ಶಿಗ್ಗಾವಿ ರಾಜಶ್ರೀ ಚಿತ್ರಮಂದಿರದಲ್ಲಿ ವಸಂತ್ ಎಂಬ ಯುವಕನ ಮೇಲೆ ಶೂಟೌಟ್ ಪ್ರಕರಣ…!

ವಸಂತ್ ಮೇಲೆ ಗುಂಡು ಹಾರಿಸಿದ ಆರೋಪಿ ಹೆಸರು ಸಂತೋಷ್ ಅಲಿಯಾಸ್ ಮಲಿಕ್ ಎಸ್ ಪಾಟೀಲ್…

ಆರೋಪಿ ಸಂತೋಷ್ ಅಲಿಯಾಸ್ ಮಲಿಕ್ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿರೋ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆ.

ಕಳೆದ ಏಪ್ರಿಲ್ 20 ರಾತ್ರಿ 10 .30 ಕ್ಕೆ ವಸಂತ್ ಎಂಬ ವ್ಯಕ್ತಿ ಮೇಲೆ ಚಿತ್ರಮಂದಿರದಲ್ಲಿಯೇ ಗುಂಡು ಹಾರಿಸಿದ್ದ ಸಂತೋಷ್.

ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಕೆ.ಜಿ.ಎಫ್ 2 ಸಿನಿಮಾ ವೀಕ್ಷಣೆ ಸಂದರ್ಭದಲ್ಲಿ ನಡೆದಿದ್ದ ಘಟನೆ.

ಸಿನಿಮಾ ವೀಕ್ಷಣೆ ವೇಳೆ ಮುಂದಿನ ಸೀಟ್ ಮೇಲೆ ಕಾಲು ಹಾಕಿ ಕುಳಿತಿದ್ದ ವಸಂತ್.

ವಸಂತ್ ಸೀಟ್ ಮೇಲೆ ಕಾಲು ಹಾಕಿ ಕುಳಿತಿದ್ದು ಪ್ರಶ್ನಿಸಿದ್ದ ಆರೋಪಿ ಸಂತೋಷ್ ಅಲಿಯಾಸ್ ಮಲಿಕ್.

ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಐದು ನಿಮಿಷ ಥಿಯೇಟರ್ ನಿಂದ ಆಚೆ ನಡೆದಿದ್ದ ಸಂತೋಷ್ ಅಲಿಯಾಸ್ ಮಲಿಕ್ ವಸಂತ್ ಮೇಲೆ ಫೈರ್ ಮಾಡಿದ್ದ.

ಎರಡು ಗುಂಡು ವಸಂತ್ ಹೊಟ್ಡೆಗೆ ತಗುಲಿ ಸದ್ಯ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಸಂತ್.

ಆರೋಪಿ ಸಂತೋಷ್ ಅಲಿಯಾಸ್ ಮಲಿಕ್ ಗೆ ಬಲೆ ಬೀಸಿರುವ ಪೊಲೀಸರು.ಘಟನೆ ನಡೆದು ವಾರ ಕಳೆದರೂ ಪತ್ತೆಯಾಗದ ಆರೋಪಿ.

ಆರೋಪಿ ಸಂತೋಷ್, ಅಲಿಯಾಸ್ ಮಲಿಕ್ ಬಗ್ಗೆ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಮನವಿ ಮಾಡಿರುವ ಪೊಲೀಸ್ ಇಲಾಖೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕನಕಗಿರಿಯಲ್ಲಿ ಆಲಿಕಲ್ಲು‌ ಮಳೆ...!

Fri Apr 29 , 2022
ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ಆಲಿಕಲ್ಲು‌ಮಳೆ..ಜಿಲ್ಲೆಯಾದ್ಯಂತ ಸಂಜೆ ಇಂದ ಅಲ್ಲಲ್ಲಿ ಧಾರಾಕಾರ ಮಳೆ.. ಕುಷ್ಟಗಿ,ಕನಕಗಿರಿ ಭಾಗದಲ್ಲಿ ಧಾರಾಕಾರ‌ಮಳೆ.ಬಿಸಿಲಿನ‌ ಬೇಗೆಗೆ ತತ್ತರಿಸಿದ ಜನರಿಗೆ ತಂಪೆರದ ವರುಣ. ಕೊಪ್ಪಳ ಜಿಲ್ಲೆಯ ವಿವಿಧೆಡೆ ‌ಗುಡುಗು-ಸಿಡಿಲು ಸಮೇತ ಬಾರಿ ಮಳೆ. ಸಿಡಿಲಿನ ಹೊಡೆತಕ್ಕೆ ಹೊತ್ತಿ ಉರಿದ ತೆಂಗಿನ ಮರ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಕೇರಾ ಗ್ರಾಮ ಘಟನೆ. ಸಿಡಿಲಿನ ಹೊಡೆತಕ್ಕೆ ಧಗ-ಧಗನೇ ಹೊತ್ತಿ ಉರಿದ ತೆಂಗಿನಮರ ಅದೃಷ್ಟವಶಾತ್ ಅಪಾಯದಿಂದ ಪಾರಾದ ಗ್ರಾಮದ ನಿವಾಸಿಗಳು ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial