮತ್ತೊಂದು ಪ್ರಮುಖ ವಿಚಾರ ಅಂದರೆ ಸಾಹಿಲ್ ಮತ್ತು ನಿಕ್ಕಿ ಅಕ್ಟೋಬರ್ 2020 ರಲ್ಲಿ ನೋಯ್ಡಾ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಆದರೆ ಸಾಹಿಲ್ನ ಮನೆಯವರು ಈ ಸಂಬಂಧವನ್ನು ಒಪ್ಪಲಿಲ್ಲ ಮತ್ತು ಬೇರೊಬ್ಬ ಹುಡುಗಿಯೊಂದಿಗೆ ಅವನ ಮದುವೆಯನ್ನು ನಿಶ್ಚಯಿಸಿದ್ದಾರೆ. ನಿಕ್ಕಿ ತನ್ನ ಲಿವ್-ಇನ್ ಸಂಗಾತಿ ಸಾಹಿಲ್ ಇನ್ನೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆಂದು ತಿಳಿದಿರಲಿಲ್ಲ. ಆತನ ಮದುವೆಗೆ ಒಂದು ದಿನ ಮುಂಚಿತವಾಗಿ ಆಕೆಗೆ ಈ ವಿಷಯ ತಿಳಿಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಹಿಲ್ ಮದುವೆ ಮಾಡಿಸಿದ ತಂದೆ
ನಿಕ್ಕಿ ಯಾದವ್ ಫೆಬ್ರವರಿ 9 ರಂದು ದೆಹಲಿಯಲ್ಲಿ ತನ್ನ ಬಾಡಿಗೆ ಮನೆಗೆ ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕಂಡುಕೊಂಡಿದ್ದಾರೆ. ಅಂದು ಆಕೆ ಒಬ್ಬಂಟಿಯಾಗಿದ್ದಳು. ಆಕೆಯ ಸಂಗಾತಿಯು ಗಂಟೆಗಳ ನಂತರ ಅವಳನ್ನು ಕೊಂದಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ. ಫೆಬ್ರವರಿ 9ರ ರಾತ್ರಿ ಫೆಬ್ರವರಿ 10ರಂದು ಸಾಹಿಲ್ ನಿಕ್ಕಿಯನ್ನು ಭೇಟಿಯಾಗಿದ್ದನು. ಮರು ದಿನವೇ ಸಾಹಿಲ್ ಮದುವೆಯಾಗುತ್ತಿದ್ದಾನೆಂಬ ವಿಚಾರವೂ ನಿಕ್ಕಿಗೆ ತಿಳಿದಿತ್ತು. ಹೀಗಾಗಿ ಅವರಿಬ್ಬರು ಕಾರಿನಲ್ಲಿ ಗಂಟೆಗಳವರೆಗೂ ಜಗಳವಾಡಿದ್ದರು.
ಧಾಬಾದಲ್ಲಿದ್ದ ಫ್ರೀಜರ್ನಲ್ಲಿ ಶವ ಪತ್ತೆ
ಜಗಳ ಉಲ್ಬಣಗೊಳ್ಳುತ್ತಿದ್ದಂತೆ, ಸಾಹಿಲ್ ಚಾರ್ಜಿಂಗ್ ಕೇಬಲ್ ಬಳಸಿ ನಿಕ್ಕಿಯ ಕತ್ತು ಹಿಸುಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಶವವನ್ನು ತಮ್ಮ ಕುಟುಂಬದ ಧಾಬಾದಲ್ಲಿದ್ದ ಫ್ರೀಜರ್ನಲ್ಲಿ ಇಟ್ಟಿದ್ದನು. ಜೊತೆಗೆ ಮದುವೆ ಕಾರ್ಯದಲ್ಲಿ ಭಾಗವಹಿಸಿದ್ದನು. ಬಳಿಕ ವಿಚಾರ ತಿಳಿದ ನವ ವಧು ತವರು ಮನೆ ಸೇರಿದ್ದಾಳೆ.
ಶ್ರದ್ಧಾ ವಾಕರ್ ಪ್ರಕರಣ
ದೆಹಲಿಯಲ್ಲಿ ಲಿವ್ ಇನ್ ಪಾರ್ಟನರ್ ನಿಂದ ಕೊಲೆಯಾಗಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಶ್ರದ್ಧಾ ವಾಕರ್ ಎಂಬ ಯುವತಿಯನ್ನು ಆಕೆಯ ಲೈವ್-ಇನ್ ಸಂಗಾತಿ ಅಫ್ತಾಬ್ ಪೂನಾವಾಲಾ ಕೊಲೆ ಮಾಡಿದ್ದನು. ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಗರದಾದ್ಯಂತ ಅವುಗಳನ್ನು ವಿಲೇವಾರಿ ಮಾಡುವ ಮೊದಲು ಫ್ರಿಡ್ಜ್ನಲ್ಲಿ ಸಂಗ್ರಹಿಸಿದ್ದನು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada