ಹವಾಮಾನ ವೈಪರಿತ್ಯದಿಂದ ಅತ್ಯಂತ ಅಪಾಯ ಸ್ಥಿತಿಯಲ್ಲಿರುವ ವಿಶ್ವದ 100 ನಗರಗಳ ಪಟ್ಟಿಯಲ್ಲಿ ಭಾರತದ 14 ರಾಜ್ಯಗಳು ಸ್ಥಾನ ಪಡೆದಿವೆ.
ದೇಶದ ಅತ್ಯಂತ ಸದೃಢ ಹಾಗೂ ಅರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹಾಗೂ ಅತೀ ಹರಚ್ಚು ಜನಸಂಖ್ಯೆ ಹೊಂದಿರುವ ಕರ್ನಾಟಕ, ತಮಿಳುನಾಡು, ಮಹಾರಾಷ್ಡ್ರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳು ಹವಾಮಾನ ವೈಪರಿತ್ಯದ ದುಷ್ಪರಿಣಾಮಗಳನ್ನು ಎದುರಿಸುವ ಭೀತಿಯಲ್ಲಿವೆ.
ಹವಾಮಾನ ವೈಪರಿತ್ಯದಿಂದ ಪ್ರವಾಹ ಸೇರಿದಂತೆ ವಿವಿಧ ಪ್ರಾಕೃತಿಕ ವಿಕೋಪಗಳಿಗೆ ಜಗತ್ತಿನ 100 ದೇಶಗಳಲ್ಲಿ ಕೋಟ್ಯಂತರ ಜನರ ಜೀವನ ಅಪಾಯಕ್ಕೆ ಸಿಲುಕಲಿದೆ ಎಂದು ವರದಿ ಎಚ್ಚರಿಸಿದೆ.
ಅತೀ ಹೆಚ್ಚು ಅಪಾಯದಲ್ಲಿರುವ 100 ರಾಜ್ಯಗಳ ಪಟ್ಟಿಯಲ್ಲಿ ಚೀನಾ ಮತ್ತು ಭಾರತದ ಹೆಚ್ಚು ರಾಜ್ಯಗಳು ಸ್ಥಾನ ಪಡೆದಿವೆ. ಪ್ರತಿ ನಿಮಿಷಕ್ಕೆ 8 ಮಂದಿ ಜಾಗತಿಕ ಮಟ್ಟದಲ್ಲಿ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.
2050ರ ವೇಳೆಗೆ 2600 ಪ್ರದೇಶಗಳಲ್ಲಿ ಪರಿಸರ ಅಭಿವೃದ್ಧಿಗೊಳಿಸಬೇಕಾಗಿದೆ ಎಂದು ಆಸ್ಟ್ರೇಲಿಯಾ ಮೂಲದ ಪರಿಸರ ಕಂಪನಿ ಸಮೀಕ್ಷೆಯಲ್ಲಿ ವಿವರಿಸಿದೆ.
ಹವಾಮಾನ ವೈಪರಿತ್ಯದಿಂದ ಪ್ರಾಕೃತಿಕ ವಿಕೋಪದ ಭೀತಿ ಎದುರಿಸುತ್ತಿರುವ ಭಾರತದ 14 ರಾಜ್ಯಗಳಲ್ಲಿ ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಬಿಹಾರ, ಮಹಾರಾಷ್ಟ್ರ, ಅಸ್ಸಾಂ, ರಾಜಸ್ಥಾನ, ಗುಜರಾತ್, ಪಂಜಾಬ್, ಕೇರಳ, ಮಧ್ಯಪ್ರದೇಶ, ಪಶ್ವಿಮ ಬಂಗಾಳ, ಹರಿಯಾಣ, ಆಂಧ್ರಪ್ರದೇಶ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada