ಅಪರಿಚಿತ ಶವ ಪ್ರಕರಣ ಬೇಧಿಸಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು
ಅನುಮಾನಸ್ಪದವಾಗಿ ಸಿಕ್ಕ ಮೃತದೇಹದ ಅಸಲಿಯತ್ತು ಬೆಳಕಿಗೆ
ಜನವರಿ 13 ರಂದು ಸುಂಕದಕಟ್ಟೆ ಮೋರಿಯಲ್ಲಿ ಶವವೊಂದು ಸಿಕ್ಕಿತ್ತು
ಅಸಹಜ ಸಾವು ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು
ತನಿಖೆ ವೇಳೆ ಮೃತವ್ಯಕ್ತಿ ವೆಂಕಟಸ್ವಾಮಿ(52) ಅನ್ನೋದು ಪತ್ತೆ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು
ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಅನ್ನೋದು ಬೆಳಕಿಗೆ
ಎಡಭಾಗದ ಎಲುಬುಗಳು ಮುರಿದು ರಕ್ತಸ್ರಾವವಾಗಿ ಶ್ವಾಸಕೋಶ ಸಂಕುಚಿತ ಗೊಂಡಿತ್ತು
ನಂತರ ತನಿಖೆ ಕೈಗೊಂಡ ಕಾಮಾಕ್ಷಿಪಾಳ್ಯ ಪೊಲೀಸರಿಂದ ಆರೋಪಿ ವೆಂಕಟೇಶ್ ಬಂಧನ
ತಾನು ಬಸ್ ನಿಲ್ಲಿಸಿದ ಜಾಗದಲ್ಲಿ ಬಸ್ ನಿಲ್ಲಿಸಿದಕ್ಕೆ ಕೊಲೆ
ಜಿಟಿ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ ಬಳಿ ಬಸ್ ನಿಲ್ಲಿಸಿ ಮಲಗಿದ್ದ ಮೃತ ವೆಂಕಟಸ್ವಾಮಿ
ತಾನು ಬಸ್ ನಿಲ್ಲಿಸಿದ ಜಾಗದಲ್ಲಿ ಬಸ್ ನಿಲ್ಲಿಸಿದ್ದಾನೆಂದು ಕಿರಿಕ್ ತೆಗೆದಿದ್ದ ಹಂತಕ ವೆಂಕಟೇಶ್
ಬಸ್ ಗಾಜನ್ನು ಕಲ್ಲಿನಲ್ಲಿ ಒಡೆದು ಹಾಕಿ ಕಿರಿಕ್ ಮಾಡಿದ್ದ ವೆಂಕಟೇಶ್
ನಂತರ ಒಳ ಬಂದು ವೆಂಕಟಸ್ವಾಮಿ ಜೊತೆ ಜಗಳವಾಡಿದ್ದ
ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ
ನಂತರ ಎದೆ ಭಾಗಕ್ಕೆ ಕಾಲಿನಲ್ಲಿ ಒದ್ದು ಕೊಂದು ಹಾಕಿದ್ದ
ನಂತರ ಸುಂಕದಕಟ್ಟೆ ಬಳಿ ಮೃತ ದೇಹ ಎಸೆದು ಪರಾರಿಯಾಗಿದ್ದ ವೆಂಕಟೇಶ್
ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು
ಸದ್ಯ ಆರೋಪಿ ವೆಂಕಟೇಶ್ ಬಂಧಿಸಿರುವ ಪೊಲೀಸರು.
https://play.google.com/store/apps/details?id=com.speed.newskannada