ಸುಬ್ರಹ್ಮಣ್ಯ: ಹಿಜಾಬ್ ಬಗ್ಗೆ ಎದ್ದಿರುವ ವಿವಾದವು ಬೇಸರ ತಂದಿದೆ. ಭಾರತ ಎಂದಾಗ ಅನೇಕತೆಯಲ್ಲಿ ಏಕತೆಯನ್ನು ತಂದಂತಹ ಜಗತ್ತಿನಲ್ಲೇ ಒಂದು ದೇಶ ನಮ್ಮದು. ಎಲ್ಲರೂ ಒಂದೇ ಎಂಬಂತೆ ಜೀವಿಸುತ್ತಿದ್ದೇವೆ.ಅವರರಲ್ಲಿ ಬೇರಾವುದೇ ಭಾವನೆಗಳು ಬರಬಾರದು. ನಾವೆಲ್ಲ ಒಂದೇ ಎಂಬ ಭಾವನೆ ಬರಬೇಕಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.ಅವರು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮಂಗಳವಾರ ಮಾದ್ಯಮದವರೊಂದಿಗೆ ಮಾತನಾಡಿದರು. ಮಕ್ಕಳಲ್ಲಿ ಇಂತಹ ಭಾವನೆ ಬರಬಾರದು. ಅವರು ಬಿಳಿ ಹಾಳೆ ಇದ್ದಂತೆ ಅವರಿಗೆ ನಾವುಗಳು ಏನು ಹೇಳುತ್ತೇವೆಯೋ ಅದರಂತೆ ಅವರು ನಡೆಯುವುದರಿಂದ ನಾಳೆ ಭಾರತ, ಕರ್ನಾಟಕದ ಭವಿಷ್ಯ ಏನು ಎಂಬ ಬಗ್ಗೆ ಎಲ್ಲರೂ ಚಿಂತಿಸಬೇಕಿದೆ. ಮಕ್ಕಳಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆಂದರೆ ಅದು ನಡೆಯಲೇಬಾರದು. ಅದು ತಪ್ಪು. ಪ್ರಕರಣ ಹೈ ಕೊರ್ಟ್ ನಲ್ಲಿ ಇರುವುದರಿಂದ ಹೆಚ್ಚಿಗೆ ಮಾತನಾಡುವುದಿಲ್ಲ. ಕೋರ್ಟ್ ತೀರ್ಪು ಅಂತಿಮವಾಗಲಿದೆ, ಅದಕ್ಕೆ ಬದ್ಧರಾಗಿರಬೇಕಿದೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada