ನಂಜನಗೂಡಿನ ಕಪಿಲಾ ನದಿ ತೀರದಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ವರ್ಧಂತಿ ಮಹೋತ್ಸವ

ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ನಡೆದ ಆಷಾಡ ಮಾಸದ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ

ಸಾಕಷ್ಟು ವರ್ಷಗಳಿಂದಲೂ ಕೂಡ
ನಿರಂತರವಾಗಿ ನಡೆದುಬಂದಿರುವ ವರ್ಧಂತಿ ಮಹೋತ್ಸವ ಕಾರ್ಯಕ್ರಮ

ಚಾಮುಂಡೇಶ್ವರಿ ದೇವಾಲಯದ ವರ್ಧಂತಿ ಮಹೋತ್ಸವ ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿರುವ ಭಕ್ತ ಸಮೂಹ

ಬೆಳಿಗ್ಗೆ ಸರಿ ಸುಮಾರು 5ಗಂಟೆಯ ಸಮಯದಿಂದ ನಡೆಯುತ್ತಿರುವ ವಿಶೇಷ ಪೂಜಾ ಕೈಂಕರ್ಯ

ಸುಮಾರು ಹದಿನೈದಕ್ಕೂ ಹೆಚ್ಚು ಜನ ಅರ್ಚಕರಿಂದ ಚಾಮುಂಡೇಶ್ವರಿ ದೇವಾಲಯದ ಮುಂಭಾಗದಲ್ಲಿ ಚಂಡಿಕಾಹೋಮ

ಚಾಮುಂಡೇಶ್ವರಿ ದೇವಾಲಯದ ವರ್ದಂತಿ ಮಹೋತ್ಸವದ ಹೋಮ ಹವನದಲ್ಲಿ ಭಕ್ತರು ಭಾಗವಹಿಸಿದರೆ ಬೇಡಿದ ಕಾರ್ಯ ಈಡೇರುತ್ತದೆ ಎಂಬ ಅಪಾರ ನಂಬಿಕೆ ಬಹಳ ಕಾಲದಿಂದಲೂ ನಡೆದು ಬಂದಿದೆ

ನಾಡಿನ ಜನರ ಒಳಿತಿಗಾಗಿ ಪ್ರತಿ ವರ್ಷ ಆಷಾಡ ಮಾಸದ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ನಡೆದು ಬಂದಿರುವ ಚಂಡಿಕಾ ಹೋಮ ಹವನ

ಮುತ್ತೈದೆ ಮಹಿಳೆಯರು ದೇವಾಲಯದ ಮುಂಭಾಗದಲ್ಲಿ ಕುಳಿತು ತುಪ್ಪದ ಹಾಗೂ ನಿಂಬೆಹಣ್ಣಿನ ದೀಪಾರತಿಗೆ ಅಣಿ ಮಾಡಿಕೊಂಡು ಪರಸ್ಪರ ಸುಮಂಗಲಿಯರು ಮುತ್ತೈದೆಯರ ಪೂಜೆಯಲ್ಲಿ ತೊಡಗಿಕೊಂಡಿದ್ದರು ಬಳಿಕ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಭಕ್ತಿ ಭಾವ ಮೆರೆದರು.

ವರ್ಧಂತಿ ಮಹೋತ್ಸವಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೆ ಪಟ್ಟಣದ ಚಾಮುಂಡೇಶ್ವರಿ ಸೇವಾ ಸಂಘ ಸೇರಿದಂತೆ ಮತ್ತಿತರ ಸಂಘ-ಸಂಸ್ಥೆಗಳಿಂದ ಅನ್ನ ದಾಸೋಹ ಏರ್ಪಡಿಸಲಾಗಿತ್ತು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚೇತನ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರಕ್ಕೆ ಇಶಾನ್ ನಾಯಕ.

Wed Jul 20 , 2022
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ “ಜೇಮ್ಸ್”. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ ಚೇತನ್ ಕುಮಾರ್ (ಬಹದ್ದೂರ್) ನಿರ್ದೇಶಿಸಿದ್ದರು. ” ಜೇಮ್ಸ್” ಸಿನಿಮಾವನ್ನು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ದೊಡ್ಡಮಟ್ಟದ ಯಶಸ್ಸು ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ. “ಜೇಮ್ಸ್” ನಂತರ ನಿರ್ದೇಶಕ ಚೇತನ್ ಕುಮಾರ್ ಅವರ ಮುಂದಿನ ಸಿನಿಮಾ ಯಾವುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲ ಕ್ಕೆ ಈಗ ತೆರೆ ಬಿದ್ದಿದೆ. […]

Advertisement

Wordpress Social Share Plugin powered by Ultimatelysocial