ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ನಡೆದ ಆಷಾಡ ಮಾಸದ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ
ಸಾಕಷ್ಟು ವರ್ಷಗಳಿಂದಲೂ ಕೂಡ
ನಿರಂತರವಾಗಿ ನಡೆದುಬಂದಿರುವ ವರ್ಧಂತಿ ಮಹೋತ್ಸವ ಕಾರ್ಯಕ್ರಮ
ಚಾಮುಂಡೇಶ್ವರಿ ದೇವಾಲಯದ ವರ್ಧಂತಿ ಮಹೋತ್ಸವ ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿರುವ ಭಕ್ತ ಸಮೂಹ
ಬೆಳಿಗ್ಗೆ ಸರಿ ಸುಮಾರು 5ಗಂಟೆಯ ಸಮಯದಿಂದ ನಡೆಯುತ್ತಿರುವ ವಿಶೇಷ ಪೂಜಾ ಕೈಂಕರ್ಯ
ಸುಮಾರು ಹದಿನೈದಕ್ಕೂ ಹೆಚ್ಚು ಜನ ಅರ್ಚಕರಿಂದ ಚಾಮುಂಡೇಶ್ವರಿ ದೇವಾಲಯದ ಮುಂಭಾಗದಲ್ಲಿ ಚಂಡಿಕಾಹೋಮ
ಚಾಮುಂಡೇಶ್ವರಿ ದೇವಾಲಯದ ವರ್ದಂತಿ ಮಹೋತ್ಸವದ ಹೋಮ ಹವನದಲ್ಲಿ ಭಕ್ತರು ಭಾಗವಹಿಸಿದರೆ ಬೇಡಿದ ಕಾರ್ಯ ಈಡೇರುತ್ತದೆ ಎಂಬ ಅಪಾರ ನಂಬಿಕೆ ಬಹಳ ಕಾಲದಿಂದಲೂ ನಡೆದು ಬಂದಿದೆ
ನಾಡಿನ ಜನರ ಒಳಿತಿಗಾಗಿ ಪ್ರತಿ ವರ್ಷ ಆಷಾಡ ಮಾಸದ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ನಡೆದು ಬಂದಿರುವ ಚಂಡಿಕಾ ಹೋಮ ಹವನ
ಮುತ್ತೈದೆ ಮಹಿಳೆಯರು ದೇವಾಲಯದ ಮುಂಭಾಗದಲ್ಲಿ ಕುಳಿತು ತುಪ್ಪದ ಹಾಗೂ ನಿಂಬೆಹಣ್ಣಿನ ದೀಪಾರತಿಗೆ ಅಣಿ ಮಾಡಿಕೊಂಡು ಪರಸ್ಪರ ಸುಮಂಗಲಿಯರು ಮುತ್ತೈದೆಯರ ಪೂಜೆಯಲ್ಲಿ ತೊಡಗಿಕೊಂಡಿದ್ದರು ಬಳಿಕ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಭಕ್ತಿ ಭಾವ ಮೆರೆದರು.
ವರ್ಧಂತಿ ಮಹೋತ್ಸವಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೆ ಪಟ್ಟಣದ ಚಾಮುಂಡೇಶ್ವರಿ ಸೇವಾ ಸಂಘ ಸೇರಿದಂತೆ ಮತ್ತಿತರ ಸಂಘ-ಸಂಸ್ಥೆಗಳಿಂದ ಅನ್ನ ದಾಸೋಹ ಏರ್ಪಡಿಸಲಾಗಿತ್ತು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: