ಮುದ್ದಹನುಮೇಗೌಡ ಬರೀ ಐರನ್ ಲೆಗ್ ಅಲ್ಲಾ..ಅದಕ್ಕಿಂತ ಕೆಟ್ಟದ್ದು.. ಅವರನ್ನು ನಂಬಿದೋರೆಲ್ಲಾ ಹಾಳಾಗಿ ಹೋಗಿದ್ದಾರೆ
ಕಾಂಗ್ರೆಸ್ ಮಾಜಿ ಸಂಸದ ಮುದ್ದಹನುಮೇಗೌಡರ ವಿರುದ್ದ ಹರಿಹಾಯ್ದ ಕಾಂಗ್ರೆಸ್ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ಮುದ್ದಹನುಮೇಗೌಡ
ಬಿಜೆಪಿ ಗೆ ಸೇರ್ತಾರೆ ಎಂಬ ವದಂತಿ ಬೆನ್ನಲ್ಲೆ ರಾಮಸ್ವಾಮಿ ಗೌಡ ಹಿಗ್ಗಾಮುಗ್ಗಾ ವಾಗ್ದಾಳಿ ಮುದ್ದಹನುಮೇಗೌಡ ಬೆಳಗ್ಗೆ ಕಾಂಗ್ರೆಸ್ ಅಂತಾರೆ
ಮಧ್ಯಾಹ್ನ ಬಿಜೆಪಿ ,ಸಾಯಂಕಾಲ ಅಮ್ ಆದ್ನಿ ಅಂತಾರೆ ಮುದ್ದಹನುಮೇಗೌಡರು ಸುಲಭದಲ್ಲಿ ಸ್ವಾಹ ಮಾಡುವ ಗಿರಾಕಿ ಕಾಂಗ್ರೆಸ್ ಇಬ್ಬಾಗ ಮಾಡಿದ ಪುಣ್ಯಾತ್ಮ
ಈಗ ಬಿಜೆಪಿಗೆ ಹೋದರೆ ಗೆದ್ದು ಬಿಡ್ತಿನಿ ಅನ್ನೋ ಸ್ವಾರ್ಥಿ ಮುದ್ದಹನುಮೇಗೌಡ ಅವರಿಗೇ ರಾಜಕೀಯದಲ್ಲಿ ಯಾವ ನೈತಿಕತೆನೂ ಇಲ್ಲ
ಕುಣಿಗಲ್ ತಾಲೂಕಿನಲ್ಲಿ ಅವರ ಸಾಧನೆ ಏನು ಒಂದೇ ಒಂದು ಅಡಿ ಕಾಲುವೆ ಮಾಡಿದ್ದಾರಾ ನಾನು ಕುಣಿಗಲ್ ತಾಲೂಕಿನವನು ಅಂತಾನೆ
ಕುಣಿಗಲ್ ನಿಂದ ಟಿಕೆಟ್ ಕೇಳ್ತಾರೆ ಎಲ್ಲರೂ ಪ್ರೈಮರಿ ಸ್ಕೂಲ್, ಮಿಡಲ್ ಸ್ಕೂಲ್ , ಹೈ ಸ್ಕೂಲ್ ಇಲ್ಲೇ ಓದಿರೋದು
ಇಲ್ಲಿ ಓದಿದ್ದೇನೆ ಅಂದ ಮಾತ್ರಕ್ಕೆ ಟಿಕೆಟ್ ಕೊಡಬೇಕು ಅಂತಂದ್ರೆ ಬಹಳಷ್ಟು ಮಂದಿ ಎಮ್ ಎಲ್ ಎ ಆಗ್ಬಿಡುತ್ತಾರೆ
ಮುದ್ದಹನುಮೇಗೌಡರು ಶಾಸಕರಾಗಿದ್ದದ್ದು ಕುಣಿಗಲ್ ತಾಲೂಕಿನ ೨೦ ಗ್ರಾ.ಪಂ ವ್ಯಾಪ್ತಿಯಲ್ಲಿ ಮಾತ್ರ ಮುದ್ದಹನುಮೇಗೌಡರು ಬರೀ ಐರನ್ ಲೆಗ್ ಅಲ್ಲಾ
ಅದಕಿಂತ ಕೆಟ್ಟದ್ದು ಅವರನ್ನು ನಂಬಿದವರನೆಲ್ಲಾ ಹಾಳು ಮಾಡಿ ಬಿಡುತ್ತಾರೆ ಅವರು ಕಾಲಿಟ್ಟ ಪಕ್ಷ ಎಲ್ಲಾ ಮುಳುಗಿ ಹೋಗುತ್ತದೆ
ನನ್ನ ಜೊತೆಯಲ್ಲಿ ಇದ್ದುಕೊಂಡೆ ನನಗೆ ಟಿಕೆಟ್ ತಪ್ಪಿಸಿದ ಕುತಂತ್ರಿ ಇನ್ನೊಬ್ಬರು ಬೆಳಿಬಾರದು ಅನ್ನುವ ಕೆಟ್ಟ ಮನೋಭಾವ ಅವರದ್ದು
ಅವರು ಗೆದ್ದು ಕೆಲಸ ಮಾಡಿದ್ದ ಲೋಕಸಭಾ ಕ್ಷೇತ್ರದ ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸ್ಪರ್ಧಿಸಿ ಚಾಲೆಂಜ್ ತೋರಿಸಲಿ
ಕುಣಿಗಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಕಟುವಾಗಿ ಟೀಕಿಸಿದ ಮಾಜಿ ಶಾಸಕ ರಾಮಸ್ವಾಮಿ ಗೌಡ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಯಾಗಿರುವ ರಾಮಸ್ವಾಮಿ ಗೌಡ
ಹಾಲಿ ಶಾಸಕ ಡಿಕೆಶಿ ಸಂಬಂಧಿ ಡಾ.ರಂಗನಾಥ್ ಇದ್ದರೂ ಟಿಕೆಟ್ ಗಾಗಿ ಈಗಿನಿಂದಲೇ ಪಟ್ಟು ಆರಂಭಿಸಿರುವ ರಾಮಸ್ವಾಮಿ ಗೌಡ
ಕುಣಿಗಲ್ ನಿಂದ ಮುದ್ದಹನುಮೇಗೌಡ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ವಿರೋದ ವ್ಯಕ್ತಪಡಿಸುವ ರಾಮಸ್ವಾಮಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: