ಪಂಜಾಬ್: ಭಗವಂತ್ ಮಾನ್ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ; ಕೇಜ್ರಿವಾಲ್ ಘೋಷಣೆ

ಮೊಹಾಲಿ: ಸಂಸದ ಭಗವಂತ್ ಮಾನ್ ಅವರು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷದ ವರಿಷ್ಟ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಘೋಷಿಸಿದರು. ಎಎಪಿ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆರಿಸಲು ಫೋನ್ ಮತ್ತು ವಾಟ್ಸಾಪ್ ಮಾಡುವಂತೆ ಪಂಜಾಬ್ ಜನತೆಗೆ ಕೇಳಿಕೊಂಡಿತ್ತು.ಭಗವಂತ್ ಮಾನ್ ಫೋನ್ ಮತ್ತು ವಾಟ್ಸಾಪ್ ಮೂಲಕ ಪಡೆದ ಶೇಕಡಾ 93 ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದರು.3ರಷ್ಟು ಮತಗಳು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಹೆಸರಿನಲ್ಲಿವೆ. ಕೇಜ್ರಿವಾಲ್ ಪರವಾಗಿದ್ದ ಕೆಲವು ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು.ಪಂಜಾಬ್ ಚುನಾವಣೆಯಲ್ಲಿ ಆಪ್ ಗೆಲ್ಲುವುದು ಸ್ಪಷ್ಟ. ಒಂದು ರೀತಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದ ವ್ಯಕ್ತಿಯೇ ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.ಭಗವಂತ್ ಮಾನ್ ಪಂಜಾಬ್‌ನ ಸಂಗ್ರೂರ್ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಚುನಾಯಿತರಾಗಿದ್ದಾರೆ.ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಮೊದಲ ಹಾಗೂ ಏಕೈಕ ಪಕ್ಷ ಎಎಪಿ. ಹಿಂದಿನ ಚುನಾವಣೆಯಲ್ಲಿ ಹಾಗೆ ಮಾಡುವುದನ್ನು ತಪ್ಪಿಸಿದ್ದ ಅದು ಈ ಬಾರಿ ಜನತೆಗೆ ಸಿಎಂ ಅಭ್ಯರ್ಥಿ ಆಯ್ಕೆ ಮಾಡುವಂತೆ ಕೇಳಿಕೊಂಡಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಲೆ ಕೂದಲು ಬೆಳ್ಳಗಾದವರಿಗೆ ಇಲ್ಲಿದೆ ಸುಲಭ 'ಪರಿಹಾರ'

Wed Feb 2 , 2022
ಹಿಂದೆ ವಯಸ್ಸಾಗುತ್ತಲೇ ಕೂದಲು ಬೆಳ್ಳಗಾಗುತ್ತಿತ್ತು. ಆದರೆ ಈಗ ಹಾಗಲ್ಲ, ಹದಿಹರೆಯದವರ ಅಷ್ಟೇ ಯಾಕೆ ಮಕ್ಕಳ ಕೂದಲು ಕೂಡಾ ಬೆಳ್ಳಗಾಗುತ್ತಿದೆ. ಇದಕ್ಕೆ ಮನೆಮದ್ದುಗಳನ್ನು ಪ್ರಯತ್ನಿಸೋಣ.ಕಾದ ತೆಂಗಿನ ಎಣ್ಣೆಗೆ ಮೂರ್ನಾಲ್ಕು ನೆಲ್ಲಿಕಾಯಿ ತುಂಡನ್ನು ಹಾಕಿ ಚೆನ್ನಾಗಿ ಕುದಿಸಿ ಆರಿಸಿದ ಮೇಲೆ ತಲೆಗೆ ಹಚ್ಚಿಕೊಂಡು ನಂತರ ರಾತ್ರಿ ಪೂರ್ತಿ ಹಾಗೆ ಬಿಟ್ಟು, ಮುಂಜಾನೆ ಸ್ನಾನ ಮಾಡುವುದರಿಂದ ವಿಟಮಿನ್ ಸಿ ಹೆಚ್ಚುತ್ತದೆ.ಇನ್ನು ನೆಲ್ಲಿಕಾಯಿ ಜೊತೆ ಮೆಂತೆ ಪುಡಿಯನ್ನು ಬೆರೆಸಿ ಹಚ್ಚಿಕೊಂಡರೆ ಬಿಳಿ ಕೂದಲ ಸಮಸ್ಯೆ ಮಾಯವಾಗುತ್ತದೆ.ತೆಂಗಿನ […]

Advertisement

Wordpress Social Share Plugin powered by Ultimatelysocial