ತಾಯಿ ಮೇಲೆ ಹಲ್ಲೆ ಮಾಡಿ, ಬಂಧನದ ಭಯದಿಂದ ವಿಷ ಸೇವಿಸಿದ ಮಗ..!

 

 

ನವದೆಹಲಿ : ಮಗನೊಬ್ಬ ಸಹೋದರಿಗೆ ನೋಡಿದ ವರ ಸರಿಯಿಲ್ಲ ಎಂದು ಜಗಳ ತೆಗೆದು, ತಾಯಿಯ ಮೇಲೆಯೇ ಹಲ್ಲೆ ಮಾಡಿ ಕೊನೆಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.ನಗರದ ಗುರುಗ್ರಾಮ್ ಸೆಕ್ಟರ್ ನ ಗಾಂಧಿ ನಗರದ ನಿವಾಸಿಯೇ ಈ ರೀತಿ ಮಾಡಿದ್ದಾನೆ.ಈ ವ್ಯಕ್ತಿ ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದ್ದು, ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ.ಇತ್ತೀಚೆಗೆ ಈತನ ಕಿರಿಯ ಸಹೋದರಿಯ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ತಾಯಿಯ ಮನೆಗೆ ಬಂದಿದ್ದಾನೆ. ಆ ಸಂದರ್ಭದಲ್ಲಿ ವರನ ವಿಷಯದಲ್ಲಿ ಆತ ಸರಿಯಾದ ವ್ಯಕ್ತಿಯಲ್ಲ ಎಂದು ಜಗಳ ತೆಗೆದಿದ್ದಾನೆ. ಆಗ ಕುಟುಂಬಸ್ಥರು ಹಾಗೂ ಈತನ ಮಧ್ಯೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತೆರಳಿ ತಾಯಿಯ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ.ಹಲ್ಲೆ ಮಾಡುತ್ತಿದ್ದಂತೆ ಪೊಲೀಸರು ಬಂಧಿಸಬಹುದು ಎಂಬ ಆತಂಕದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಾಯಗೊಂಡ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಆಸ್ಪತ್ರೆಯ ಹತ್ತಿರವೇ ಈತ ವಿಷ ಸೇವಿಸಿದ್ದಾನೆ ಎಂದು ತಿಳಿದು ಬಂದಿದೆ.ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ. ಆತನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅಂಡರ್​ 19 ವಿಶ್ವಕಪ್​ ಪಂದ್ಯದ ವೇಳೆ ಭೂಕಂಪನ;

Sun Jan 30 , 2022
ಅಂಡರ್‌-19 ವಿಶ್ವಕಪ್‌ ಟೂರ್ನಿಯ ಐರ್ಲೆಂಡ್​ ಮತ್ತು ಜಿಂಬಾಬ್ವೆ ನಡುವಿನ ಪ್ಲೇಟ್​ ಸಮಿಫೈನಲ್ ಪಂದ್ಯದ ವೇಳೆ ಲಘು ಭೂಕಂಪನ ಸಂಭವಿಸಿರುವ ದೃಶ್ಯ ಟೆಲಿವಿಷನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಟ್ರಿನಿಡಾಡ್ ಮತ್ತು ಟೊಬೆಗೊದ ಪೋರ್ಟ್​ ಆಫ್​ ಸ್ಪೇನ್​ನಲ್ಲಿರುವ ಕ್ವೀನ್​ ಪಾರ್ಕ್​ ಓವಲ್​ ಮೈದಾನದಲ್ಲಿ ಶನಿವಾರ ನಡೆದಿದೆ. ಪಂದ್ಯದ ನಡುವೆಯೇ ಭೂಕಂಪನ ಅನುಭವವಾಗಿದ್ದು, ಇದನ್ನು ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತಿದ್ದ ವೀಕ್ಷಕ ವಿವರಣೆಗಾರರು ಸಹ ವಿವರಿಸಿದ್ದಾರೆ. 5.2 ತೀವ್ರತೆಯಲ್ಲಿ ಪೋರ್ಟ್​ ಆಫ್​ ಸ್ಪೇನ್​ನ ಕರಾವಳಿ […]

Advertisement

Wordpress Social Share Plugin powered by Ultimatelysocial