ಶನಿವಾರ ಆಂಜನೇಯನಿಗೆ ಇವುಗಳನ್ನು ಅರ್ಪಿಸಿದರೆ ಕಷ್ಟಗಳೆಲ್ಲ ನಿವಾರಣೆಯಾಗುತ್ತಂತೆ

ಸಾಮಾನ್ಯವಾಗಿ ಶನಿವಾರ(Saturday) ಆಂಜನೇಯನ (Lord Hanuman) ಆರಾಧನೆ ಮಾಡಲಾಗುತ್ತದೆ. ತನ್ನನ್ನ ನಿಷ್ಕಲ್ಮಶ ಹೃದಯದಿಂದ ಪೂಜಿಸಿದರೆ ಹನುಮಂತನು ಬೇಗನೆ ತನ್ನ ಭಕ್ತನನ್ನು ಮೆಚ್ಚಿ ಆಶೀರ್ವದಿಸುತ್ತಾನೆ ಎಂದು ಹೇಳಲಾಗುತ್ತದೆ. ಆದರೂ ಭಗವಾನ್‌ ಹನುಮನ ಆಶೀರ್ವಾದ ಪಡೆಯಲು ಏನನ್ನು ಅರ್ಪಿಸಬೇಕು ಎನ್ನುವುದರ ಮಾಹಿತಿ ಇಲ್ಲಿದೆ.
ಕುಂಕುಮ

ಒಮ್ಮೆ ಸೀತಾದೇವಿಯ ಬೈತಲೆಯ ಮೇಲೆ ಹಚ್ಚಿರುವ ಕುಂಕುಮವನ್ನು ನೋಡಿ ಆಂಜನೇಯನು ಯಾಕೆ ಕುಂಕುಮ ಹಚ್ಚಬೇಕು ಎಂದು ಕೇಳಿದಾಗ ಸೀತಾದೇವಿಯು ಇದು ರಾಮನ ಮೇಲಿರುವ ಪ್ರೀತಿಯ ಸಂಕೇತ ಎನ್ನುತ್ತಾಳೆ. ಇದರಿಂದ ಹನುಮಂತ ಸಹ ತನಗೆ ರಾಮನ ಮೇಲಿರುವ ಪ್ರೀತಿ ತೊರಿಸುವ ಸಲುವಾಗಿ ಮೈ ಮೇಲೆ ಪೂರ್ತಿಯಾಗಿ ಕುಂಕುಮವನ್ನು ಹಚ್ಚಿಕೊಂಡು ಹೋಗುತ್ತದೆ, ಇದರಿಂದ ರಾಮ ವರ ನೀಡಿ, ಯಾರು ಆಂಜನೆಯನಿಗೆ ಭಕ್ತಿಯಿಂದ ಕುಂಕುಮ ಅರ್ಪಣೆ ಮಾಡುತ್ತಾರೆಯೋ ಅವರ ಕಷ್ಟಗಳೆಲ್ಲ ನಿವಾರಣೆಯಾಗುವುದೆಂದು ಹೇಳುತ್ತಾನೆ.

ಅಲ್ಲದೇ ನೀವು ಮಲ್ಲಿಗೆ ಎಣ್ಣೆಯೊಂದಿಗೆ ಕುಂಕುಮವನ್ನು ಅರ್ಪಿಸಬಹುದು. ಇದಲ್ಲದೆ ಕೆಂಪುಚಂದನದೊಂದಿಗೆ ಕೆಂಪು ಬಟ್ಟೆ ಹಾಗೂ ಕೆಂಪು ಹೂವು ಅರ್ಪಿಸಬೇಕು ಇದರಿಂದ ಆಂಜನೇಯ ಸಂತುಷ್ಠನಾಗಿ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ ಎಂಬ ನಂಬಿಕೆ ಇದೆ.

ಹುರಿದ ಹೆಸರು ಬೇಳೆ
ಹುರಿದ ಹೆಸರು ಬೇಳೆಯೊಂದಿಗೆ ಬೆಲ್ಲವನ್ನು ನೀಡಬೇಕು, ಗೋಧಿ ಹಾಗೂ ಬೆಲ್ಲದಿಂದ ಮಾಡಿದ ಸಿಹಿಯ ಆಹಾರ ಪದಾರ್ಥವನ್ನು ಆಂಜನೇಯನಿಗೆ ನೀಡುವುದು ಉತ್ತಮ ಎನ್ನಲಾಗುತ್ತದೆ.
ಶನಿವಾರ ಸೂರ್ಯಾಸ್ತದ ನಂತರ ಹನುಮಾನ್ ದೇವಾಲಯದೊಳಗೆ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸಿ. ಇದರ ನಂತರ ನೀವು ಹನುಮಾನ್ ಚಾಲೀಸಾವನ್ನು ಅಥವಾ ಸುಂದರಕಾಂಡವನ್ನು ಓದಬೇಕು. ಹೀಗೆ ಪ್ರತಿ ಶನಿವಾರ ಮಾಡುವುದರಿಂದ ಹನುಮಂತ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ.

ತೆಂಗಿನ ಕಾಯಿ
ತೆಂಗಿನಕಾಯಿಯನ್ನು ಹನುಮಾನ್ ದೇವಸ್ಥಾನದ ಹನುಮಂತನ ಮೂರ್ತಿಯ ಮುಂದೆ, ತೆಂಗಿನಕಾಯಿಯನ್ನು ನಿಮ್ಮ ತಲೆಯ ಮೇಲಿಂದ ಏಳು ಬಾರಿ ತಿರುಗಿಸಿ ‘ಓಂ ರಾಮದೂತಾಯ ನಮಃ’ ಎಂಬ ಮಂತ್ರವನ್ನು ಜಪಿಸುತ್ತಲೇ ದೇವರ ಮೂರ್ತಿಯ ಮುಂದೆ ಕಾಯಿ ಒಡೆದರೆ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.
ಪಂಚಮುಖಿ ಆಂಜನೇಯನಿಗೆ ತೆಂಗಿನಕಾಯಿ ಅರ್ಪಿಸುವುದು ಹೆಚ್ಚು ಪವಿತ್ರ ಎನ್ನಲಾಗುತ್ತದೆ. ಅಲ್ಲದೇ, ಹನುಮಾನ್ ಚಾಲೀಸಾ ಯಂತ್ರದಿಂದ ಸಹ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ. ನೀವು ಹನುಮಾನ್ ಚಾಲೀಸಾ ಯಂತ್ರದ ಲಾಕೆಟ್ ಧರಿಸಿದರೆ, ಆಂಜನೇಯ ನಿಮ್ಮ ಎಲ್ಲಾ ತೊಂದರೆಗಳನ್ನು ನಿವಾರಿಸಿ ನಿಮ್ಮ ಬದುಕಿನಲ್ಲಿ ಸುಖ ಶಾಂತಿ ನೆಲೆಸುವಂತೆ ಮಾಡುತ್ತಾನೆ.

Please follow and like us:

Leave a Reply

Your email address will not be published. Required fields are marked *

Next Post

ಸಂಕ್ರಾಂತಿಯೊಳಗೆ ದೇಶದಲ್ಲಿ ಮತ್ತೊಂದು ದೊಡ್ಡ ದುರಂತ!?; ಕೋಡಿಹಳ್ಳಿಮಠದ ಶ್ರೀಗಳಿಂದ ಭವಿಷ್ಯ

Fri Dec 24 , 2021
ರಾಣೆಬೆನ್ನೂರ: ಮೊನ್ನೆ ನಡೆದ ಭಾರತೀಯ ಸೇನೆಯ ಮುಖ್ಯಸ್ಥರ ಅವಘಡದಂತೆ ಸಂಕ್ರಾತಿಯೊಳಗೆ ಮತ್ತೊಂದು ರಾಜಕೀಯ ಅವಘಡ ಸಂಭವಿಸುವ ಲಕ್ಷಣವಿದೆ. ಇದರಿಂದ ಜಗತ್ತು ತಲ್ಲಣಗೊಳ್ಳಲಿದೆ ಎಂದು ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗೀಂದ್ರ ಸ್ವಾಮೀಜಿ ಭವಿಷ್ಯ ನುಡಿದರು. ನಗರಕ್ಕೆ ಶುಕ್ರವಾರ ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಆಗಮಿಸಿದ ಅವರು ಮಾಧ್ಯಮದರೊಂದಿಗೆ ಮಾತನಾಡಿ, ನಾನು ಈ ಹಿಂದೆಯೇ ದೊಡ್ಡಮಟ್ಟದ ಅವಘಡ ಸಂಭವಿಸುವ ಕುರಿತು ಹೇಳಿದ್ದೆ. ಅದರಂತೆ ಭಾರತೀಯ ಸೇನೆಯ ಮುಖ್ಯಸ್ಥರ ಹೆಲಿಕಾಪ್ಟರ್ ದುರಂತ ಪ್ರಕರಣ ನಡೆದು […]

Advertisement

Wordpress Social Share Plugin powered by Ultimatelysocial