ಉತ್ತರ ಮ್ಯಾನ್ಮಾರ್ನ ಜೇಡ್ ಗಣಿಯೊಂದರಲ್ಲಿ ಭೂಕುಸಿತ ಉಂಟಾಗಿದೆ. ಭೂ ಕುಸಿತದಿಂದಾಗಿ ಸುಮಾರು 50 ಮಂದಿ ಮೃತಪಟ್ಟಿದ್ದಾರೆ ಎಂದು ದೇಶದ ಅಗ್ನಿಶಾಮಕ ಸೇವಾ ಇಲಾಖೆ ಮತ್ತು ಮಾಹಿತಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಚಿನ್ ರಾಜ್ಯದ ಜೇಡ್ ಪಕಾಂತ್ ಪ್ರದೇಶದಲ್ಲಿ ಗಣಿಗಾರರು ಕಲ್ಲುಗಳನ್ನು ಸಂಗ್ರಹಿಸುತ್ತಿದ್ದರು. ಭಾರೀ ಮಳೆಯಿಂದಾಗಿ ಈ ದುರಂತ ಸಂಭವಿಸಿದೆ. ಒಟ್ಟು 50 ಮೃತ ದೇಹಗಳನ್ನು ಹೊರ ತೆಗೆಯಲಾಗಿದ್ದು, ನಾವು ಇನ್ನೂ ರಕ್ಷಣಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ […]
ಕೆಲ ತಿಂಗಳ ಹಿಂದಷ್ಟೇ ಕ್ಲಾರ್ಕ್ ಪತ್ನಿ ಕೈಲಿ, ಕ್ಲಾರ್ಕ್ಗೆ ವಿಚ್ಛೇದನ ನೀಡಿದ್ರು. ಇದೀಗ ಫ್ಯಾಷನ್ ಡಿಸೈನರ್ ಹಾಗೂ ಮಾಡೆಲ್ ಆಗಿರುವ ಪಿಪ್ ಎಡ್ವರ್ಡ್ಸ್ ಅವರೊಂದಿಗೆ ಸಂಬಧ ಹೊಂದಿರುವುದಾಗಿ ಕ್ಲಾರ್ಕ್ ಹೇಳಿಕೊಂಡಿದ್ದಾರೆ.ಕೆಲ ದಿನಗಳಿಂದ ಈ ಜೋಡಿ ಜೊತೆ ಜೊತೆಯಾಗಿ ಓಡಾಡುತ್ತಿರುವ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿತ್ತು. ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ೩೯ ವರ್ಷದ ಮಾಜಿ ಬಲಗೈ ಬ್ಯಾಟ್ಸ್ಮನ್, ಪಿಪ್ ಎಡ್ವರ್ಡ್ಸ್ ತಮ್ಮ ನೂತನ ಗೆಳತಿ ಎಂಬುದನ್ನು ಖಾತ್ರಿ […]
ಸೋಂಕು ಕಾಣಿಸಿಕೊಂಡಾಗಿನಿAದ ಎಲ್ಲರಿಂದಲೂ ಒಂದೇ ಸಲಹೆ, ಎಚ್ಚರಿಕೆ ಮಾತು, ‘ಮುಖ ಮುಟ್ಟಿಕೊಳ್ಳಬೇಡ’. ಅದನ್ನು ನೆನಪಿಸಿಕೊಳ್ಳುವುದು ಕಷ್ಟದ ಕೆಲಸವಲ್ಲ. ಒಂದು ವಾಚ್ ಅನ್ನು ಕೈಗೆ ಕಟ್ಟಿಕೊಂಡರೆ ಮುಗಿಯಿತು. ನಿಮ್ಮ ಕೈ ಮುಖದ ಬಳಿ ಹೋದೊಡನೆ, ಸದ್ದು ಮಾಡಿ ಎಚ್ಚರಿಸುತ್ತದೆ. ಇಂಗ್ಲೆAಡ್ನ ಬ್ರಿಸ್ಟಾಲ್ ನಗರದ ೧೫ ವರ್ಷದ ಬಾಲಕ ಮ್ಯಾಕ್ಸ್ ಮೆಲಿಯಾ, ಬಹುದಿನಗಳ ಪರಿಶ್ರಮದ ಬಳಿಕ ಒಂದು ಸ್ಮಾರ್ಟ್ ಕೈಗಡಿಯಾರವನ್ನು ಅಭಿವೃದ್ಧಿಪಡಿಸಿದ್ದಾನೆ. ಆ ಗಡಿಯಾರ ಎಷ್ಟು ಸ್ಮಾರ್ಟ್ ಎಂದರೆ, ನೀವು ನಿಮಗೆ ಅರಿವಿಲ್ಲದೆಯೇ […]
ಆಧುನಿಕ ಭಗೀರಥ ಕಾಮೇಗೌಡರಿಗೆ ಈಗ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಸಕ್ಕರೆ ನಾಡು ಮಂಡ್ಯದ ಈ ಇಳಿವಯಸ್ಸಿನ ಅಜ್ಜ ಈಗ ಸುದ್ದಿಯ ಕೇಂದ್ರಬಿಂದು. ಅದಕ್ಕೆ ಕಾರಣ ಮೊನ್ನೆ ಭಾನುವಾರ ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರ ಹೆಸರು ಮತ್ತು ಸಾಧನೆಗಳನ್ನು ಪ್ರಸ್ತಾಪಿಸಿದ್ದು. ಇದಾದ ಬಳಿಕ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಡಿಯೊ ಕರೆ ಮಾಡಿ […]
ಡಿ.ಕೆ.ಶಿವಕುಮಾರ್ ನನ್ನ ಮಿತ್ರ ಅಲ್ಲ. ಒಂದು ಪಕ್ಷದ ಅಧ್ಯಕ್ಷ ಅಷ್ಟೇ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಬೇರೆ, ಅವರ ಪಕ್ಷ ಬೇರೆ. ಬರೀ ಟಿವಿಯಲ್ಲಿ ‘ಪ್ರತಿಜ್ಞಾ’ ಅಂತಾ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಡಿಕೆಶಿ ಕಾರ್ಯಕ್ರಮಕ್ಕೆ ಮಹತ್ವ ಕೊಡಬೇಕಿಲ್ಲ ಎಂದರು. ಒಂದು ಮದುವೆ ಮಾಡಿಸಬೇಕಾದರೆ ಊಟ ಹಾಕಿಸುತ್ತೇವೆ. ನಮ್ಮವರು ಅಂತಾ ಎಲ್ಲರೂ ಊಟಕ್ಕೆ ಬರ್ತಾರಾ?. […]
ಸರ್ಕಾರ ಈಗ ಇಂಗು ತಿಂದ ಮಂಗನಂತಾಗಿದ್ದು, ಸೋಂಕಿತರ ಸಂಖ್ಯೆಯ ಗಣನೀಯ ಏರಿಕೆಯನ್ನು ತಡೆಯಲು ಪರದಾಡುತ್ತಿದೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೋನಾ ಸೋಂಕು ಪೀಡಿತರು ಬೆಡ್ ಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವರು ಮಾತಿನ ಮಂಟಪ ಕಟ್ಟುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು […]
ಕೋಲ್ ಇಂಡಿಯಾದಿAದ ಬಂಡವಾಳ ಹಿಂತೆಗೆದುಕೊಳ್ಳುವ ಅಥವಾ ಕೋಲ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ. ಸುದ್ದಿ ಸಂಸ್ಥೆಯೊAದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು “೨೦೨೩ರ ವೇಳೆಗೆ ೧ ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸುವ ಗುರಿಯನ್ನು ಕೋಲ್ ಇಂಡಿಯಾ ಕಂಪೆನಿಗೆ ನೀಡಿದ್ದೇನೆ ಎಂದು ತಿಳಿಸಿದರು.
ವಿಮಾನನಿಲ್ದಾಣ ಉನ್ನತೀಕರಣ, ನಿರ್ವಹಣೆ ಕುರಿತು ನಡೆದ 705 ಕೋಟಿ ಅವ್ಯವಹಾರ ಸಂಬಂಧ ಜಿವಿಕೆ ಗ್ರೂಪ್ ಅಧ್ಯಕ್ಷ ವೆಂಕಟ ಕೃಷ್ಣ ರೆಡ್ಡಿ ಗುಣುಪತಿ ಮತ್ತು ಅವರ ಪುತ್ರನ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಮುಂಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಉನ್ನತೀಕರಣ ಮತ್ತು ಮೇಲ್ವಿಚಾರಣೆ ಸಂಬಂಧ ಜಿವಿಕೆ ಗ್ರೂಪ್ ಭಾಗವಾಗಿರುವ ಜಿವಿಕೆ ಏರ್ ಪೋರ್ಟ್ ಹೋಲ್ಡಿಂಗ್ ಲಿಮಿಟೆಡ್ ಜೊತೆಗೆ ಜಂಟಿ ಉದ್ಯಮ ಸ್ಥಾಪಿಸಿತ್ತು. ವೆಂಕಟ ಕೃಷ್ಣ ರೆಡ್ಡಿ ಗುಣುಪತಿ ಪುತ್ರ ಜಿ.ವಿ.ಸಂಜಯ್ ರೆಡ್ಡಿ ಮುಂಬೈ […]
ಭಾರತದ ಶಶಾಂಕ್ ಮನೋಹರ್ ಐಸಿಸಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅವರು ಎರಡು ವರ್ಷಗಳ ಎರಡು ಅವಧಿಗಳಲ್ಲಿ ಕ್ರಿಕೆಟ್ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿದಿದ್ದರು. ಆದರೆ ಇದರ ಕಾರ್ಯಾವಧಿ ಮುಗಿಯಿತು. ನೂತನ ಅಧ್ಯಕ್ಷರು ಚುನಾಯಿತರಾಗುವ ತನಕ ಉಪಾಧ್ಯಕ್ಷ ಇಮ್ರಾನ್ ಖ್ವಾಜಾ ಅವರೇ ಉಸ್ತುವಾರಿ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಲಿದ್ದಾರೆ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಐಸಿಸಿ ನಿಯಮದಂತೆ ಎರಡು ವರ್ಷಗಳ ೩ ಅವಧಿಗಳ ತನಕ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಬಹುದು. ಆದರೆ ಈಗಾಗಲೇ […]
ದೇಶದಲ್ಲಿ ಕೋವಿಡ್-೧೯ ಬಾಧಿತರ ಸಂಖ್ಯೆ ೬ ಲಕ್ಷ ದಾಟಿದೆ. ಜೂ. ೨೬ರಂದು ೫ ಲಕ್ಷ ದಾಟಿದ್ದ ಸಂಖ್ಯೆ ಜು. ೧ರ ವೇಳೆಗೆ ೬ ಲಕ್ಷಕ್ಕೇರಿದೆ. ಸಾವಿನ ಸಂಖ್ಯೆ ೧೭,೭೮೬ಕ್ಕೆ ತಲುಪಿದ್ದು, ಚೇತರಿಸಿಕೊಂಡವರ ಸಂಖ್ಯೆಯೂ ೩,೫೮,೪೫೩ಕ್ಕೆ ಮುಟ್ಟಿದೆ. ಜೂ. ೨೬ರಂದು ೧೮,೨೫೫, ಜೂ. ೨೭ರಂದು ೨೦,೧೪೨, ಜೂ. ೨೮ರಂದು ೧೯,೬೧೦, ಜೂ. ೨೯ರಂದು ೧೮,೩೩೯, ಜೂ. ೩೦ರಂದು ೧೮,೨೫೬ ಹಾಗೂ ಜು. ೧ರಂದು ೧೬,೧೬೦ ಏರಿಕೆಯಾಗಿದೆ. ಈ ಮೂಲಕ ಆರು ದಿನಗಳಲ್ಲೇ […]