ವೀಕೆಂಡ್ ಕರ್ಫ್ಯೂಯಿಂದ ಕರೊನಾ ತಡೆ ಅಸಾಧ್ಯ ಎಂದು ಮಂಡ್ಯದ ಗೌಡಹಳ್ಳಿ ಗೇಟ್ ಬಳಿ ಮಾಜಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ,ವಾಕ್ಸಿನ್ ಮಾಡ್ಲಿ, ಕೋವಿಡ್ ನಿಯಮಾವಳಿಗಳನ್ನ ಕಟ್ಟುನಿಟ್ಟಾಗಿ ಮಾಡಲಿ ನನ್ನ ಪ್ರಕಾರ ವೀಕೆಂಡ್ ಕರ್ಫ್ಯೂ ಬೇಕಾಗಿಲ್ಲ ಎಂದ ಸಿದ್ದರಾಮಯ್ಯ,ಉಮೇಶ್ ಕತ್ತಿ ಮಂತ್ರಿಯಾಗಿರಲು ಲಾಯಕ್ಕಾ? ಸರ್ಕಾರ ನಡೆಸಲು ಲಾಯಕ್ಕ?ಮಂತ್ರಿ ಮಾಸ್ಕ್ ಹಾಕಲ್ಲ ಅಂದ್ರೆ ಬೇರೆಯವರೆಲ್ಲ ಯಾಕ್ ಮಾಸ್ಕ್ ಹಾಕಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಜನರ ಮೇಲೆ ಕೇಸ್ ಹಾಕ್ತಾರೆ, ಮಂತ್ರಿ ಮೇಲೆ ಕೇಸ್ ಹಾಕಬೇಕೋ? ಬೇಡ್ವೋ?ಬಿಜೆಪಿಯವರು ಯಾವಾಗಲೂ ಡಬಲ್ ಸ್ಟ್ಯಾಡೆರ್ಡ್ ನವರೆ ಆದ್ರೆ ಬಿಜೆಪಿಯವರಿಂದಲೇ ಕರೊನಾ ನಿಯಮ ಉಲ್ಲಂಘನೆಯಾಗಿರೋದು ಎಂದು ಹೇಳಿದರು.ಶ್ರೀರಂಗಪಟ್ಟಣ ಮಸೀದಿ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆಯ ವಿಚಾರವಾಗಿ ಮಾತನಾಡಿ ಅಲ್ಲಿ ಮಸೀದಿ ಇದ್ರೆ ಮಸೀದಿ, ದೇವಸ್ಥಾನ ಇದ್ರೆ ದೇವಸ್ಥಾನ ದೇವಸ್ಥಾನ ಕೆಡುವಿ ಮಸೀದಿ ಕಟ್ಟೋದಾಗಲಿ, ಮಸೀದಿ ಕೆಡವಿ ದೇವಸ್ಥಾನ ಕಟ್ಟೋದು ಮಾಡಬಾರದು ಈಗ ಹೇಗಿದೆ ಹಾಗೆ ಯತಾಸ್ಥಿತಿ ಮುಂದುವರೆಸಿಕೊಂಡು ಹೋಗಲಿ ಎಂದ ಸಿದ್ದರಾಮಯ್ಯ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada