ಸಮಾಜದ ಭವಿಷ್ಯಕ್ಕೆ ಶಿಕ್ಷಣ ಮುಖ್ಯ.

ವಿದ್ಯಾರ್ಥಿಗಳು ತಮ್ಮ ಮತ್ತು ಸಮಾಜದ ಉಜ್ವಲ ಭವಿಷ್ಯಕ್ಕೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಡಾ.ನಿರ್ಮಾಲಾನಂದನಾಥ ಸ್ವಾಮಿಜಿ ಕಿವಿಮಾತು ಹೇಳಿದರು. ಕೆ.ಆರ್.ಪುರದ ಕೇಂಬ್ರಿಡ್ಜ್ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರುವಿದ್ಯಾರ್ಥಿಗಳು ತಮ್ಮ ೨೫ವರ್ಷದ ಜೀವನವನ್ನು ಕಲಿಕೆ ಗೆ ಮುಡಿಪಾಗಿಡಬೇಕು ಆ ಮೂಲಕ ಮುಂದಿನ ಜೀವನವನ್ನು ಯಶಸ್ವಿಯಾಗಿ ಮುನ್ನೆಡೆಸಬಹುವುದು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ದೇಸೆಯಲ್ಲಿ ಮಾಡುವ ಕಾರ್ಯಗಳು ಹಾಗೂ ಯೋಜನೆಗಳು ನಿಮ್ಮನ್ನು ಉನ್ನತ ಸ್ಥಾನಕ್ಕೆ ತಲುಪಿಸುತ್ತದೆ ಎಂದು ಹೇಳಿದರು.ಕೇಂಬ್ರಿಡ್ಜ್ ವಿದ್ಯಾಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತಿದ್ದು, ಸಮಾಜಕ್ಕೆ ಮತ್ತಷ್ಟು ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೇಂಬ್ರಿಡ್ಜ್ ಸಂಸ್ಥೆಯ ಅಧ್ಯಕ್ಷ ಡಿ.ಕೆ.ಮೋಹನ್ ಅವರು ಡಾ.ನಿರ್ಮಾಲಾನಂದನಾಥ ಸ್ವಾಮಿಜಿಗಳ ಆಗಮನ ಹೆಚ್ಚು ಉತ್ಸಾಹ ತರಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸಗಳನ್ನು ಮಾಡಲಾಗುವುದೆಂದು ಹೇಳಿದರು. ಈ ಸಂದರ್ಭದಲ್ಲಿ ಗೋಪಾಲ್, ದೇವೆಂದ್ರ,ರಮೇಶ್,ಮಂಜುರಾಜ್,ಪುಟ್ಟರಾಜು,ಬೊಮ್ಮನಹಳ್ಳಿ ಮುನಿರಾಜು ಸೇರಿದಂತೆ ಮತ್ತಿತರರು ಇದ್ದರು.ಕೆ.ಆರ್.ಪುರದ ಕೇಂಬ್ರಿಡ್ಜ್ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಡಾ.ನಿರ್ಮಾಲಾನಂದನಾಥ ಸ್ವಾಮಿಜಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಿ.ಕೆ.ಮೋಹನ್ ಅವರ ಕುಟುಂಬದ ಸದಸ್ಯರು ಪಾದಪೂಜೆ ಮಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಟಿಟಿಗೆ ಬರ್ತಿದೆ ಧನುಷ್ ಲೇಟೆಸ್ಟ್ ಸಿನಿಮಾ.

Wed Feb 22 , 2023
ಧನುಷ್ ಅಭಿನಯದ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರತಿಕ್ರಿಯೆ ಗಳಿಸಿದೆ.ಧನುಷ್ ಇತ್ತೀಚೆಗೆ ವೆಂಕಿ ನಿರ್ದೇಶನದ ದ್ವಿಭಾಷಾ ಸಿನಿಮಾ ಮಾಡಿದ್ದಾರೆ. ತಮಿಳಿನಲ್ಲಿ ‘ವಾತಿ’ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿತ್ತುತೆಲುಗಿನಲ್ಲಿ ‘ಸಾರ್’ ಎಂಬ ಟೈಟಲ್​ನೊಂದಿಗೆ ಬಿಡುಗಡೆಯಾಗಿದೆ. ಟ್ರೈಲರ್ ಮತ್ತು ಟೀಸರ್‌ಗಳಿಂದ ಪ್ರಭಾವಿತವಾಗಿರುವ ಈ ಚಿತ್ರವು ಉತ್ತಮ ನಿರೀಕ್ಷೆಗಳ ನಡುವೆ ಫೆಬ್ರವರಿ 17 ರಂದು ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಗಳಿಸಿದೆ..ವಿಶ್ವಾದ್ಯಂತ 20 ಕೋಟಿ ಗಳಿಕೆ ಮಾಡಿದೆ ಈ ಸಿನಿಮಾ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಲೆಕ್ಷನ್ […]

Advertisement

Wordpress Social Share Plugin powered by Ultimatelysocial