ರಾಜಕೀಯ ಪ್ರವೇಶಿಸಿ ಹೆಚ್ ಡಿಕೆಗೆ ಉತ್ತರ ನೀಡುತ್ತೇನೆ

ರಾಜಕೀಯ ಪ್ರವೇಶಿಸಿ ಹೆಚ್ ಡಿಕೆಗೆ ಉತ್ತರ ನೀಡುತ್ತೇನೆ: ಡಾ.ಕೆ.ಮಹದೇವ್

ಬೆಂಗಳೂರು : ಒಕ್ಕಲಿಗರ ಸಂಘದ ಚುನಾವಣೆಯ ನಿರ್ದೇಶಕರ ಚುನಾವಣೆಯಲ್ಲಿ ಪರಾಜಿತರಾಗಿರುವ ಡಾ. ಕೆ ಮಹದೇವ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ರಾಜಕೀಯ ಪ್ರವೇಶಿಸಿ ಉತ್ತರ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘಕ್ಕೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕಾರಣ ಎಂದು ಪರಾಜಿತ ಅಭ್ಯರ್ಥಿ ಡಾ ಕೆ ಮಹದೇವ್ ಗಂಭೀರ ಆರೋಪ ಮಾಡಿದ್ದಾರೆ.

ನನಗೆ ಏಳು ಸಾವಿರ ಮತದಾರರ ಬೆಂಬಲ ಇರುವುದನ್ನು ಅರಿತುಕೊಂಡು ಶಾಸಕ ಸಾ. ರಾ. ಮಹೇಶ್ ನಗರಪಾಲಿಕೆ ಸದಸ್ಯ ಶ್ರೀಧರ್ ಗೆ ನನ್ನ ಬೆಂಬಲ ಕೋರಿದರು.ನಮ್ಮ ತಂಡಕ್ಕೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು‌. ಆದರೆ ಚುನಾವಣೆಗೆ ಮೂರು ದಿನಗಳು ಬಾಕಿ ಇರುವಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ವೀಡಿಯೋ ಸಂದೇಶ ಬಿಡುಗಡೆ ಮಾಡಿದರು. ಅದರಲ್ಲಿ ಕೆ.ವಿ. ಶ್ರೀಧರ್, ಡಾ ಮಂಜೇಗೌಡ, ಸತೀಶ್ ಗೌಡ ಪರವಾಗಿ ಮತಯಾಚನೆ ಮಾಡಿದ್ದಾರೆ. ಇದೇ ಕಾರಣದಿಂದ ನಾನು ಸೋತಿದ್ದೇನೆ ಎಂದರು.

ಜೆಡಿಸ್ ನವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಜೆಡಿಸ್ ಅಭ್ಯರ್ಥಿಗಳನ್ನೇ ಚುನಾವಣೆಗೆ ನಿಲ್ಲಿಸಬಹುದಿತ್ತು.ಆ ತಾಕತ್ತು ಕುಮಾರಸ್ವಾಮಿ ಅವರಿಗೆ ಇದೆಯಾ? ಇದ್ದರೆ ಈಗಲೂ ಅವನಿಗೆ ರಾಜೀನಾಮೆ ಕೊಡಿಸಿ ಜೆಡಿಎಸ್ ಅಭ್ಯರ್ಥಿಯಾಗಿ ನಿಲ್ಲಿಸಿ.ನಂತರ ಅದರ ಪರಿಣಾಮವನ್ನು ನೋಡಿ.
ಈ ರೀತಿ ಕತ್ತು ಕುಯ್ಯುವ ಕೆಲಸವನ್ನು ನಿಲ್ಲಿಸಿ. ಇದು ನಿಮಗೆ ಶೋಭೆ ತರುವುದಿಲ್ಲ.ನಿಮ್ಮನ್ನು ದೇವರು ಕೂಡ ಕ್ಷಮಿಸುವುದಿಲ್ಲ.ನಿಮ್ಮ ಮಕ್ಕಳಿಗೂ ಒಳ್ಳೆಯದಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

Please follow and like us:

Leave a Reply

Your email address will not be published. Required fields are marked *

Next Post

ಕುಂಬ್ಳೆಯನ್ನು ಕಿತ್ತೊಗೆದಿದ್ದಕ್ಕೆ ಕೊಹ್ಲಿಗೆ ಇಂದು ತಕ್ಕ ಶಾಸ್ತಿಯಂತೆ!

Fri Dec 17 , 2021
ಮುಂಬೈ: 2017 ರಲ್ಲಿ ಅನಿಲ್ ಕುಂಬ್ಳೆ ಜೊತೆಗೆ ವೈಮನಸ್ಯ ಮಾಡಿಕೊಂಡಿದ್ದ ವಿರಾಟ್ ಕೊಹ್ಲಿ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು. ಅದೇ ಕೊಹ್ಲಿ ಇಂದೀಗ ಸೀಮಿತ ಓವರ್ ಗಳ ನಾಯಕತ್ವ ಕಳೆದುಕೊಂಡಿದ್ದಾರೆ. ಈ ವೇಳೆ ಕೆಲವು ಅಭಿಮಾನಿಗಳು ಕೊಹ್ಲಿಗೆ ಅಂದಿನ ಘಟನೆಯನ್ನು ನೆನಪಿಸಿದ್ದಾರೆ. ಅಂದು ಅನಿಲ್ ಕುಂಬ್ಳೆಯನ್ನು ನಿಮಗೆ ಇಷ್ಟವಾಗಿಲ್ಲ ಎಂಬ ಕಾರಣಕ್ಕೆ ನಿಮ್ಮ ಅಧಿಕಾರ ಉಪಯೋಗಿಸಿ ಕಿತ್ತೊಗೆದಿರಿ. ಇಂದು ಅದೇ ಸ್ಥಿತಿ ನಿಮಗೆ ಬಂದಿದೆ ಎಂದು ಕೆಲವರು ಸಾಮಾಜಿಕ […]

Advertisement

Wordpress Social Share Plugin powered by Ultimatelysocial