ವಸಂತ್ ಮೇಲೆ ಗುಂಡು ಹಾರಿಸಿದ ಆರೋಪಿ ಹೆಸರು ಸಂತೋಷ್ ಅಲಿಯಾಸ್ ಮಲಿಕ್ ಎಸ್ ಪಾಟೀಲ್…
ಆರೋಪಿ ಸಂತೋಷ್ ಅಲಿಯಾಸ್ ಮಲಿಕ್ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿರೋ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆ.
ಕಳೆದ ಏಪ್ರಿಲ್ 20 ರಾತ್ರಿ 10 .30 ಕ್ಕೆ ವಸಂತ್ ಎಂಬ ವ್ಯಕ್ತಿ ಮೇಲೆ ಚಿತ್ರಮಂದಿರದಲ್ಲಿಯೇ ಗುಂಡು ಹಾರಿಸಿದ್ದ ಸಂತೋಷ್.
ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಕೆ.ಜಿ.ಎಫ್ 2 ಸಿನಿಮಾ ವೀಕ್ಷಣೆ ಸಂದರ್ಭದಲ್ಲಿ ನಡೆದಿದ್ದ ಘಟನೆ.
ಸಿನಿಮಾ ವೀಕ್ಷಣೆ ವೇಳೆ ಮುಂದಿನ ಸೀಟ್ ಮೇಲೆ ಕಾಲು ಹಾಕಿ ಕುಳಿತಿದ್ದ ವಸಂತ್.
ವಸಂತ್ ಸೀಟ್ ಮೇಲೆ ಕಾಲು ಹಾಕಿ ಕುಳಿತಿದ್ದು ಪ್ರಶ್ನಿಸಿದ್ದ ಆರೋಪಿ ಸಂತೋಷ್ ಅಲಿಯಾಸ್ ಮಲಿಕ್.
ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಐದು ನಿಮಿಷ ಥಿಯೇಟರ್ ನಿಂದ ಆಚೆ ನಡೆದಿದ್ದ ಸಂತೋಷ್ ಅಲಿಯಾಸ್ ಮಲಿಕ್ ವಸಂತ್ ಮೇಲೆ ಫೈರ್ ಮಾಡಿದ್ದ.
ಎರಡು ಗುಂಡು ವಸಂತ್ ಹೊಟ್ಡೆಗೆ ತಗುಲಿ ಸದ್ಯ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಸಂತ್.
ಆರೋಪಿ ಸಂತೋಷ್ ಅಲಿಯಾಸ್ ಮಲಿಕ್ ಗೆ ಬಲೆ ಬೀಸಿರುವ ಪೊಲೀಸರು.ಘಟನೆ ನಡೆದು ವಾರ ಕಳೆದರೂ ಪತ್ತೆಯಾಗದ ಆರೋಪಿ.
ಆರೋಪಿ ಸಂತೋಷ್, ಅಲಿಯಾಸ್ ಮಲಿಕ್ ಬಗ್ಗೆ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಮನವಿ ಮಾಡಿರುವ ಪೊಲೀಸ್ ಇಲಾಖೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: