ನಗರದ ಸುತ್ತಮುತ್ತಲಿನ ಹೃದಯ ಭಾಗಗಳಲ್ಲಿ ರಾಮಧೂತ ಚಲನಚಿತ್ರ ಶ್ರೀ ಅಣ್ಣಮ್ಮ ದೇವಿ ಸಿನಿ ಕಂಬೈನ್ಸ್ ಮೂಲಕ ಪಂಚ ಭಾಷೆಗಳಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿ ಕೊನೆಯ ಹಂತ ತಲುಪಿದೆ.
ರಾಮ ಧೂತ ಚಿತ್ರದ ಚಿತ್ರೀಕರಣವೂ ದೇಶ ವಿದೇಶಗಳಲ್ಲಿ ಪೂರ್ಣಗೊಂಡಿದೆ. ಕೋಲಾರ ನಗರದ ಪ್ರಾಮುಖ ಸ್ಥಳಗಳಲ್ಲಿ ರಾಮದೂತ ಚಿತ್ರವೂ ೧೦ ದಿನಗಳ ಕಾಲ ಚಿತ್ರೀಕರಣ ನಡೆದಿದೆ.ಉದಯೋನ್ಮುಖ ನಾಯಕ ನಟ ಕೋಲಾರದ ಶಬರೀಶ್ಶೆಟ್ಟಿ, ನಾಯಕಿ ನಟಿಯರಾದ ವಿರಾನಿಕಾ ಶೆಟ್ಟಿ, ಹಾಗೂ ಸೋನಾಮ್, ಚಿತ್ರದ ನಿರ್ದೇಶಕ ಮಂಜು ಪ್ರೀತಮ್, ಕಲಾವಿದರಾದ ಉಗ್ರಂ ರವಿ, ಅವಿನಾಶ್ ಮುಂತಾದವರು ಇದ್ದಾರೆ.ನಗರದ ಕುವೆಂಪು ಉದ್ಯಾನವನದಲ್ಲಿ ರಾಮದೂತ ಚಿತ್ರೀಕರಣದ ವೇಳೆಯಲ್ಲಿ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಚತ್ರದ ನಟಿಯೊಂದಿಗೆ ಸೆಲ್ಪಿಗಾಗಿ ಮುಗಿ ಬಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada