ಅಣ್ಣಾವ್ರ ಮೂವರು ಮಕ್ಕಳನ್ನು ಮೊದಲು ಎತ್ತಿಕೊಂಡಿದ್ದ ಭಗವಾನ್ ನೆನೆದು ರಾಘವೇಂದ್ರ ರಾಜ್‌ಕುಮಾರ್.

ಭಗವಾನ್‌ ಅವರನ್ನು ಕಳೆದುಕೊಂಡಿದ್ದು, ನಮ್ಮ ಕುಟುಂಬದ ಹಿರಿಯರನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಭಗವಾನ್‌ ಅವರು ನಮ್ಮ ಕುಟುಂಬದ ಸದಸ್ಯರ ರೀತಿ ನಮ್ಮ ಜತೆ ಇಷ್ಟು ವರ್ಷಗಳ ಕಾಲ ಜೀವನ ಮಾಡಿದ್ದಾರೆ. ನಮ್ಮ ತಂದೆಯವರ ಮೂರನೇ ಸಿನಿಮಾದಲ್ಲಿಭಗವಾನ್‌ ಅವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮ ಆತ್ಮೀಯರಲ್ಲಿಭಗವಾನ್‌ ಸಹ ಒಬ್ಬರಾಗಿದ್ದಾರೆ. ಅಪ್ಪಾಜಿಗೆ ಭಗವಾನ್‌ ಮಾರಲ್‌ ಸಪೋರ್ಟ್‌ ಆಗಿದ್ದರು. ನಮ್ಮ ತಂದೆಯ ಎಲ್ಲಾಮ್ಯೂಸಿಕಲ್‌ ಕಾರ್ಯಕ್ರಮಗಳಲ್ಲಿಅವರು ಇರುತ್ತಿದ್ದರು. ಭಗವಾನ್‌ ಅವರದು ಶಿಸ್ತಿನ ವ್ಯಕ್ತಿತ್ವ. ಕೊನೆಯವರೆಗೂ ತಮ್ಮ ಕಾರನ್ನು ತಾವೇ ಚಲಾಯಿಸಿಕೊಂಡು ಓಡಾಡುತ್ತಿದ್ದರು. ಕೇಳಿದರೆ ನನಗ್ಯಾಕೆ ಡ್ರೈವರ್‌ ಎಂದು ಹೇಳುತ್ತಿದ್ದರು. ಯಾವಾಗಲೂ ಸೂಟು, ಬೂಟು ಧರಿಸಿಯೇ ಓಡುತ್ತಿದ್ದರು. ನಿರಂತರವಾಗಿ ಕೆಲಸ ಮಾಡುತ್ತಿದ್ದರೆ ಬದುಕು ಚೆಂದ ಎಂಬುದು ಭಗವಾನ್‌ ಅವರ ಅಭಿಪ್ರಾಯವಾಗಿತ್ತು. ವಿನಯ್‌, ಯುವ ನಟಿಸುತ್ತಾರೆ ಎಂದು ಗೊತ್ತಾದಾಗ, ಬರೆಯಲು ಏನಾದರೂ ಇದ್ದರೆ ಹೇಳಿ ಎಂದು ಭಗವಾನ್‌ ಅವರು ನನ್ನ ಬಳಿ ಬಂದು ಹೇಳಿದ್ದರು. ನಮಗೆಲ್ಲರಿಗೂ ಅವರು ರೋಲ್‌ ಮಾಡೆಲ್‌ ಇದ್ದ ಹಾಗೆ.ಅಪ್ಪಾಜಿ ಸೂಟ್‌ ಸಿನಿಮಾಗಳಲ್ಲಿಅಪ್ಪಾಜಿ ಸೀನ್‌ಗಾಗಿ ಬಳಸಿದ್ದ ಸೂಟ್‌ಗಳನ್ನು ನನ್ನ ತಾಯಿಯ ಬಳಿ ಕೇಳಿ ಪಡೆದುಕೊಳ್ಳುತ್ತಿದ್ದರು. ಆ ಸೂಟುಗಳನ್ನು ತಮ್ಮ ಅಳತೆಗೆ ತಕ್ಕಂತೆ ಆಲ್ಟೆ್ರೕಶನ್‌ ಮಾಡಿಸಿಕೊಂಡು ಹಾಕಿಕೊಳ್ಳುತ್ತಿದ್ದರು. ಹಾಗಾಗಿ ಅಪ್ಪಾಜಿಯವರ ಎಷ್ಟೋ ಸೂಟ್‌ಗಳು ಇಂದಿಗೂ ಅವರ ಮನೆಯಲ್ಲಿವೆ. ನಮಗೆ ಅವರೆಷ್ಟು ಆತ್ಮೀಯರೆಂದರೆ ನಾನು, ಶಿವಣ್ಣ, ಅಪ್ಪು ಮೂವರು ಹುಟ್ಟಿದಾಗಲೂ ವೈದ್ಯರು ಮೊದಲು ಕೊಟ್ಟಿದ್ದು ಅವರ ಕೈಗೇ. ಅಪ್ಪಾಜಿ ಚಿತ್ರೀಕರಣದಲ್ಲಿ ಬಿಝಿ ಇದ್ದ ಕಾರಣ ಆಸ್ಪತ್ರೆಗೆ ಬಂದು ಅಮ್ಮನ ಆರೈಕೆ ಮಾಡಿದ್ದರು. ನಾನು ‘ಮಂತ್ರಾಲಯ ಮಹಾತ್ಮೆ’ ಸಿನಿಮಾ ಮಾಡುವಾಗ ಜನಿಸಿದ್ದ ಕಾರಣ ನನಗೆ ‘ರಾಘವೇಂದ್ರ’ ಎಂದು ಹೆಸರಿಟ್ಟಿದ್ದಾರೆ.ಭಗವಾನ್‌ ಅವರ ಬರವಣಿಗೆ ಬಹಳ ಸುಂದರವಾಗಿತ್ತು. ಭಾಷೆಯೂ ಚೆನ್ನಾಗಿದ್ದ ಕಾರಣ ಅಪ್ಪಾಜಿ ಕಡೆಯಿಂದ ಯಾವುದೇ ಪತ್ರಿಕಾ ಹೇಳಿಕೆ, ಕರೆ ಕೊಡುವುದು ಸೇರಿದಂತೆ ಹಲವು ವಿಷಯಗಳನ್ನು ಅವರ ಕೈಯಿಂದಲೇ ಬರೆಸುತ್ತಿದ್ದೆವು. ಇನ್ನು ಅಪ್ಪಾಜಿಯವರನ್ನು ನೋಡಲು ಬೇರೆ ಬೇರೆ ಚಿತ್ರರಂಗದ ಕಲಾವಿದರು ಬಂದರೆ ಅಲ್ಲಿ ಅಪ್ಪಾಜಿ ಜತೆ ಭಗವಾನ್‌ ಇರಲೇಬೇಕಿತ್ತು. ಇದೊಂದ ಅಲಿಖಿತ ನಿಯಮದಂತೆ ನಮ್ಮ ಮನೆಯಲ್ಲಿನಡೆದುಕೊಂಡು ಬಂದಿದೆ. ಅಪ್ಪಾಜಿ, ನಾನು, ಕಡೆಗೆ ವಿನಯ್‌ ಹೀಗೆ ಮೂರು ತಲೆಮಾರು ಅವರ ಜತೆ ಕೆಲ ಸಮಾಡಿದ್ದೇವೆ.
ಭಗವಾನ್‌ ಅವರ ಬದುಕು ನಮಗೆ ಮಾದರಿಯಾಗುತ್ತದೆ. ಇಂತಹ ಒಬ್ಬ ಅದ್ಭುತ ವ್ಯಕ್ತಿಯ ಜತೆ ಕೆಲಸ ಮಾಡಿದ್ದು ನಮ್ಮ ಪುಣ್ಯ ಮತ್ತು ಇಂಥವರು ನಮ್ಮ ಕುಟುಂಬದವರಾಗಿದ್ದು ನಮ್ಮ ಪುಣ್ಯ. ಅವರು ತುಂಬು ಜೀವನವನ್ನು ನಡೆಸಿದ್ದಾರೆ. ಬಹಳ ಸ್ಟೈಲಿಶ್‌ ಆಗಿಯೂ ಜೀವನ ಮಾಡಿದ್ದರು ಭಗವಾನ್‌. ಅವರನ್ನು ಕಳೆದುಕೊಂಡಿದ್ದು ನಮ್ಮ ಮನೆಯ ಇನ್ನೊಂದು ಶಕ್ತಿಯನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

Getting Foreign Child Online

Wed Feb 22 , 2023
If you are serious about getting a overseas lover or a snail mail order star of the wedding, you need to do your homework. To start with, you should create a profile on a legit dating site. It is important charm date review to have a apparent and genuine description […]

Advertisement

Wordpress Social Share Plugin powered by Ultimatelysocial