ಕಂಗನಾ ಸಿನಿಮಾ ಸೋಲಿಗೆ ಸಂಭ್ರಮಾಚರಿಸಿದ ನಟಿ! ಯಾರು ಗೊತ್ತಾ?

 

ಮುಂಬೈ: ತಮ್ಮ ನೇರ ಮಾತುಗಳಿಂದಲೇ ಬಾಲಿವುಡ್​​ನ್ನು ಟೀಕಿಸುವ ನಟಿ ಕಂಗನಾ ರನೌತ್​​ ಈಗ ಸ್ವತಃ ತಾವೇ ಇಂತಹ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ.

ಇತ್ತೀಚೆಗೆ ಕಂಗನಾ ನಟನೆಯ ಧಾಕಡ್​ ಚಿತ್ರ ಗಳಿಕೆ ಕಾಣದೆ ಸೋಲನುಭವಿಸಿದೆ. ಸದ್ಯ ಈ ಚಿತ್ರ ಸೋಲಿಗೆ ದುಃಖ ವ್ಯಕ್ತಪಡಿಸುವವರಿಗಿಂತ ಖುಷಿ ಪಟ್ಟವರೇ ಹೆಚ್ಚು ಎನ್ನಬಹುದು.

ಏಕೆಂದರೆ ಬಾಲಿವುಡ್​​ನಲ್ಲಿ ಕಂಗನಾಗೆ ಹೇಳಿಕೊಳ್ಳುವಂತಹ ಸ್ನೇಹಿತರು ಯಾರೂ ಇಲ್ಲ. ಇವರ ಗೆಲುವಿಗೆ ಸಂಭ್ರಮಾಚರಿಸುವ ಸಂಖ್ಯೆ ವಿರಳವೇ. ಇದೀಗ ಆ ಪಟ್ಟಿಯಲ್ಲಿ ಮತ್ತೊಬ್ಬ ನಟಿ ಸೇರಿದ್ದಾರೆ.

ಧಾಕಡ್​ ಚಿತ್ರದಲ್ಲಿ ಕಂಗನಾ ಗೂಢಾಚಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಇದಕ್ಕೆ ಖುಷಿ ವ್ಯಕ್ತಪಡಿಸಿರುವ ನಟಿಯೊಬ್ಬರು ಸಂಭ್ರಮಾಚರಿಸಿದ್ದಲ್ಲದೇ, ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ಆಕೆ ಬೇರಾರೂ ಅಲ್ಲ, ಕಂಗನಾ ಅವರೇ ನಡೆಸಿಕೊಡುತ್ತಿದ್ದ ಲಾಕಪ್​ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಸೋತಿದ್ದ ನಟಿ ಪಾಯಲ್​ ರೋಹ್ಟಗಿ. ತಮ್ಮ ಸೋಲಿಗೆ ಕಂಗನಾ ಅವರೇ ಕಾರಣ ಎಂದು ಆರೋಪಿಸಿದ್ದ ಈಕೆ, ಅಂದೇ ಅವರ ನಟನೆಯ ಚಿತ್ರ ಸೋಲಿ ಎಂದು ಹೇಳಿದ್ದರು.

ಇದೀಗ ಚಿತ್ರದ ಬಗ್ಗೆ ಹೇಳಿಕೊಂಡಿರುವ ಈಕೆ, ಅವರ ಚಿತ್ರ ಸೋಲಲಿ ಎಂದು ನಾನು ಮೊದಲೇ ಹೇಳಿದ್ದೆ, ನನಗೆ ತುಂಬಾ ಖುಷಿಯಾಗಿದೆ. ಧಾಕಡ್​ ಸಿನಿಮಾ ಮೊದಲ ದಿನ 50 ಲಕ್ಷ ರೂ. ಅಷ್ಟೇ ಗಳಿಸಿದೆ. ಕರ್ಮ ಎಂಬುದು ಕೆಟ್ಟದ್ದು, ಅದು ಯಾರನ್ನೂ ಬಿಡುವುದಿಲ್ಲ, 18 ಲಕ್ಷ ಮತ ಸಿಕ್ಕಿತ್ತೊ ಅವರು ಬಂದು ಸಿನಿಮಾ ನೋಡಲಿಲ್ಲ. ಅವನ ಹಿಂಬಾಲಕರು ಬಂದು ಸಿನಿಮಾ ನೋಡಲಿಲ್ಲ. ಸೀತೆಯ ಬಗ್ಗೆ ಸಿನಿಮಾ ಮಾಡಲಿದ್ದಾರೆ. ಸೀತಾ ಮಾತೆಯನ್ನು ಅಪಮಾನಿಸಿದವನಿಗೆ ಅದರಲ್ಲಿ ಪಾತ್ರ ಸಿಕ್ಕರೂ ಸಿಗಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಮುನಾವರ್ ಫಾರುಖಿಯನ್ನು ಗೆಲ್ಲಿಸಿದಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದ ಪಾಯಲ್ ರೊಹಟ್ಗಿ, ‘ಸಲ್ಮಾನ್ ಖಾನ್‌ ಅರೇಂಜ್ ಮಾಡಿದ್ದ ಪಾರ್ಟಿಗೆ ಹೋದ ಬಳಿಕ ಮುನಾವರ್‌ ಅನ್ನು ಕಂಗನಾ ಗೆಲ್ಲಿಸಿದರು. ಗೆದ್ದ ವ್ಯಕ್ತಿಗೆ ಹೆಂಡತಿ ಮತ್ತು ಮಗು ಇದೆ. ಶೋನಲ್ಲಿ ಒಬ್ಬಾಕೆಯೊಂದಿಗೆ ಆತ ಚೆಕ್ಕಂದ ಆಡುತ್ತಿದ್ದ, ಒಬ್ಬಳನ್ನು ಗರ್ಲ್‌ಫ್ರೆಂಡ್ ಮಾಡಿಕೊಂಡಿದ್ದ. ಆದರೂ ಅವನ ವ್ಯಕ್ತಿತ್ವವನ್ನು ಕೊಂಡಾಡಲಾಯಿತು’ ಎಂದು ಆಕ್ಷೇಪ ವ್ಯಕ್ತಿಡಿಸದ್ದ ಪಾಯಲ್, ಕಂಗನಾರನ್ನು ಅನ್‌ಫಾಲೋ ಮಾಡಿದ್ದರು, ಹಾಗೂ ‘ಧಾಖಡ್’ ಸಿನಿಮಾ ಸೋಲಲಿ ಎಂದು ಆಶಿಸಿದ್ದರು.

ರಿಯಾಲಿಟಿ ಶೋ ನಲ್ಲಿ ಮುನಾವರ್​ ಫಾರೂಖಿಯನ್ನು ಗೆಲ್ಲಿಸಿದ್ದಕ್ಕಾಗಿ ನಟಿ ಪಾಯರ್​ ರೋಹ್ಟಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಅದ್ದೂರಿ ಉತ್ಸವ : ಜನ್ಮ ಭೂಮಿ ವೇದಿಕೆವತಿಯಿಂದ ಕಾರ್ಯಕ್ರಮ ಆಯೋಜನೆ

Tue May 24 , 2022
ಕೋಲಾರ  : ಶ್ರೀನಿವಾಸಪುರ ಪಟ್ಟಣದಲ್ಲಿ ಪ್ರತಿವರ್ಷ ಜನ್ಮ ಭೂಮಿ ವೇದಿಕೆವತಿಯಿಂದ ಶ್ರೀನಿವಾಸಪುರ ಉತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಆಂಧ್ರಪ್ರದೇಶ ಸಿಂಹಾಚಲಂ ನಿಂದ ಶ್ರೀ ವರಾಹ ಲಕ್ಷ್ಮಿನರಸಿಂಹಸ್ವಾಮಿ ದೇವರನ್ನು ತಂದು ಕಲ್ಯಾಣೋತ್ಸವ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಮಾಡಲಾಗುತ್ತಿತ್ತು.  ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದ ನಿಲ್ಲಿಸಲಾಗಿದ್ದ ಈ ವರ್ಷ ಕೋವಿಡ್ ಇಳಿಮುಖ ವಾಗಿರುವ ಕಾರಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು,  ಮುಂದಿನ ತಿಂಗಳು 3 ರಂದು ಸಂಜೆ ಜಬರ್ದಸ್ತ್ ಕಲಾ […]

Advertisement

Wordpress Social Share Plugin powered by Ultimatelysocial