ರಾಜ್ಯದಲ್ಲಿ ಈಗ ‘ಹಲಾಲ್ ಸಮರ’: ‘ಮುಸ್ಲೀಂ ವರ್ತಕ’ರಿಂದ ‘ಮಾಂಸ ಖರೀದಿ’ಸದಂತೆ ಅಭಿಯಾನ

ಬೆಂಗಳೂರು: ಯುಗಾದಿ ಹಿಂದೂಗಳಿಗೆ ಹೊಸವರ್ಷ. ಯುಗಾದಿಯ ಸಂದರ್ಭದಲ್ಲಿ ಮಾಂಸಹಾರದ ಅಡುಗೆಯ ಊಟವೇ ಹೊಸತೊಡಕು ಆಚರಣೆ. ಈ ಸಂದರ್ಭದಲ್ಲಿ ಮುಸ್ಲೀಂ ಸಮುದಾಯದ ಮಾಂಸದ ಅಂಗಡಿಯವರು ಮಾಂಸವನ್ನು ಅಲ್ಲಾಗೆ ಅರ್ಪಿಸಿರುತ್ತಾರೆ. ಅವರಿಂದ ಮಾಂಸ ಖರೀದಿಸಬೇಡಿ ಎಂಬುದಾಗಿ ಹಿಜಾಬ್, ವ್ಯಾಪಾರದ ಬಳಿಕ ಈಗ ಹಲಾಲ್ ಸಮರ ಶುರುವಾಗಿದೆ.ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಅಭಿಯಾನವನ್ನೇ ಆರಂಭಿಸಲಾಗಿದೆ. ಮುಸ್ಲೀಂ ಮಾಂಸದ ವ್ಯಾಪಾರಿಗಳು ಕುರಿ, ಕೋಳಿ, ಮೇಕೆಯನ್ನು ಕಡಿಯೋ ಮೊದಲು ಅಲ್ಲಾಗೆ ಅರ್ಪಿಸಿ, ಹಲಾಲ್ ಮಾಡಿರುತ್ತಾರೆ. ಈ ಮಾಂಸವನ್ನು ಅಲ್ಲಾಗೆ ಅರ್ಪಿಸಿದಂತೆ ಆಗಲಿದೆ. ಹೀಗಾಗಿ ಯಾರೂ ಹಿಂದೂಗಳು ಮುಸ್ಲೀಂ ವರ್ತಕರಿಂದ ಮಾಂಸ ಖರೀದಿಸದಂತೆ ಒತ್ತಾಯಿಸಲಾಗಿದೆ.ವಿಹೆಚ್ ಪಿ ಮುಖಂಡ ಮೋಹನ್ ಗೌಡ ಮಾತನಾಡಿ, ಹಿಂದೂಗಳ ಹೊಸ ವರ್ಷದ ಯುಗಾದಿ ಸಂದರ್ಭದಲ್ಲಿ ವರ್ಷತೊಡಗು ವೇಳೆ, ಯಾರು ಮುಸ್ಲೀಂ ಮಾಂಸದ ಅಂಗಡಿಗಳಿಂದ ಮಾಂಸ ಖರೀದಿಸದಂತೆ ಅಭಿಯಾನ ಆರಂಭಿಸಲಾಗಿದೆ. ಅವರು ನೀಡುವಂತ ಮಾಂಸ ಹಲಾಲ್ ಮಾಡಿದಂತದ್ದು, ಅಲ್ಲಾಗೆ ಅರ್ಪಿಸಿದಂತ ಮಾಂಸ ಹಿಂದೂಗಳು ಖರೀದಿಸಬಾರದು ಎಂದಿದ್ದಾರೆ. ಈ ಮೂಲಕ ವ್ಯಾಪಾರ ಬ್ಯಾನ್ ಆಯ್ತು.. ಈಗ ಹಲಾಲ್ ಸಂಗ್ರಾಮ ರಾಜ್ಯದಲ್ಲಿ ಶುರುವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ನಿರ್ವಹಣೆ ಕೊರತೆ; ಸ್ವಚ್ಛತೆ ಮಾಯ

Tue Mar 29 , 2022
ಕಮಲನಗರ: ಎಲ್ಲೆಂದರಲ್ಲಿ ಹಂದಿ ಓಡಾಟಗಳಿಂದ ಚೆಲ್ಲಾಡಿದ ತ್ಯಾಜ್ಯ. ಚರಂಡಿ ದುರ್ನಾತ, ಸೊಳ್ಳೆಗಳ ಹಾವಳಿ, ಮೂತ್ರಾಲಯಗಳ ಕೊರತೆ, ಅಲ್ಲಲ್ಲಿ ಬಯಲು ಶೌಚಾಲಯ. ಇಲ್ಲಿನ ಅಲ್ಲಮಪ್ರಭು ವೃತ್ತ ಬಳಿಯ ಸೋನಾಳ ರಸ್ತೆಗೆ ಹೊಂದಿಕೊಂಡಿರುವ ವಿವಿಧ ಸ್ಥಳಗಳಲ್ಲಿ ಕಂಡು ಬರುವ ಚಿತ್ರಣವಿದು.ಮೂಲ ಸವಲತ್ತುಗಳ ಕೊರತೆ ಯಿಂದ ಕಮಲನಗರ ಅಂದಗೆಟ್ಟಿದೆ. ಇದರಿಂದಾಗಿ ಜನಾರೋಗ್ಯಕ್ಕೆ ಕುತ್ತು ತಂದಿದೆ. ಪಟ್ಟಣದ ಬಸ್ ತಂಗುದಾಣ ಬಳಿ ಸಾರ್ವಜನಿಕ ಶೌಚಾಲಯ, ಹೋಟೆಲ್‌ಗಳಿಂದ ಬರುವ ತ್ಯಾಜ್ಯ ನೀರು, ಕೊಳೆತ ತರಕಾರಿ ಬಿಸಾಡುವುದರಿಂದ ಸ್ವಚ್ಛತೆಗೆ ಸವಾಲಾಗಿ […]

Advertisement

Wordpress Social Share Plugin powered by Ultimatelysocial