ಬನ್ನಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್​;

ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು.ಅಲ್ಲು ಅರ್ಜುನ್ ಅಭಿನಯದ ಸುಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ಪುಷ್ಪ’ ಡಿಸೆಂಬರ್ 17, 2021 ರಂದು ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದರು.ಇದೀಗ ಪುಷ್ಪ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಸಿನಿಮಾದ ಸೀಕ್ವೆಲ್ ಶೂಟಿಂಗ್ ನಡೆಯುತ್ತಿದ್ದು ಬನ್ನಿ ಫುಲ್ ಬ್ಯುಸಿ ಆಗಿದ್ದಾರೆ. ಈ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದಲ್ಲಿ ಅಲ್ಲು ಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಫೋಟೋ: ಟ್ವಿಟರ್ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಮತ್ತೊಮ್ಮೆ ಪುಷ್ಪರಾಜ್​ನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕೂಡ ಕಾಯ್ತಿದ್ದಾರೆ. ಇದೀಗ ಬ್ರೇಕಿಂಗ್ ನ್ಯೂಸ್ ಹೊರಬಂದಿದೆ. ಅಲ್ಲು ಅರ್ಜುನ್ ಬಿಗ್ ಪ್ರಾಜೆಕ್ಟ್ ನಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ.ನಿರ್ದೇಶಕ ವೇಣು ಶ್ರೀರಾಮ್ ಈ ಹಿಂದೆ ಅಲ್ಲು ಅರ್ಜುನ್ ಜೊತೆ ಸಿನಿಮಾ ಅನೌನ್ಸ್ ಮಾಡಿದ್ದು ಗೊತ್ತೇ ಇದೆ. ಪುಷ್ಪ ಚಿತ್ರಕ್ಕೂ ಮುನ್ನವೇ ವೇಣು ಈ ಸಿನಿಮಾವನ್ನು ಘೋಷಿಸಿದ್ದರು. ಈ ಚಿತ್ರಕ್ಕೆ ಐಕಾನ್ ಎಂದು ಟೈಟಲ್ ಫಿಕ್ಸ್ ಕೂಡ ಮಾಡಿದ್ರು.ಪುಷ್ಪ ಸಿನಿಮಾಗಾಗಿ ಬನ್ನಿ ಸುಕುಮಾರ್ ಜೊತೆ ಕೈ ಜೋಡಿಸಿದ್ರು. ಪುಷ್ಪ ಪಾರ್ಟ್ ಒನ್ ಸಿನಿಮಾ ಬಳಿಕ ಅಲ್ಲು ಅರ್ಜುನ್ ಅವರ ಐಕಾನ್ ಚಿತ್ರ ಸೆಟ್ಟೇರಲಿದೆ ಎಂದು ಭಾವಿಸಿದ್ದರು. ಆದ್ರೆ ಎಲ್ಲಾ ಉಲ್ಟಾ ಆಗಿದೆ. ಪುಷ್ಪ ಪಾರ್ಟ್ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಬ್ಯುಸಿ ಆಗಿದ್ದಾರೆ.ಆದರೆ ಪುಷ್ಪಾ ನಂತರ ಬನ್ನಿ ಐಕಾನ್ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈಗ ಅಲ್ಲು ಅರ್ಜುನ್ ಚಿತ್ರದಿಂದ ಹೊರನಡೆದಿದ್ದಾರೆ ಎಂದು ವರದಿಯಾಗಿದೆ. ಈಗ ಈ ಸುದ್ದಿ ವೈರಲ್ ಆಗುತ್ತಿದೆ.ವೇಣು ಶ್ರೀರಾಮ್ ಅವರ ಬಹು ನಿರೀಕ್ಷಿತ ಪ್ರಾಜೆಕ್ಟ್ ‘ಐಕಾನ್’ ನಿಂದ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಹೊರನಡೆದಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ. ಬನ್ನಿ ಆರಂಭದಲ್ಲಿ ಚಿತ್ರದ ಬಗ್ಗೆ ಉತ್ಸಾಹರಾಗಿದ್ರು. ಇದೀಗ ಅವರೇ ಈ ಪ್ರಾಜೆಕ್ಟ್​ನಿಂದ ಏಕೆ ಹೊರ ಬಂದಿದ್ದಾರೆ ಎನ್ನುವ ಕಾರಣ ರಿವಿಲ್ ಆಗಿಲ್ಲ..ಈ ಪ್ರಾಜೆಕ್ಟ್ ತಮ್ಮ ಕನಸಿನ ಚಿತ್ರ ಎಂದು ಈ ಹಿಂದೆ ವೇಣು ಶ್ರೀರಾಮ್ ಹೇಳಿದ್ದರು. ಬನ್ನಿ ಚಿತ್ರದಿಂದ ಹೊರಬಂದಿರುವ ಸುದ್ದಿ ನನಗೆ ಆಘಾತ ತಂದಿದೆ ಎಂದಿದ್ದಾರೆ. ಇದೀಗ ನಾಯಕ ಹೊರ ನಡೆದಿದ್ದು, ನಿರ್ದೇಶಕರು ಮತ್ತೊಬ್ಬ ನಟರ ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದಾರೆ.ಇತ್ತೀಚಿನ ವರದಿಗಳ ಪ್ರಕಾರ ಅಲ್ಲು ಅರ್ಜುನ್ ಬದಲಿಗೆ ನ್ಯಾಚುರಲ್ ಸ್ಟಾರ್ ನಾನಿ ಐಕಾನ್​ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ನಾನಿ ಮತ್ತು ವೇಣು ಶ್ರೀರಾಮ್ ಈ ಹಿಂದೆ ಮಾಡಿದ ‘ಎಂಸಿಎ’ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾರ್ ರೇಸರ್ ಆಗಿದ್ದ ವೀಣಾ ಪೊನ್ನಪ್ಪ ಈಗ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ.

Fri Feb 24 , 2023
  ಕಿರುತೆರೆಯ ಹೊಸ ಭಕ್ತಿ ಪ್ರಧಾನ ಧಾರಾವಾಹಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ದಲ್ಲಿರಾಣಿ ಮಂಗಳಾದೇವಿ ಪಾತ್ರದಲ್ಲಿಅಭಿನಯಿಸುತ್ತಿರುವ ನಟಿ ವೀಣಾ ಪೊನ್ನಪ್ಪ ಲುಕ್‌ಗೆ ಕಿರುತೆರೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಶಿವರಾಜ್‌ಕುಮಾರ್‌ ಅಭಿನಯದ ‘ವೇದ’ ಸಿನಿಮಾದಲ್ಲಿಅವರು ನಿರ್ವಹಿಸಿದ ಪೊಲೀಸ್‌ ಪಾತ್ರಕ್ಕೂ ಅಪಾರ ಜನಪ್ರೀತಿ ದೊರೆತಿದೆ.ನಾನು ಅಭಿನಯಿಸುತ್ತಿರುವ ಮೂರನೇ ಪೌರಾಣಿಕ ಧಾರಾವಾಹಿ ಇದು. ‘ಹರಹರ ಮಹಾದೇವ’, ‘ಶ್ರೀ ವಿಷ್ಣು ದಶಾವತಾರ’ ನಂತರ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ನಾನು […]

Advertisement

Wordpress Social Share Plugin powered by Ultimatelysocial