ನವದೆಹಲಿ/ರಾಂಚಿ, ಮೇ 24 – ಬಂಧಿತ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಮತ್ತು ಇತರರನ್ನು ಒಳಗೊಂಡ ಅಕ್ರಮ ಹಣ ವರ್ಗಾವಣೆ ಪ್ರಕರಣಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಜಾರ್ಖಂಡ್ ಮತ್ತು ಬಿಹಾರದ ಸುಮಾರು ಏಳು ಸ್ಥಳಗಳಲ್ಲಿ ಇಂದು ದಾಳಿ ನಡೆಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಕಾಯ್ಧೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಅಧಿಕಾರಿಗಳು ತಿಳಿಸಿದ್ದಾರೆ.
ಸಿಂಘಾಲ್ ಅವರನ್ನು ತಿಂಗಳ ಆರಂಭದಲ್ಲಿ ಜಾರ್ಖಂಡ್ ಖುಂಟಿ ಜಿಲ್ಲಾಯಲ್ಲಿ ನೆರೇಗಾ ನಿಯ ದುರುಪಯೋಗ ಮತ್ತು ಇತರ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದ ಹಣ-ಲಾಂಡರಿಂಗ್ ತನಿಖೆಯಲ್ಲಿ ಇಡಿ ಬಂಧಿಸಿತ್ತು.
2000 ಬ್ಯಾಚ್ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯನ್ನು ಪ್ರಸ್ತುತ ಜಾರ್ಖಂಡ್ ರಾಜ್ಯ ಸರ್ಕಾರ ಅಮಾನತುಗೊಳಿಸಿದ್ದು ,ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ ತನಿಖೆ ವೇಳೆ ಹಲವು ದಾಖಲೆಗಳು ಬಹಿರಂಗಗೊಂಡಿದ್ದು ಮತ್ತಷ್ಟು ಅಧಿಕಾರಿಗಳ ಬಂದನ ಸಾಧ್ಯತೆ ಇದೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada