ನನ್ನ ಪ್ರಕಾರ ವೀಕೆಂಡ್ ಕರ್ಫ್ಯೂ ಬೇಕಾಗಿಲ್ಲ ಎಂದ ಸಿದ್ದರಾಮಯ್ಯ


ವೀಕೆಂಡ್ ಕರ್ಫ್ಯೂಯಿಂದ ಕರೊನಾ ತಡೆ ಅಸಾಧ್ಯ ಎಂದು ಮಂಡ್ಯದ ಗೌಡಹಳ್ಳಿ ಗೇಟ್ ಬಳಿ ಮಾಜಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ,ವಾಕ್ಸಿನ್ ಮಾಡ್ಲಿ, ಕೋವಿಡ್ ನಿಯಮಾವಳಿಗಳನ್ನ ಕಟ್ಟುನಿಟ್ಟಾಗಿ ಮಾಡಲಿ ನನ್ನ ಪ್ರಕಾರ ವೀಕೆಂಡ್ ಕರ್ಫ್ಯೂ ಬೇಕಾಗಿಲ್ಲ ಎಂದ ಸಿದ್ದರಾಮಯ್ಯ,ಉಮೇಶ್ ಕತ್ತಿ ಮಂತ್ರಿಯಾಗಿರಲು ಲಾಯಕ್ಕಾ? ಸರ್ಕಾರ ನಡೆಸಲು ಲಾಯಕ್ಕ?ಮಂತ್ರಿ ಮಾಸ್ಕ್ ಹಾಕಲ್ಲ ಅಂದ್ರೆ ಬೇರೆಯವರೆಲ್ಲ ಯಾಕ್ ಮಾಸ್ಕ್ ಹಾಕಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಜನರ ಮೇಲೆ ಕೇಸ್ ಹಾಕ್ತಾರೆ, ಮಂತ್ರಿ ಮೇಲೆ ಕೇಸ್ ಹಾಕಬೇಕೋ? ಬೇಡ್ವೋ?ಬಿಜೆಪಿಯವರು ಯಾವಾಗಲೂ ಡಬಲ್ ಸ್ಟ್ಯಾಡೆರ್ಡ್ ನವರೆ ಆದ್ರೆ  ಬಿಜೆಪಿಯವರಿಂದಲೇ ಕರೊನಾ ನಿಯಮ ಉಲ್ಲಂಘನೆಯಾಗಿರೋದು  ಎಂದು ಹೇಳಿದರು.ಶ್ರೀರಂಗಪಟ್ಟಣ ಮಸೀದಿ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆಯ ವಿಚಾರವಾಗಿ ಮಾತನಾಡಿ ಅಲ್ಲಿ ಮಸೀದಿ ಇದ್ರೆ ಮಸೀದಿ, ದೇವಸ್ಥಾನ ಇದ್ರೆ ದೇವಸ್ಥಾನ ದೇವಸ್ಥಾನ ಕೆಡುವಿ ಮಸೀದಿ ಕಟ್ಟೋದಾಗಲಿ, ಮಸೀದಿ ಕೆಡವಿ ದೇವಸ್ಥಾನ ಕಟ್ಟೋದು ಮಾಡಬಾರದು ಈಗ ಹೇಗಿದೆ ಹಾಗೆ ಯತಾಸ್ಥಿತಿ ಮುಂದುವರೆಸಿಕೊಂಡು ಹೋಗಲಿ ಎಂದ  ಸಿದ್ದರಾಮಯ್ಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳೆಗಳಿಗೆ ಬೆಂಕಿ ಹತ್ತಿದ್ದು ಆರಿಸಲು ಹೋಗಿ ಆಕಸ್ಮಿಕವಾಗಿ ಬೆಂಕಿಯಲ್ಲಿ ಬಿದ್ದ ಅನ್ನದಾತ

Wed Jan 19 , 2022
ತನ್ನ ಜಮೀನಿನಲ್ಲಿನ ಕಬ್ಬಿನ ರೌದಿಗೆ ಬೆಂಕಿ ಹಚ್ಚಿದ್ದ ರೈತ ಹಾವೇರಿಯ ಕಬ್ಬಿನ ಹೊಲದಲ್ಲಿದ್ದ ರೌದಿ ಸುಡಲು ಹಾಕಿದ್ದ ಬೆಂಕಿ ಏಕಾಏಕಿ ಅದು ನಿಯಂತ್ರಣಕ್ಕೆ ಬಾರದ ಹಿನ್ನಲೆ ಪಕ್ಕದ ಜಮೀನಿನ ಬೆಳೆಗಳಿಗೆ ಬೆಂಕಿ ಹತ್ತಿದ್ದು ಆರಿಸಲು ಹೋಗಿ ಆಕಸ್ಮಿಕವಾಗಿ ಬೆಂಕಿಯಲ್ಲಿ ಬಿದ್ದ ಅನ್ನದಾತ ಕೈಕಾಲುಗಳ ಹಿಂಭಾಗ,ಬೆನ್ನಿಗೆ ತಲೆಗೆ,ಮೈಮೇಲೆಲ್ಲಾ ಬೆಂಕಿಬಿದ್ದು ಸಾವನ್ನಪ್ಪಿದ ರೈತ ಹಾವೇರಿ ತಾಲೂಕಿನ ಬೆಳವಿಗಿ ಗ್ರಾಮದಲ್ಲಿ ಘಟನೆ ನಡೆದಿದೆ,ನಿಂಗಪ್ಪ ಹಾದಿಮನಿ ಬೆಂಕಿಗಾಹುತಿಯಾದ ರೈತ.ಬೆಂಕಿಯ ಕೆನ್ನಾಲಿಗೆಗೆ ರೈತನ ದೇಹ ಸಂಪೂರ್ಣ ಸುಟ್ಟು […]

Advertisement

Wordpress Social Share Plugin powered by Ultimatelysocial