ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿರುವ ಸುದ್ದಿ ಜಗಜ್ಜಾಹೀರಾಗಿದೆ. ಸದ್ಯ ಎಲ್ಲೆಲ್ಲೂ ಸಲ್ಮಾನ್ ಖಾನ್ ಅವರ ಆರೋಗ್ಯದ ಬಗ್ಗೆಯೇ ಚರ್ಚೆ ಆಗುತ್ತಿದೆ. ಅದರಲ್ಲೂ ಇಂದು ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬ ಹಾಗಾಗಿ ಸಲ್ಲುಗೆ ಏನಾಗಿದೆ ಎನ್ನುವ ಬಗ್ಗೆ ಅವರ ಅಭಿಮಾನಿಗಳಿಗೆ ಚಿಂತೆ ಆಗಿತ್ತು.
ಸದ್ಯ ಸಲ್ಮಾನ್ ಖಾನ್ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ.
ಹಾವು ಕಚ್ಚಿದೆ ಎಂದರೆ ಅದು ಸಣ್ಣ ವಿಚಾರ ಅಲ್ಲ. ಎಷ್ಟೋ ಮಂದಿ ಹಾವು ಕಚ್ಚಿದಾಗ ಪ್ರಾಣ ಬಿಟ್ಟ ಉದಾಹರಣೆಗಳು ಇವೆ. ಆದರೆ ಸಲ್ಲುಗೆ ಯಾವುದೇ ದೊಡ್ಡ ಅಪಾಯ ಆಗಿಲ್ಲ. ಚಿಕಿತ್ಸೆ ಪಡೆದು ಸಲ್ಲು ಗುಣಮುಖರಾಗಿದ್ದಾರೆ. ಇನ್ನು ಸಲ್ಲು ಈ ಘಟನೆ ಬಗ್ಗೆ ಬೇಸರ ಮಾಡಿಕೊಂಡಿಲ್ಲ. ಸಂತಸದಿಂದಲೇ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.
ಅದರಲ್ಲೂ ಇಂದು (ಡಿಸೆಂಬರ್ 27) ನಟ ಸಲ್ಮಾನ್ ಖಾನ್ ಹುಟ್ಟುಹಬ್ಬ. ಹಾಗಾಗಿ ಸಲ್ಲು ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗಿ ಆಗುತ್ತಾರೋ ಇಲ್ಲವೋ ಎನ್ನುವ ಆತಂಕ ಮನೆ ಮಾಡಿತ್ತು. ಸದ್ಯ ಸಲ್ಮಾನ್ ಖಾನ್ ಆಸ್ಪತ್ರೆಯಿಂದ ಹೊರ ಬಂದಿದ್ದು, ಹುಟ್ಟು ಹಬ್ಬದ ಸಂಭ್ರಮಕ್ಕೆ ಅಣಿ ಆಗಿದ್ದಾರೆ.
ನನಗೆ 3 ಬಾರಿ ಕಚ್ಚಿತು ಆ ಹಾವು: ನಟ ಸಲ್ಮಾನ್ ಖಾನ್!ಆಸ್ಪತ್ರೆಯಿಂದ ಬಂದ ಬಳಿಕ ಸಲ್ಮಾನ್ ಖಾನ್ ಹಾವು ಕಚ್ಚಿದ ಘಟನೆ ಬಗ್ಗೆ ಮಾತನಾಡಿದ್ದಾರೆ. “ಆ ಘಟನೆ ಏನು ದೊಡ್ಡದಾಗಿಲ್ಲ. ಪನ್ವೇಲ್ನಲ್ಲಿ ಇರುವ ನಮ್ಮ ತೋಟದ ಮನೆ ಕಾಡಿನಲ್ಲಿ ಇರುವ ಹಾಗೆ ಇದೆ. ಅಲ್ಲಿನ ಒಂದು ರೂಮಿನ ಒಳಗೆ ಹಾವು ಬಂದಿದೆ. ಆಗ ಮಕ್ಕಳೆಲ್ಲ ಕಿರುಚಾಡಿದರು. ಹಾಗಾಗಿ ನಾನು ಅಲ್ಲಿಗೆ ಹೋಗಿ ನೋಡಿದೆ. ಅಲ್ಲಿ ಹಾವಿತ್ತು. ನಾನು ಒಂದು ಕೋಲನ್ನು ಕೇಳಿದೆ. ಹಾವನ್ನು ಕೋಲಿನಲ್ಲಿ ಎತ್ತಿಕೊಂಡು ಪ್ರೀತಿಯಿಂದಲೇ ಹೊರಗೆ ಬಂದೆ. ಆಗ ಆ ಹಾವು ತಾನಾಗಿಯೇ ಕೋಲಿಗೆ ಸುತ್ತಿಕೊಂಡು ಮೇಲೆ ಹಾರಲು ಯತ್ನಿಸುತ್ತಿತ್ತು. ಅದು ನನ್ನ ಕೈ ಹತ್ತಿರ ಬಂದಿತ್ತು. ಹಾಗಾಗಿ ಕೋಲು ಬಿಸಾಡಿ, ಮತ್ತೊಂದು ಕೈಹಿಂದ ಹಾವನ್ನು ಹಿಡಿದು ಕೊಂಡು, ಕಾಡಿನಲ್ಲಿ ಬಿಡಲು ಮುಂದಾದೆ. ಆಗ ಆ ಹಾವು ನನಗೆ 3 ಬಾರಿ ಕಚ್ಚಿತು. ಅದು ವಿಷ ತುಂಬಿದ ಹಾವು ಆದ ಕಾರಣ 6 ಗಂಟೆಗಳ ಕಾಲ ನಾನು ಆಸ್ಪತ್ರೆಯಲ್ಲಿ ಇರಬೇಕಾಯಿತು”.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: