ನರಸೀಪುರದಲ್ಲಿ ಮುಂದುವರೆದ ಪಕ್ಷಾಂತರ ಪರ್ವ.
ಶಾಸಕ ಅಶ್ವಿನ್ ಕುಮಾರ್ ಗೆ ಶಾಕ್ ಮೇಲೆ ಶಾಕ್.
ದಿನೇ ದಿನೇ ಕಾಂಗ್ರೆಸ್ ನತ್ತ ಮುಖ ಮಾಡುತ್ತಿರುವ ಜೆಡಿಎಸ್ ನ ಪ್ರಭಾವಿ ನಾಯಕರು.
ಮೈಸೂರು ಜಿಲ್ಲಾ ಜೆಡಿಎಸ್ ಮಹಿಳಾ ಅಧ್ಯಕ್ಷೆ ಬೃಂದಾ ಕೃಷ್ಣೆಗೌಡರಿಂದ ಬೆಂಬಲಿಗರ ಸಭೆ.
ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ ಬೆಂಬಲಿಗರ ಸಭೆ ನಡೆಸಿರುವ ಬೃಂದಾ ಕೃಷ್ಣೆಗೌಡ.
ತಮ್ಮ ಬೆಂಬಲಿಗರ ಜೊತೆ ಸದ್ಯದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಲಿರುವ ಬೃಂದಾ ಕೃಷ್ಣೆಗೌಡ.
ಜೆಡಿಎಸ್ ನ ಮಹಿಳಾ ಜಿಲ್ಲಾಧ್ಯಕ್ಷರಾಗಿ ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೆ.
ಆದರೆ ಏಕಾಏಕಿ ನನ್ನ ಜಿಲ್ಲಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದರು.
ಇದರ ವಿಚಾರವಾಗಿ ನಾನು ಇಬ್ರಾಹಿಂ ರವರ ಬಳಿಗೂ ಪತ್ರ ಬರೆದೆ ಆದ್ರೆ ಪ್ರಯೋಜನವಾಗಿಲ್ಲ.
ಜೆಡಿಎಸ್ ಪಕ್ಷದ ಚಿಹ್ನೆಯೇ ಮಹಿಳೆ.
ಮಹಿಳೆ ಚಿಹ್ನೆಯನ್ನ ಇಟ್ಟುಕೊಂಡು ಮಹಿಳೆಯರ ಏಳಿಗೆಯನ್ನ ಸಹಿಸುತ್ತಿಲ್ಲ.
ನಮ್ಮ ತಾತನ ಕಾಲದಿಂದಲೂ ನಾವು ಜೆಡಿಎಸ್ ಪಕ್ಷದಲ್ಲೇ ಇದ್ದೇವೆ.
ಆದರೆ ಪ್ರಸ್ತುತ ಅಶ್ವಿನ್ ಕುಮಾರ್ ರವರ ನಡೆ ಮತ್ತು ಕೆಲವು ನಾಯಕರ ನಡೆ ನಮಗೆ ಬೇಸರ ತರಿಸಿದೆ.
ಮಾರಗೌಡನಹಳ್ಳಿ ಗ್ರಾಮದಲ್ಲಿ ಬೃಂದಾ ಕೃಷ್ಣೆಗೌಡ ಹೇಳಿಕೆ.
https://play.google.com/store/apps/details?id=com.speed.newskannada